ಕೋಡಿ ರಾಮಕೃಷ್ಣ 
ಸಿನಿಮಾ ಸುದ್ದಿ

ನಾಗರಹಾವು, ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ!

ನಾಗರಹಾವು ಹಾಗೂ ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಹಾಗೂ ನಟ ಕೋಡಿ ರಾಮಕೃಷ್ಣ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಹೈದರಾಬಾದ್: ನಾಗರಹಾವು ಹಾಗೂ ಅರುಂಧತಿ ಚಿತ್ರ ಖ್ಯಾತಿಯ ನಿರ್ದೇಶಕ ಹಾಗೂ ನಟ ಕೋಡಿ ರಾಮಕೃಷ್ಣ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 
ಉಸಿರಾಟ ಸಮಸ್ಯೆಯಿಂದ ಗಚಿಬೌಲ್‍ನ ಎಐಜಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದ ರಾಮಕೃಷ್ಣ ಅವರು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 
ಪಶ್ಚಿಮ ಗೋದಾವರಿ ಜಿಲ್ಲೆಯ ಪಾಕಕೋಳ್ಳುನಲ್ಲಿ ಜನಿಸಿದ್ದ ಕೋಡಿ ರಾಮಕೃಷ್ಣ ಅವರು 1982 ರಲ್ಲಿ ಮೊದಲ ಬಾರಿಗೆ 'ಇಂಟ್ಲೋ ರಾಮಾಯ್ಯ ವೀದಿಲೋ ಕೃಷ್ಣಯ್ಯ' ಚಿತ್ರವನ್ನು ನಿರ್ದೇಶನವನ್ನು ನಿರ್ದೇಶಿಸಿದರು. 30 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ, 'ಅಂಜಿ', 'ಭಾರತ್ ಬಂಧ್', 'ಶ್ರೀನಿವಾಸ ಕಲ್ಯಾಣಂ' ಸೇರಿದಂತೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದ್ದಾಗಿದೆ. 
ತೆಲುಗು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಾಗಿ 2012 ರಲ್ಲಿ  'ರಘುಪತಿ ವೆಂಕಯ್ಯ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. 2014 ರಲ್ಲಿ ತೆರೆ ಕಂಡ ಭಕ್ತಿಪ್ರಧಾನ ಚಿತ್ರ 'ಅವತಾರಂ' ರಾಮಕೃಷ್ಣ ನಿರ್ದೇಶನದ ಕೊನೆಯ ಚಿತ್ರವಾಗಿತ್ತು.
ಚಲನಚಿತ್ರ ನಿರ್ದೇಶನ ಮಾತ್ರವಲ್ಲದೆ, ರಾಮಕೃಷ್ಣ ಅವರು, 'ದೊಂಗಾಟ', 'ಆಸ್ತಿ ಮೂರೇಡು, ಆಸಾ  ಬಾರೇಡು', 'ಅತ್ತಗಾರು ಸ್ವಾಗತಂ', 'ಇಂಟಿ ದೊಂಗ' ಮತ್ತು 'ಮೂಡಿಳ್ಳು ಮುಚ್ಚಟಾ' ಮುಂತಾದ ಚಿತ್ರಗಳಲ್ಲೂ ಅಭಿನಯಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT