ಸಿನಿಮಾ ಸುದ್ದಿ

ಜಗನ್ ರನ್ನು ಸೋಲಿಸಿ ನಿಮ್ಮ ಭಾವ ನಾಯ್ಡುರನ್ನು ಸಿಎಂ ಮಾಡಿದ್ದು ಪವನ್ ಕಲ್ಯಾಣ್: ಬಾಲಯ್ಯಗೆ ನಾಗಬಾಬು ಟಾಂಗ್

Srinivasamurthy VN
ಹೈದರಾಬಾದ್: ಟಾಲಿವುಡ್ ನಲ್ಲಿ ಎರಡು ಮೆಗಾ ಫ್ಯಾಮಿಲಿಗಳ ನಡುವಿನ ಟಗ್ ವಾರ್ ತಾರಕಕ್ಕೇರಿದ್ದು, ಇದೀಗ ಸಂಘರ್ಷಕ್ಕೆ ಸಂಬಂಧಿಸಿದಂತೆ ಮೆಗಾ ಫ್ಯಾಮಿಲಿಯ ನಾಗಾಬಾಬು ಅವರು ನೀಡಿರುವ ಹೇಳಿಕೆ ವೈರಲ್ ಆಗಿದೆ.
ಟಾಲಿವುಡ್ ನಲ್ಲಿ ಎನ್ ಟಿಆರ್ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ಈ ಹಿಂದೆ ತೆರೆಮರೆಯಲ್ಲಿ ಸಾಗುತ್ತಿದ್ದ ವಾಕ್ಸಮರ ಇದೀಗ ನೇರಾ-ನೇರ ವೈಯುಕ್ತಿಕವಾಗಿ ಪರಸ್ಪರ ಕೆಸರೆರಚಾಟಕ್ಕೆ ತೊಡಗಿದೆ. ಈ ಹಿಂದೆ ಪವನ್ ಕಲ್ಯಾಣ್ ಯಾರು ನನಗೆ ಗೊತ್ತಿಲ್ಲ ಎಂದು ಹೇಳಿದ್ದ ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದ್ದ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಬಾಲಕೃಷ್ಣ ಯಾರು ಎಂದು ತಿಳಿದಿಲ್ಲ ಎಂದು ಹೇಳಿದ್ದರು. ಆ ಬಳಿಕ ಟ್ರೋಲ್ ಗೆ ತುತ್ತಾಗಿ ಮತ್ತೆ ಬಾಲಕೃಷ್ಣ ಮತ್ತು ಅವರ ಅಭಿಮಾನಿಗಳಿಗೆ ಟಾಂಗ್ ನೀಡಿದ್ದ ಅವರು, ಬಾಲಕೃಷ್ಣ ತೆಲುಗು ಸಿನಿಲೋಕದ ದಿಗ್ಗಜ ಹಾಸ್ಯನಟ ಎಂದು ಹೇಳಿದ್ದರು.
ಇದೀಗ ಮತ್ತೆ ನಾಗಬಾಬು ಅವರು ಸುದ್ದಿಗೆ ಗ್ರಾಸವಾಗಿದ್ದು, ಮತ್ತೆ ಬಾಲಕೃಷ್ಣ ಅವರ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ನಡೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವರ್ಚಸ್ಸು ಕಳೆದುಕೊಂಡಿದ್ದ ಟಿಡಿಪಿ ಮತ್ತು ಚಂದ್ರಬಾಬು ನಾಯ್ಡು ಅವರು ಇಂದು ಅಧಿಕಾರದಲ್ಲಿದ್ದಾರೆ ಎಂದರೆ ಅದಕ್ಕೆ ಪವನ್ ಕಲ್ಯಾಣ್ ಕಾರಣ. ಇಂದು ಅವರೇ ಯಾರು ಎಂದು ಬಾಲಕೃಷ್ಣ ಪ್ರಶ್ನಿಸುತ್ತಿದ್ದಾರೆ. ನಿಮ್ಮ ಭಾವ ಅಧಿಕಾರಕ್ಕೇರಲು ಪವನ್ ಕಲ್ಯಾಣ ನಿಮ್ಮ ಪರ ಪ್ರಚಾರ ಮಾಡಿ ಜಗನ್ ಮೋಹನ್ ರೆಡ್ಡಿ ಅವರನ್ನು ಸೋಲಿಸಿ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಕುರ್ಚಿ ದಕ್ಕುವಂತೆ ಮಾಡಿದ್ದರು ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ನಾಗಬಾಬು ಅವರು ಎನ್ ಟಿಆರ್ ಅವರ ಕುರಿತ ಬಯೋಪಿಕ್ ಚಿತ್ರಕ್ಕೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದರು. ಸತ್ಯಾಂಶಗಳಿಲ್ಲದ ಬಯೋಪಿಕ್ ಗಳನ್ನು ಮಾಡದೇ ಸುಮ್ಮನೇ ಇರುವುದೇ ಒಳಿತು ಎಂದು ಪೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದರು. ಇದು ಬಾಲಕೃಷ್ಣ ಮತ್ತು ಅವರ ಅಭಿಮಾನಿಗಳು ವಿರೋಧಕ್ಕೆ ಕಾರಣವಾಗಿದ್ದರು. ನಾಗಬಾಬು ಅವರ ಈ ಹೊಸ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. 
SCROLL FOR NEXT