ಕಾಲೇಜು ಹುಡುಗ, ಪ್ರೇಮಿಯಾಗಿಯೇ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ "ಕೃಷ್ಣನ್ ಲವ್ ಸ್ಟೋರಿ" ಖ್ಯಾತಿಯ ಅಜಯ್ ರಾವ್ ಇದೇ ಮೊದಲ ಬಾರಿಗೆ ಪೋಲೀಸ್ ಪಾತ್ರದಲ್ಲಿ ತೆರೆಗೆ ಬರಲಿದ್ದಾರೆ.
ಜಿಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರ ಒಂದು ಕ್ರೈಮ್ ಥ್ರಿಲ್ಲರ್ ಎನ್ನಲಾಗಿದೆ. ಎಸ್ ರಾಜವರ್ಧನ್ ಪಾಲಿಗಿದು ಚೊಚ್ಚಲ ಚಿತ್ರವಾಗಿದೆ. ಇವರು ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರೊಡನೆ "ರಾಜಾಹುಲಿ", " ರುದ್ರತಾಂಡವ" ಚಿತ್ರಗಳಲ್ಲಿ ಕೆಲಸ ಮಾಡಿದ್ದರು.
ಸದ್ಯ ಪ್ರಜ್ವಲ್ ದೇವರಾಜ್ ಅಭಿನಯದ "ಜಂಟಲ್ ಮ್ಯಾನ್" ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ರಾಜವರ್ಧನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕ್ರಾಗಲು ಹೊರಟಿದ್ದಾರೆ. ಮಹೂರ್ತದ ಬಳಿಕ ವರಮಹಾಲಕ್ಷ್ಮಿ ಹಬ್ಬದಂದು (ಆ. 9) ಚಿತ್ರದ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ತೀರ್ಮಾನಿಸಿದೆ.
ಇನ್ನು ಈ ಚಿತ್ರದಲ್ಲಿ ಮೂವರು ನಾಯಕಿಯರಿರಲಿದ್ದಾರೆ. ಇದಕ್ಕಾಗಿ ಸ್ಟಾರ್ ನಟಿಯರ ಆಯ್ಕೆಯಲ್ಲಿ ಚಿತ್ರತಂಡ ತೊಡಗಿದೆ.ಸುಧಾಕರ್ ಎಸ್ ರಾಜ್ ಅವರನ್ನು ಡಿಒಪಿ ಆಗಿ ಕೆಲಸ ಮಾಡುತ್ತಿದ್ದು ಜಂಟಲ್ಮ್ಯಾನ್ನೊಂದಿಗೆ ಪ್ರಾರಂಭವಾದ ಜಿಸಿನೆಮಾಸ್ನ ಬ್ಯಾನರ್ ಅಡಿಯಲ್ಲಿ ಮಾಡಿದ ಎರಡನೇ ಕೊಡುಗೆ ಇದಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos