'ಕಬ್ಜ' ಜೊತೆಗೆ ಹೊಸ ಆರಂಭಿಸಲಿರುವ ರಿಯಲ್ ಸ್ಟಾರ್ 
ಸಿನಿಮಾ ಸುದ್ದಿ

'ಕಬ್ಜ' ಜೊತೆ ಹೊಸವರ್ಷ ಆರಂಭಿಸಲಿರುವ ರಿಯಲ್ ಸ್ಟಾರ್ ಉಪೇಂದ್ರ

ಕಬ್ಜ ಜೊತೆಗ 2020ರ ಹೊಸ ವರ್ಷವನ್ನು ಆಚರಿಸಲು ರಿಯಲ್ ಸ್ಟಾರ್ ಉಪೇಂದ್ರ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಜನವರಿ 2ರಂದ ಆರಂಭಗೊಳ್ಳಲಿದೆ.

ಕಬ್ಜ ಜೊತೆಗೆ 2020ರ ಹೊಸ ವರ್ಷವನ್ನು ಆಚರಿಸಲು ರಿಯಲ್ ಸ್ಟಾರ್ ಉಪೇಂದ್ರ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಜನವರಿ 2ರಂದ ಆರಂಭಗೊಳ್ಳಲಿದೆ.

ಚಿತ್ರದ ತಂಡ ಚಿತ್ರೀಕರಣಕ್ಕೆ ರಾಮೋಜಿ ಫಿಲ್ಮ್ ಸಿಟಿಯನ್ನು ಆಯ್ಕೆ ಮಾಡಿದ್ದು, ಚಿತ್ರದ ಮೂರ್ತ ಜನವರಿ 2 ರಂದು ನೆರವೇರಲಿದೆ. 

ಚಿತ್ರೀಕರಣವನ್ನು 40 ದಿನಗಳೆಂದು ನಿರ್ಧರಿಸಲಾಗಿದೆ. ಹೈದರಬಾದ್ ಹಾಗೂ ಬೆಂಗಳೂರಿನಲ್ಲಿ ಹಾಕಲಾಗಿರುವ ಸೆಟ್ ನಲ್ಲಿಯೇ ಚಿತ್ರೀಕರಣ ನಡೆಯಲಿದೆ. 1947ರಿಂದ 1984ರವರೆಗೆ ನಡೆಯುವ ರೌಡಿಸಂ ಕಥೆ ಇರುವುದರಿಂದ ಈ ಚಿತ್ರದಲ್ಲಿ ಆ ಕಾಲದ ಚಿತ್ರಣ ಮೂಡಿಸಬೇಕಾದರೆ ಸೆಟ್ ಮೊರೆ ಹೋಗಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಅರ್ಧದಷ್ಟು ಸಿನಿಮಾಮ ಹೈದರಾಬಾದ್'ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ನಡೆಯಲಿದೆ. ಇನ್ನುಳಿದ ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್ ಹಾಗೂ ದೇವನಹಳ್ಳಿ ಬಳಿ ಹಾಕಲಾಗುವ ಸೆಟ್ ನಲ್ಲಿ ನಡೆಯಲಿದೆ ಎಂದು ನಿರ್ದೇಶಕ ಆರ್.ಚಂದ್ರು ಹೇಳಿದ್ದಾರೆ. 

ಫೈಟಿಂಗ್ ದೃಶ್ಯಾವಳಿಗಳು ಅವಿನಾಶ್ ಜೊತೆಗೆ ಮೂಡಿಬರಲಿದೆ. ಇನ್ನುಳಿದ ಕಲಾವಿದರು ಚಿತ್ರೀಕರಣ ಆರಂಭವಾದ ಬಳಿಕ ಜೊತೆಗೂಡಲಿದ್ದಾರೆ. ಚಿತ್ರವು ಒಟ್ಟು 7 ಭಾಷೆಘಳಲ್ಲಿ ಮೂಡಬರುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಕಬ್ಜ ತೆರೆ ಕಾಣಲಿದೆ. ಅದರಲ್ಲೂ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನೇರ ನಿರ್ಮಾಣವಾಗಲಿದ್ದು, ಉಳಿದ ಭಾಷೆಗಳಲ್ಲಿ ಡಬ್ ಆಗಿ ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT