ನಟ ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿಯಾಗಿರುವ ಶ್ರೇಯಸ್ ಮಂಜು ಸಂಪತ್ ಕುಮಾರ್ (ವಿಷ್ಣುವರ್ಧನ್ ಮೊದಲ ಹೆಸರು) ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಪಡ್ಡೆಹುಲಿ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೆ.ಮಂಜು ಸಂಪತ್ ಕುಮಾರ್ ಟೈಟಲ್ ಅನ್ನು ನೋಂದಾಯಿಸಿದ್ದಾರೆ. ಸಿನಿಮಾಗಾಗಿ ಕಥೆ ಸಿದ್ಧತೆ ಮಾಡಲಾಗುತ್ತಿದೆ, ಟೈಟಲ್ ಗೆ ಹೊಂದುವಂತೆ ಕಥೆ ರೆಡಿ ಮಾಡಲಾಗುತ್ತಿದೆ.