ಸುಪ್ರೀತ್ ಹಾಗೂ ಧನ್ವೀರ್ 
ಸಿನಿಮಾ ಸುದ್ದಿ

ಧನ್ವೀರ್ ಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದ 'ಭರಾಟೆ ಸುಪ್ರೀತ್

ಧನ್ವೀರ್ ಅವರ ಮುಂದಿನ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕ ಚೇತನ್ ಕುಮಾರ್ ತಯಾರಿಸಿದ್ದಾರೆ. ಭರಾಟೆ ನಿರ್ಮಾಪಕ ಸುಪ್ರೀತ್ ಪಾಲಿಗಿದು ಎರಡನೇ ಯೋಜನೆಯಾಗಿದೆ.

ಧನ್ವೀರ್ ಅವರ ಮುಂದಿನ ಚಿತ್ರಕ್ಕೆ  ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕ ಚೇತನ್ ಕುಮಾರ್ ತಯಾರಿಸಿದ್ದಾರೆ. "ಭರಾಟೆ" ನಿರ್ಮಾಪಕ ಸುಪ್ರೀತ್ ಪಾಲಿಗಿದು ಎರಡನೇ ಯೋಜನೆಯಾಗಿದೆ.
ನಿರ್ಮಾಪಕರು ಇದಾಗಲೇ ನಟನೊಂದಿಗೆ ಕಾಲ್ ಶೀಟ್ ಹಂಚಿಕೊಳ್ಲಲು ಉತ್ಸುಕರಾಗಿದ್ದು ನಟ ಧನ್ವೀರ್ ಕಮರ್ಷಿಯಲ್ ಚಿತ್ರದಲ್ಲಿ ನಾಯಕನಾಗುವುದಕ್ಕೆ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ಪತ್ರಿಕೆಗೆ ಹೇಳಿದ್ದಾರೆ.
“ಅವರ ಮೊದಲ ಚಿತ್ರ ಬಜಾರ್‌ನ ಟೀಸರ್ ನೋಡಿದ ಕ್ಷಣ, ನಾನು ಈ ನಟನೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆ. ಅವರ ಎರಡನೇ ಚಿತ್ರ ಅವರ ಮುಂದಿನ ಅತ್ಯುತ್ತಮ ಚಿತ್ರವಾಗಬೇಕೆಂದು ನಾನು ಬಯಸುತ್ತೇನೆ ”ಎಂದು ಸುಪ್ರೀತ್ ಹೇಳಿದರು
ಚಿತ್ರವು ಕಮರ್ಷಿಯಲ್ ಜತೆಜತೆಗೇ  ಫ್ಯಾಮಿಲಿ ಎಂಟರ್‌ಟೈನರ್ ಎಂದು ಹೇಳಲಾಗಿದೆ, ಆದರೆ ನಿರ್ದೇಶಕರನ್ನು ಇನ್ನೂ ಅಂತಿಮಗೊಳಿಸಿಲ್ಲ.  "ನಾನು ಹಲವಾರು ನಿರ್ದೇಶಕರನ್ನು ಸಂಪರ್ಕಿಸಿದ್ದೇನೆ, ಮತ್ತು ಆಯ್ಕೆ ಇನ್ನೂ ಅಂತಿಮವಾಗಿಲ್ಲ." ಎಂದು ಅವರು ಹೇಳಿದರು. ಆದಾಗ್ಯೂ, ಅಕಿರ ಖ್ಯಾತಿಯ ಸುಹಾಸ್ ವಟಾಪಿ ಮತ್ತು ಸಚಿನ್  ಅಂಬಿ ನಿಂಗ್ ವಯಸ್ಸಾಯ್ತೋ ಖ್ಯಾತಿಯ ಗುರುದಾಥ ಗಾಣಿಗ ಸೇರಿ ಹಲವಾರು ಹೆಸರುಗಳು ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!