ಗಣೇಶ್ 
ಸಿನಿಮಾ ಸುದ್ದಿ

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ಚೌಕಿದಾರ್' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!

ಕಳೆದ ಲೋಕಸಭೆ ಚುನಾವಣೆ ವೇಳೆ ಭಾರೀ ಸದ್ದು ಮಾಡಿದ್ದ ಬಿಜೆಪಿಯ ಚೌಕಿದಾರ್ ಹೆಸರಿನಲ್ಲಿ ಕನ್ನಡ ಸಿನಿಮಾ ಮೂಡಿ ಬರುತ್ತಿದೆ. ರಥಾವರ' ಹಾಗೂ 'ತಾರಕಾಸುರ' ಚಿತ್ರವನ್ನು ..

ಕಳೆದ ಲೋಕಸಭೆ ಚುನಾವಣೆ ವೇಳೆ ಭಾರೀ ಸದ್ದು ಮಾಡಿದ್ದ ಬಿಜೆಪಿಯ ಚೌಕಿದಾರ್ ಹೆಸರಿನಲ್ಲಿ ಕನ್ನಡ ಸಿನಿಮಾ ಮೂಡಿ ಬರುತ್ತಿದೆ. ರಥಾವರ' ಹಾಗೂ 'ತಾರಕಾಸುರ' ಚಿತ್ರವನ್ನು ನಿರ್ದೇಶನ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ ಅವರು ಚೌಕಿದಾರ್ ನಿರ್ದೇಶಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 
ಈ ಮೊದಲು ಗಣೇಶ್ ಅಭಿನಯದಲ್ಲಿ ಮೂಡಿಬಂದಿದ್ದ 'ಚೆಲುವಿನ ಚಿತ್ತಾರ' ಹಾಗೂ 'ಶೈಲೂ' ಚಿತ್ರದಲ್ಲಿ ನಿರ್ದೇಶ ಚಂದ್ರಶೇಖರ್ ಬಂಡಿಯಪ್ಪ ಕೆಲಸ ಮಾಡಿದ್ದರಂತೆ. ಹೀಗಾಗಿ ಗಣೇಶ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ವಿಭಿನ್ನವಾದ ಕಥೆ ಹೆಣೆದಿದ್ದಾರಂತೆ.
ಚಂದ್ರಶೇಖರ್ ಅವರ ಪ್ರಕಾರ ಗೋಲ್ಡನ್ ಸ್ಟಾರ್ ಗಣೇಶ್ ಅವರಲ್ಲಿ ನಟನೆಗೆ ಸಂಬಂಧಿಸಿದಂತೆ ಬಹಳಷ್ಟು ಪ್ಲಸ್ ಪಾಯಿಂಟ್‌ಗಳು ಇವೆಯಂತೆ. ಅವರನ್ನು ಯಾವುದೇ ರೀತಿಯಲ್ಲೂ ಪ್ರೇಕ್ಷಕರು ಒಪ್ಪಿಕೊಳ್ಳುವಂತೆ ತೋರಿಸಬಹುದು ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅವರ ಅಭಿಪ್ರಾಯ ಎನ್ನಲಾಗಿದೆ. ಹೀಗಾಗಿ ಚೌಕಿದಾರ್ ಚಿತ್ರದಲ್ಲಿ ನಟ ಗಣೇಶ್ ಅವರನ್ನು ಎರಡು ರೀತಿಯ ಶೇಡ್‌ಗಳಲ್ಲಿ ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರಂತೆ. ಅದರಲ್ಲೊಂದು ಪಾತ್ರ 55 ವರ್ಷದ ಅಂಕಲ್ ಪಾತ್ರ. ಈ ಪಾತ್ರದಲ್ಲಿ ಸಹ ನಟ ಗಣೇಶ್ ಅವರು ಮನಮುಟ್ಟುವಂತೆ ನಟಿಸಬಲ್ಲರು ಎಂಬುದು ಚಂದ್ರಶೇಖರ್ ಬಂಡಿಯಪ್ಪ ಅಭಿಪ್ರಾಯವಾಗಿದೆ. 
ಸಿನಿಮಾ ಟೈಟಲ್ ಗೂ ಚಿತ್ರ ಕಥೆಗೂ ಯಾವುದೇ ರಾಜಕೀಯ ನಂಟಿಲ್ಲ, ಇದೊಂದು ಸಾಂಸಾರಿಕ ಸಿನಿಮಾ ಕಥೆಯಾಗಿದೆ ಎಂದು ಚಂದ್ರಶೇಖರ್ ಸ್ಪಷ್ಟ ಪಡಿಸಿದ್ದಾರೆ. ಗೀತಾ ಹಾಗೂ ವೆರ್ ಈಸ್ ಮೈ ಕನ್ನಡಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ನಟ ಗಣೇಶ್. ಹೀಗಾಗಿ ಮುಂಬರುವ ಈ ಚೌಕಿದಾರ್ ಚಿತ್ರವು ಆಗಸ್ಟ್‌ನಲ್ಲಿ ಮುಹೂರ್ತ  ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ