ಶ್ರೀಮುರಳಿ ಇದೀಗ "ಭರಾಟೆ" ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು ಚಿತ್ರದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಆ. 6ರಂದು ಅವರು ಸ್ವಿಟ್ಜರ್ಲೆಂಡ್ಗೆ ತೆರಳಲಿದ್ದಾರೆ.
ಆಡಿಯೊ ಬಿಡುಗಡೆಯೊಂದಿಗೆ ಸದ್ದು ಮಾಡುವುದಕ್ಕೆ ಯೋಜಿಸಿರುವ ಚಿತ್ರತಂಡ ಆ.9ರ ವರಮಹಾಲಕ್ಷ್ಮಿ ಹಬ್ಬದಂದು ಅಲ್ಲಿಂದಲೇ ಒಂದು ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಚಿತ್ರಪ್ರೇಮಿಗಳ ನಿರೀಕ್ಷೆಗೆ ಕಿಚ್ಚು ಹಚ್ಚಲು ಸಿದ್ದವಾಗಿದೆ.
ಆಕ್ಷನ್ ಹಾಗೂ ಫ್ಯಾಮಿಲಿ ಡ್ರಾಮಾ ಆಗಿರುವ "ಭರಾಟೆ"ಚಿತ್ರಕ್ಕೆ ನಿರ್ದೇಶಕ ಚೇತನ್ ಕುಮಾರ್ ಸ್ವತಃ ಗೀತರಚನೆಗಾರರೂ ಆಗಿದ್ದಾರೆ.ಅರ್ಜುನ್ ಜನ್ಯಾ ಸಂಯೋಜಿಸಿರುವ ಈ ಚಿತ್ರದ ಸಂಗೀತವು ಐದು ಹಾಡುಗಳನ್ನು ಒಳಗೊಂಡಿದೆ ಮತ್ತು ಆಲ್ಬಮ್ ಹಕ್ಕುಗಳನ್ನು ಆನಂದ್ ಆಡಿಯೋ ಉತ್ತಮ ಬೆಲೆಗೆ ಪಡೆದುಕೊಂಡಿದೆ.
ತಂಡವು ಸೆಪ್ಟೆಂಬರ್ 27ಕ್ಕೆ ಚಿತ್ರವನ್ನು ತೆರೆಗೆ ತರಲು ಯೋಜಿಸಿದ್ದು . ಇದು ನಿರ್ಮಾಪಕ ಸುಪ್ರೀತ್ ಪಾಲಿಗೆ ಚೊಚ್ಚಲ ಚಿತ್ರವಾಗಿದೆ.ಈ ಚಿತ್ರದಲ್ಲಿ ಶ್ರೀಲೀಲಾ ಶ್ರೀಮುರಳಿ ಜತೆಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿಶೇಷವೆಂದರೆ ಸಾಯಿ ಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಶರ್ಮಾ ಮೂವರು ಸಹೋದರರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅವಿನಾಶ್, ಶರತ್ ಲೋಹಿತಾಶ್ವ, ರಾಜು ವಾಡೆ, ಮನಮೋಹನ್, ಉಗ್ರಂ ಮಂಜು, ದೀಪಕ್ ಸಹ ಚಿತ್ರದ ನಟನಾವರ್ಗದಲ್ಲಿದ್ದಾರೆ.