ಹೇಮಂತ್ ಹಾಗೂ ಸಮೀಕ್ಷಾ 
ಸಿನಿಮಾ ಸುದ್ದಿ

ಹೇಮಂತ್, ಸಮೀಕ್ಷಾ ಅಭಿನಯವೇ '99' ಚಿತ್ರದ ಜೀವಾಳ: ಪ್ರೀತಮ್ ಗುಬ್ಬಿ

ಪ್ರೀತಮ್ ಗುಬ್ಬಿ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ "99" ಚಿತ್ರೀಕರಣ ಕಡಲತೀರದ ನಗರಿಯಲ್ಲಿ ನಡೆಯುತ್ತಿದೆ.

ಬೆಂಗಳೂರು: ಪ್ರೀತಮ್ ಗುಬ್ಬಿ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ "99" ಚಿತ್ರೀಕರಣ ಕಡಲತೀರದ ನಗರಿಯಲ್ಲಿ ನಡೆಯುತ್ತಿದೆ. ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯಿಸಿದ್ದ "96" ಚಿತ್ರದಿಂದ ಸ್ಪೂರ್ತಿಗೊಂಡು ತಯಾರಾಗುತ್ತಿರುವ ಈ ಚಿತ್ರದಲ್ಲಿ ಗಣೇಶ್ ಗೆ ಭಾವನಾ ನಾಯಕಿಯಾಗಿದ್ದಾರೆ.
ಇನ್ನು ಪ್ರೀತಮ್ ತಮ್ಮ ಚಿತ್ರದಲ್ಲಿ 1999ನೇ ವರ್ಷದ ಕಥೆಯನ್ನು ಝೇಳಹೊರಟಿದ್ದು ಇದಕ್ಕಾಗಿ ಹೇಮಂತ್ ಹಾಗೂ ಸಮೀಕ್ಷಾ ಯುವ ನಾಯಕ, ನಾಯಕಿಯರಾಗಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಮಲೆನಾಡಿನ ದಟ್ಟ ಕಾನನದ ನಡುವಿನ ತೀರ್ಥಹಳ್ಳಿಯಲ್ಲಿ ಹೇಮಂತ್ ಹಾಗೂ ಸಮೀಕ್ಷಾ ನಟಿಸಿರುವ ಕಥಾಭಾಗವನ್ನು ಚಿತ್ರೀಕರಿಸಲಾಗಿದ್ದು ಇವರಿಬ್ಬರೂ "99" ಚಿತ್ರದ ಜೀವಾಳವಾಗಿದ್ದಾರೆ ಎಂದು ನಿರ್ದೇಶಕ ಪ್ರೀತಮ್ ಹೇಳುತ್ತಾರೆ. ಇಬ್ಬರೂ ಪ್ರತಿಭಾವಂತರಾಗಿದ್ದಾರೆ. ಸಮೀಕ್ಷಾ ಮೂಲತಃ ಶಿವಮೊಗ್ಗದವರೇ ಆಗಿದ್ದು ಕೆಲ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಹೇಮಂತ್ ಸಹ ಉತ್ತಮ ಕಲಾವಿದ, ಇವರಿಬ್ಬರೂ ಬಹಳಷ್ಟು ಜನಪ್ರಿಯ ನಟರಲ್ಲದ ಕಾರಣ ಚಿತ್ರದ ಕಥೆಗೆ ಹೊಸ ತಾಜಾತನವನ್ನು ನೀಡಲು ಸಹಾಯವಾಗಲಿದೆ ಎನ್ನುವುದು ನಿರ್ದೇಶಕರ ಆಂಬೋಣ.
"ಚಿತ್ರ ನಮ್ಮನ್ನು ಮತ್ತೆ 99ರ ಕಾಲಘಟ್ಟಕ್ಕೆ ಕರೆದೊಯ್ಯಲಿದೆ."ಪ್ರೀತಮ್ ಹೇಳುತ್ತಾರೆ. ಗಣೇಶ್ ಸೋಮವಾರದಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವ ಅರ್ಜುನ್ ಜನ್ಯ ಪಾಲಿಗೆ ಸಹ ಈ ಚಿತ್ರ ಮಹತ್ವದಾಗಿದೆ. ಅವರ ವೃತ್ತಿಜೀವನದ 100ನೇ ಚಿತ್ರವಿದಾಗಿದ್ದು ಏಳು ಹಾಡುಗಳು ಅವರ ಸಂಗೀತದಲ್ಲಿ ಮೂಡಿ ಬರುತ್ತಿದೆ. ಸಂತೋಷ್ ರೈ ಪತ್ತಾಜೆ ಛಾಯಾಗ್ರಹಣ ಇರುವ ಈ ಚಿತ್ರ ರಾಮು ಎಂಟರ್ಪ್ರೈಸಸ್ ನಲ್ಲಿ ತಯಾರಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT