ನಿಶ್ವಿಕಾ ನಾಯ್ಡು 
ಸಿನಿಮಾ ಸುದ್ದಿ

ಉಪೇಂದ್ರ ಮುಂದಿನ ಚಿತ್ರಕ್ಕೆ ನಿಶ್ವಿಕಾ ನಾಯಕಿ?

ರಿಯಲ್ ಸ್ಟಾರ್ ಉಪ್ಪಿ ಆರ್. ಚಂದ್ರು ನಿರ್ದೇಶನದ "ಐ ಲವ್ ಯು" ಯಶಸ್ಸಿನಿಂದ ಸಂತಸಗೊಂಡಿದ್ದಾರೆ. ಇದೀಗ ಹೊಸ ನಿರ್ದೇಶಕ ಮೌರ್ಯ ಅವರ "ಬುದ್ದಿವಂತ-2" ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ರಿಯಲ್ ಸ್ಟಾರ್ ಉಪ್ಪಿ ಆರ್. ಚಂದ್ರು ನಿರ್ದೇಶನದ "ಐ ಲವ್ ಯು" ಯಶಸ್ಸಿನಿಂದ ಸಂತಸಗೊಂಡಿದ್ದಾರೆ. ಇದೀಗ ಹೊಸ ನಿರ್ದೇಶಕ ಮೌರ್ಯ ಅವರ "ಬುದ್ದಿವಂತ-2" ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಟಿಆರ್. ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ "ಬುದ್ದಿವಂತ 2" ನಂತರ ಉಪೇಂದ್ರ ತಾವು ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಶಶಾಂಕ್ ಇದಾಗಲೇ ತಮ್ಮ ಚಿತ್ರದ ತಯಾರಿಯಲ್ಲಿದ್ದಾರೆ. ಇನ್ನು ಹೋಂ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಾಣಕ್ಕಿಳಿದಿರುವ ನಿರ್ದೇಶಕ ಚಿತ್ರದ ನಟನಾ ವರ್ಗದ ಆಯ್ಕೆಯಲ್ಲಿ ತೊಡಗಿದ್ದಾರೆ. ಮತ್ತು ಈ ಚಿತ್ರಕ್ಕೆ ನಾಯಕಿಯನ್ನಾಗಿ ನಿಶ್ವಿಕಾ ನಾಯ್ಡು ಅವರನ್ನು ಆಯ್ಕೆ ಮಾಡಲಾಗಿದೆ.
ಉಪ್ಪಿಗಾಗಿ ಅಸಾಂಪ್ರದಾಯಿಕ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ಶಶಾಂಕ್  ರಿಯಲ್ ಸ್ಟಾರ್ ಗೆ ಯಾರು ಜೋಡಿಯಾಗಲಿದ್ದಾರೆ ಎಂಬುದನ್ನಷ್ಟೇ ಹೇಳಿದ್ದಾರೆ. ಇದಕ್ಕಾಗಿ ಅವರು "ಪಡ್ಡೆ ಹುಲಿ"ನಾಯಕಿಯನ್ನು ಅವರು ಸಂಪರ್ಕಿಸಿದ್ದಾರೆ.ನಿಶ್ವಿಕಾ ಇದಾಗಲೇ ಕನ್ನಡದ "ವಾಸು ನಾನ್ ಪಕ್ಕಾ ಕಮರ್ಷಿಯಲ್" ಹಾಗೂ "ಅಮ್ಮ ಐ ಲವ್ ಯು" ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.
ಸದ್ಯ ನಿಶ್ವಿಕಾ ಪ್ರಜ್ವಲ್ ದೇವರಾಜ್  ಅಭಿನಯದ "ಜಂಟಲ್ ಮ್ಯಾನ್" ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ, ಉಪೇಂದ್ರ ಅವರೊಂದಿಗೆ, ಶಶಾಂಕ್ ನಿರ್ದೇಶಕರಾಗಿ, ನಿಶ್ವಿಕ ಅವರ ಮೊದಲ ದೊಡ್ಡ ಸ್ಟಾರ್ ನತನ ಜತೆಗಿನ ಚಿತ್ರ ತೆರೆಗೆ ಬರಲಿದೆ. ಆಗಸ್ಟ್ ನಲ್ಲಿ ಚಿತ್ರದ ಮಹೂರ್ತ ನಡೆಯುವ ನಿರೀಕ್ಷೆ ಇದೆ.ಹಾಗೆಯೇ ಸೆಪ್ಟೆಂಬರ್ ನಲ್ಲಿ ಶೂಟಿಂಗ್ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ