ಸಿನಿಮಾ ಸುದ್ದಿ

ಧನ್ವೀರ್ ಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದ 'ಭರಾಟೆ ಸುಪ್ರೀತ್

Raghavendra Adiga
ಧನ್ವೀರ್ ಅವರ ಮುಂದಿನ ಚಿತ್ರಕ್ಕೆ  ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕ ಚೇತನ್ ಕುಮಾರ್ ತಯಾರಿಸಿದ್ದಾರೆ. "ಭರಾಟೆ" ನಿರ್ಮಾಪಕ ಸುಪ್ರೀತ್ ಪಾಲಿಗಿದು ಎರಡನೇ ಯೋಜನೆಯಾಗಿದೆ.
ನಿರ್ಮಾಪಕರು ಇದಾಗಲೇ ನಟನೊಂದಿಗೆ ಕಾಲ್ ಶೀಟ್ ಹಂಚಿಕೊಳ್ಲಲು ಉತ್ಸುಕರಾಗಿದ್ದು ನಟ ಧನ್ವೀರ್ ಕಮರ್ಷಿಯಲ್ ಚಿತ್ರದಲ್ಲಿ ನಾಯಕನಾಗುವುದಕ್ಕೆ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ಪತ್ರಿಕೆಗೆ ಹೇಳಿದ್ದಾರೆ.
“ಅವರ ಮೊದಲ ಚಿತ್ರ ಬಜಾರ್‌ನ ಟೀಸರ್ ನೋಡಿದ ಕ್ಷಣ, ನಾನು ಈ ನಟನೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆ. ಅವರ ಎರಡನೇ ಚಿತ್ರ ಅವರ ಮುಂದಿನ ಅತ್ಯುತ್ತಮ ಚಿತ್ರವಾಗಬೇಕೆಂದು ನಾನು ಬಯಸುತ್ತೇನೆ ”ಎಂದು ಸುಪ್ರೀತ್ ಹೇಳಿದರು
ಚಿತ್ರವು ಕಮರ್ಷಿಯಲ್ ಜತೆಜತೆಗೇ  ಫ್ಯಾಮಿಲಿ ಎಂಟರ್‌ಟೈನರ್ ಎಂದು ಹೇಳಲಾಗಿದೆ, ಆದರೆ ನಿರ್ದೇಶಕರನ್ನು ಇನ್ನೂ ಅಂತಿಮಗೊಳಿಸಿಲ್ಲ.  "ನಾನು ಹಲವಾರು ನಿರ್ದೇಶಕರನ್ನು ಸಂಪರ್ಕಿಸಿದ್ದೇನೆ, ಮತ್ತು ಆಯ್ಕೆ ಇನ್ನೂ ಅಂತಿಮವಾಗಿಲ್ಲ." ಎಂದು ಅವರು ಹೇಳಿದರು. ಆದಾಗ್ಯೂ, ಅಕಿರ ಖ್ಯಾತಿಯ ಸುಹಾಸ್ ವಟಾಪಿ ಮತ್ತು ಸಚಿನ್  ಅಂಬಿ ನಿಂಗ್ ವಯಸ್ಸಾಯ್ತೋ ಖ್ಯಾತಿಯ ಗುರುದಾಥ ಗಾಣಿಗ ಸೇರಿ ಹಲವಾರು ಹೆಸರುಗಳು ಕೇಳಿಬರುತ್ತಿದೆ.
SCROLL FOR NEXT