ಸಿನಿಮಾ ಸುದ್ದಿ

ಯಜಮಾನ ಚಿತ್ರದಲ್ಲಿ ತಾನ್ಯಾ ಹೋಪೆ ಪತ್ರಕರ್ತೆ!

Nagaraja AB

ತಾನ್ಯಾ ಹೋಪೆ ಅಭಿಯನದ ಕನ್ನಡದ ಮೊದಲ ಚಿತ್ರ ಯಜಮಾನದಲ್ಲಿನ ಬಸಣ್ಣಿ ಬಾ ಗೀತೆ ಈಗಾಗಲೇ  ಎಲ್ಲರ ಬಾಯಲ್ಲೂ ಗುಯ್ ಗುಡುತ್ತಿದೆ. ದರ್ಶನ್  ಜೊತೆಗಿನ ಪೆಪ್ಪಿ ಹಾಡಿಗೆ ವಿ. ಹರಿಕೃಷ್ಣ ಸಂಗೀತ  ಸಂಯೋಜಿಸಿದ್ದಾರೆ.

ಬಸಣ್ಣಿ ಅಂತಾ ಕರೆಸಿಕೊಳ್ಳುವುದಕ್ಕೆ ಸಂತೋಷವಾಗುತ್ತಿದೆ ಎನ್ನುವ ತಾನ್ಯಾ, ನೃತ್ಯ ಇಷ್ಟಪಡುವುದಾಗಿ ಹೇಳಿದ್ದಾರೆ.ಸ್ಟೆಪ್ ಹೇಳಿಕೊಟ್ಟ ಕೋರಿಯೋ ಗ್ರಾಪರ್  ಗಣೇಶ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.

ಯಜಮಾನ ಚಿತ್ರದಲ್ಲಿ ಗಂಗಾ ಪಾತ್ರದಲ್ಲಿ ಅಭಿನಯಿಸಿದ್ದು, ನನ್ನದು ಪತ್ರಕರ್ತೆಯ ಪಾತ್ರವಾಗಿದೆ. ಸ್ವತಂತ್ರ ಪತ್ರಕರ್ತೆಯಾಗಿ ದರ್ಶನ್ ಅವರ ಹೋರಾಟಕ್ಕೆ ಸಹಾಯ ಮಾಡುವುದಾಗಿ ತಾನ್ಯಾ ತಿಳಿಸಿದ್ದಾರೆ.

ನಿರ್ದೇಶಕ ವಿ. ಹರಿಕೃಷ್ಣ ಹಾಗೂ ನಿರ್ಮಾಪಕಿ ಶೈಲಾಜಾ ನಾಗ್  ಸೇರಿದಂತೆ ಎಲ್ಲರೂ ಹೊಸಬರನ್ನು ಪ್ರೋತ್ಸಾಹಿಸುತ್ತಾರೆ. ಮೊದಲ ಬಾರಿಗೆ ದರ್ಶನ್ ಅವರ ಎದುರಿಗೆ ಕ್ಯಾಮರಾ ಮುಂದೆ ನಿಂತಾಗ ಎಲ್ಲಾ ಸಾಲುಗಳು ಮರೆತು ಹೋಗಿತ್ತು. ಶಾಂತವಾಗಿ ಇರಲು ಪ್ರಯತ್ನಿಸಿದರೂ ಗೊಂದಲಕ್ಕೊಳಗಾಗುತ್ತಿದೆ. ಕ್ಯಾಮರಾ ನೋಡಿಕೊಂಡು ಸಂಭಾಷಣೆ ಹೇಳುವಂತೆ ಹೇಳಿದರು. ನಂತರ ಸ್ವಲ್ಪ ನಿರಾಳವಾಗುತಿತ್ತು ಎಂದು ತಾನ್ಯಾ ಚಿತ್ರೀಕರಣ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.
SCROLL FOR NEXT