ಕಾಲೇಜು ಹುಡುಗ, ಪ್ರೇಮಿಯಾಗಿಯೇ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ "ಕೃಷ್ಣನ್ ಲವ್ ಸ್ಟೋರಿ" ಖ್ಯಾತಿಯ ಅಜಯ್ ರಾವ್ ಇದೇ ಮೊದಲ ಬಾರಿಗೆ ಪೋಲೀಸ್ ಪಾತ್ರದಲ್ಲಿ ತೆರೆಗೆ ಬರಲಿದ್ದಾರೆ.
ಜಿಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರ ಒಂದು ಕ್ರೈಮ್ ಥ್ರಿಲ್ಲರ್ ಎನ್ನಲಾಗಿದೆ. ಎಸ್ ರಾಜವರ್ಧನ್ ಪಾಲಿಗಿದು ಚೊಚ್ಚಲ ಚಿತ್ರವಾಗಿದೆ. ಇವರು ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರೊಡನೆ "ರಾಜಾಹುಲಿ", " ರುದ್ರತಾಂಡವ" ಚಿತ್ರಗಳಲ್ಲಿ ಕೆಲಸ ಮಾಡಿದ್ದರು.
ಸದ್ಯ ಪ್ರಜ್ವಲ್ ದೇವರಾಜ್ ಅಭಿನಯದ "ಜಂಟಲ್ ಮ್ಯಾನ್" ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ರಾಜವರ್ಧನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕ್ರಾಗಲು ಹೊರಟಿದ್ದಾರೆ. ಮಹೂರ್ತದ ಬಳಿಕ ವರಮಹಾಲಕ್ಷ್ಮಿ ಹಬ್ಬದಂದು (ಆ. 9) ಚಿತ್ರದ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ತೀರ್ಮಾನಿಸಿದೆ.
ಇನ್ನು ಈ ಚಿತ್ರದಲ್ಲಿ ಮೂವರು ನಾಯಕಿಯರಿರಲಿದ್ದಾರೆ. ಇದಕ್ಕಾಗಿ ಸ್ಟಾರ್ ನಟಿಯರ ಆಯ್ಕೆಯಲ್ಲಿ ಚಿತ್ರತಂಡ ತೊಡಗಿದೆ.ಸುಧಾಕರ್ ಎಸ್ ರಾಜ್ ಅವರನ್ನು ಡಿಒಪಿ ಆಗಿ ಕೆಲಸ ಮಾಡುತ್ತಿದ್ದು ಜಂಟಲ್ಮ್ಯಾನ್ನೊಂದಿಗೆ ಪ್ರಾರಂಭವಾದ ಜಿಸಿನೆಮಾಸ್ನ ಬ್ಯಾನರ್ ಅಡಿಯಲ್ಲಿ ಮಾಡಿದ ಎರಡನೇ ಕೊಡುಗೆ ಇದಾಗಲಿದೆ.