ಮೈಸೂರು ಡೈರೀಸ್ ನ ಹಾಡಿನ ಒಂದು ದೃಶ್ಯ 
ಸಿನಿಮಾ ಸುದ್ದಿ

ಮೈಸೂರು ಅರಮನೆಯ ವೈಭವ ಸೆರೆಹಿಡಿದ 'ಮೈಸೂರು ಡೈರೀಸ್'

ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಗೀತರಚನೆಕಾರ, ಚಿತ್ರಕಥೆಗಾರ ಮತ್ತು ನಟ ಧನಂಜಯ್ ರಂಜನ್ ಮೈಸೂರು ಡೈರೀಸ್ ಮೂಲಕ ನಿರ್ದೇಶಕರಾಗಿದ್ದಾರೆ. 

ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಗೀತರಚನೆಕಾರ, ಚಿತ್ರಕಥೆಗಾರ ಮತ್ತು ನಟ ಧನಂಜಯ್ ರಂಜನ್ ಮೈಸೂರು ಡೈರೀಸ್ ಮೂಲಕ ನಿರ್ದೇಶಕರಾಗಿದ್ದಾರೆ. 


ಪ್ರಭು ಮುಂಡುಕೂರು ಮತ್ತು ಪವನ್ ಗೌಡ ಮುಖ್ಯ ಪಾತ್ರದಲ್ಲಿರುವ ಮೈಸೂರು ಡೈರೀಸ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇಂದು ಚಿತ್ರದ ಮೊದಲ ಸಾಹಿತ್ಯದ ವಿಡಿಯೊ ಬಿಡುಗಡೆಯಾಗಲಿದೆ. 


ಹೆಸರೇ ಹೇಳುವಂತೆ ಚಿತ್ರವಿಡೀ ಮೈಸೂರಿನಲ್ಲಿ ಚಿತ್ರೀಕರಣಗೊಂಡಿದ್ದು ದೂರದಿಂದ ಸುರಸುಂದರಾಂಗ ಬಂದ ಎಂಬ ಚರಣ್ ರಾಜ್ ಸಂಗೀತದ ಹಾಡು ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ. ಸುಚಿತ್ ಸುರೇಶನ್ ಮತ್ತು ಧನಿಶ್ ಜಗದೀಶ್ ಟ್ರ್ಯಾಕ್ ಗೀತೆಯನ್ನು ಹಾಡಿದ್ದು ಧನು ಮಾಸ್ಟರ್ ಅವರ ಕೊರಿಯೊಗ್ರಫಿಯಿದೆ.


ಗೆಳೆತನದ ಬಗ್ಗೆ ಇರುವ ಚಿತ್ರದಲ್ಲಿ ಮೈಸೂರಿನ ಅರಮನೆಯನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಸಿಕೆ ಡೈನ್ ಕ್ರಿಯೇಷನ್ಸ್ ಮತ್ತು ಸಮರಥ್ ಎಂಟರ್ಟೈನರ್ಸ್ ನಡಿ ಸುನಂದ ಕೃಷ್ಣಪ್ಪ ಮತ್ತು ದೀಪಕ್ ಕೃಷ್ಣ ಜಂಟಿಯಾಗಿ ನಿರ್ಮಿಸುತ್ತಿರುವ ಮೈಸೂರು ಡೈರಿಸ್ ನಲ್ಲಿ ಧನಂಜಯ್ ನಿರ್ದೇಶನ ಮಾತ್ರವಲ್ಲದೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಕ್ಯಾಮರಾ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಶಕ್ತಿ ಶೇಖರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT