ಕೋಡಿ ರಾಮಕೃಷ್ಣ 
ಸಿನಿಮಾ ಸುದ್ದಿ

ನಾಗರಹಾವು, ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ!

ನಾಗರಹಾವು ಹಾಗೂ ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಹಾಗೂ ನಟ ಕೋಡಿ ರಾಮಕೃಷ್ಣ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಹೈದರಾಬಾದ್: ನಾಗರಹಾವು ಹಾಗೂ ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಹಾಗೂ ನಟ ಕೋಡಿ ರಾಮಕೃಷ್ಣ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 
ಉಸಿರಾಟ ಸಮಸ್ಯೆಯಿಂದ ಗಚಿಬೌಲ್‍ನ ಎಐಜಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದ ರಾಮಕೃಷ್ಣ ಅವರು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 
ಪಶ್ಚಿಮ ಗೋದಾವರಿ ಜಿಲ್ಲೆಯ ಪಾಕಕೋಳ್ಳುನಲ್ಲಿ ಜನಿಸಿದ್ದ ಕೋಡಿ ರಾಮಕೃಷ್ಣ ಅವರು 1982 ರಲ್ಲಿ ಮೊದಲ ಬಾರಿಗೆ 'ಇಂಟ್ಲೋ ರಾಮಾಯ್ಯ ವೀದಿಲೋ ಕೃಷ್ಣಯ್ಯ' ಚಿತ್ರವನ್ನು ನಿರ್ದೇಶನವನ್ನು ನಿರ್ದೇಶಿಸಿದರು. 30 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ, 'ಅಂಜಿ', 'ಭಾರತ್ ಬಂಧ್', 'ಶ್ರೀನಿವಾಸ ಕಲ್ಯಾಣಂ' ಸೇರಿದಂತೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದ್ದಾಗಿದೆ. 
ತೆಲುಗು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಾಗಿ 2012 ರಲ್ಲಿ  'ರಘುಪತಿ ವೆಂಕಯ್ಯ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. 2014 ರಲ್ಲಿ ತೆರೆ ಕಂಡ ಭಕ್ತಿಪ್ರಧಾನ ಚಿತ್ರ 'ಅವತಾರಂ' ರಾಮಕೃಷ್ಣ ನಿರ್ದೇಶನದ ಕೊನೆಯ ಚಿತ್ರವಾಗಿತ್ತು.
ಚಲನಚಿತ್ರ ನಿರ್ದೇಶನ ಮಾತ್ರವಲ್ಲದೆ, ರಾಮಕೃಷ್ಣ ಅವರು, 'ದೊಂಗಾಟ', 'ಆಸ್ತಿ ಮೂರೇಡು, ಆಸಾ  ಬಾರೇಡು', 'ಅತ್ತಗಾರು ಸ್ವಾಗತಂ', 'ಇಂಟಿ ದೊಂಗ' ಮತ್ತು 'ಮೂಡಿಳ್ಳು ಮುಚ್ಚಟಾ' ಮುಂತಾದ ಚಿತ್ರಗಳಲ್ಲೂ ಅಭಿನಯಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT