ರವಿಬೆಳೆಗೆರೆ-ದರ್ಶನ್-ವಿಜಯ್ 
ಸಿನಿಮಾ ಸುದ್ದಿ

'ಬಡವ ರಾಸ್ಕಲ್' ಸುದ್ದಿಗೋಷ್ಠಿ: ಪತ್ರಕರ್ತ ರವಿ ಬೆಳೆಗೆರೆ ವಿರುದ್ಧ ಕಿಡಿಕಾರಿದ ಕರಿಚಿರತೆ ವಿಜಯ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ವೈಯಕ್ತಿಕ ಜೀವನದ ವಿರುದ್ದ ಮಾತನಾಡಿದ್ದ ಹಿರಿಯ ಪತ್ರಕರ್ತ ರವಿಬೆಳೆಗೆರೆ ಅವರನ್ನು ನಟ ದುನಿಯಾ ವಿಜಯ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ವೈಯಕ್ತಿಕ ಜೀವನದ ವಿರುದ್ದ ಮಾತನಾಡಿದ್ದ ಹಿರಿಯ ಪತ್ರಕರ್ತ ರವಿಬೆಳೆಗೆರೆ ಅವರನ್ನು ನಟ ದುನಿಯಾ ವಿಜಯ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. 

ಬಡವ ರಾಸ್ಕಲ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಚಿತ್ರಕ್ಕೆ ಶುಭಕೋರಿದ ದುನಿಯಾ ವಿಜಯ್ ರವಿ ಬೆಳೆಗೆರೆ ವಿಚಾರವಾಗಿ ಮಾತನಾಡಿದ್ದು ಮೊದಲ ಆತ ತಮ್ಮ ಕುಟುಂಬ ನೆಟ್ಟಗಿದೆಯಾ ಎಂಬುದನ್ನು ನೋಡಿಕೊಳ್ಳಲಿ ಎಂದರು.

ರವಿ ಬೆಳೆಗೆರೆಗೆ ಇಬ್ಬರು ಹೆಂಡತಿಯರು. ಮೊದಲು ತಮ್ಮ ಕುಟುಂಬ ನೆಟ್ಟಗಿದೆಯಾ ಎಂದು ನೋಡಿಕೊಳ್ಳಲಿ. ಆಮೇಲೆ ದರ್ಶನ್ ಆಗಲಿ, ನಮ್ಮ ಬಗ್ಗೆಯಾಗಲಿ ಮಾತನಾಡಲಿ. ಆರು ತಿಂಗಳು ಆಸ್ಪತ್ರೆಲಿ ಬಿದ್ದಿರುತ್ತಾನೆ. ಇನ್ನೂ ಬದುಕಿದ್ದಾನಾ ಅವನು? ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ. 

ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದ ರವಿಬೆಳೆಗೆರೆ ದರ್ಶನ್ ಮತ್ತು ವಿಜಯ್ ವಿರುದ್ಧ ಮಾತನಾಡಿದ್ದರು. ದುನಿಯಾ ವಿಜಯ್ ಬ್ಲ್ಯಾಕ್ ಕೋಬ್ರಾ ಅಲ್ಲ ಕರಿ ಗೊಬ್ಬರ. ಎಷ್ಟು ಜನರನ್ನು ಮದುವೆಯಾಗುತ್ತೀಯಾ? ಮದುವೆ ಮಾಡಿಕೊಂಡು ಹೆಂಡತಿಯನ್ನು ಬಿಡುತ್ತಾನೆ. ಮತ್ತೊಬ್ಬಳನ್ನು ಕಟ್ಟಿಕೊಳ್ಳುತ್ತಾನೆ. ಇವನು ಜೈಲು ಗಿರಾಕಿನೇ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT