ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಬಹುನಿರೀಕ್ಷಿತ ಚಿತ್ರ "ಆದಿಲಕ್ಷ್ಮಿ ಪುರಾಣ" ಇದೇ ಜುಲೈ 19ಕ್ಕೆ ತೆರೆಗೆ ಬರಲು ಸಿದ್ದವಾಗಿದೆ. ಈ ನಡುವೆ ನಿರ್ದೇಶಕಿ ವಿ. ಪ್ರಿಯಾ ತಮ್ಮ ಈ ಚಿತ್ರ ಪ್ರಸಕ್ತ ಸಾಮಾಜಿಕ ಸಮಸ್ಯೆಗಳ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ."ನಗರ ಪ್ರದೇಶದ ಯುವಜನತೆಯಲ್ಲಿ ಮಾದಕವಸ್ತುಗಳ ಚಟ ತೀವ್ರವಾಗಿದೆ. ಈ ಸಮಸ್ಯೆಯ ಬಗೆಗೆ ನಮ್ಮ ಚಿತ್ರದಲ್ಲಿ ಉತ್ತಮ ಸಂದೇಶವೊಂದನ್ನು ನೀಡಲಾಗಿದೆ" ನಿರ್ದೇಶಕಿ ಹೇಳಿದ್ದಾರೆ.
"ಪೋಲೀಸ್ ಪಾತ್ರಧಾರಿಯಾಗಿರುವ ನಿರೂಪ್ ಭಂಡಾರಿ ಈ ಚಿತ್ರದಲ್ಲಿ ಮಾದಕವಸ್ತುಗಳ ದುಷ್ಪರಿಣಾಮಗಳ ವಿರುದ್ಧ ಹೋರಾಡುವ ದೃಶ್ಯಗಳಿದೆ"
ರಾಕ್ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರ ಪ್ರಿಯಾ ಅವರ ಪಾಲಿಗೆ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.ಮ್ಯ ಜಗನ್ಮೂರ್ತಿ, ಜೋ ಸೈಮನ್, ಯಶ್ವಂತ್ ಶೆಟ್ಟಿ, ಮತ್ತು ಭರತ್ ಕಲ್ಯಾಣ್ ಸಹ ಅಭಿನಯಿಸಿದ್ದು ಆದಿ ಲಕ್ಷ್ಮಿ ಪುರಾಣವು ಪ್ರೀಥಾ ಜಯರಾಮ್ ಛಾಯಾಗ್ರಹಣ, ಅನೂಪ್ ಭಂಡಾರಿ ಹಿನ್ನೆಲೆ ಸಂಗೀತವನ್ನು ಹೊಂದಿದೆ.