ದೇವಕಿ ಸಿನಿಮಾ ಪೋಸ್ಚರ್ 
ಸಿನಿಮಾ ಸುದ್ದಿ

ನೈಜ ಕಥೆಯಾಧಾರಿತ ದೇವಕಿ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ: ನಿರ್ದೇಶಕ ಲೋಹಿತ್

ಮಮ್ಮಿ ಸೇವ್ ಮಿ ಯಂತಹ ಹಾರರ್ ಸಿನಿಮಾ ನೀಡಿದ ನಿರ್ದೇಶಕ ಲೋಹಿತ್ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ದೇವಕಿ ಎಂಬ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದಾರೆ, ...

ಮಮ್ಮಿ ಸೇವ್ ಮಿ ಯಂತಹ ಹಾರರ್ ಸಿನಿಮಾ ನೀಡಿದ ನಿರ್ದೇಶಕ ಲೋಹಿತ್, ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ದೇವಕಿ ಎಂಬ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದಾರೆ.
ಎರಡು ವರ್ಷಗಳ ನಂತರ ಪ್ರಿಯಾಂಕಾ ಉಪೇಂದ್ರ ಮತ್ತು ಲೋಹಿತ್ ಕಾಂಬಿನೇಷನ್ ನಲ್ಲಿ ದೇವಕಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 
ಲೋಹಿತ್ ಯಾವಾಗಲೂ ರೌಡಿಗಳ ಕಥೆಯಾಧಾರಿತ ಸಿನಿಮಾ ಕಡೆ ವಾಲುತ್ತಿದ್ದರು, ಹೀಗಾಗಿ ಅವರು ಸಿನಿಮಾ ಇಂಡಸ್ಟ್ರಿಗೆ ಬಂದರು,  ನನ್ನ ಸ್ಕೂಲ್ ಬಾಯ್ ನೋಡಿದ  ನಿರ್ಮಾಪಕರಿಗೆ ಮತ್ತು ನಟರಿಗೆ ಬೇರೆ ಅಭಿಪ್ರಾಯ ಮೂಡಿತು. ಗ್ಯಾಂಗ್ ಸ್ಟರ್ ರೀತಿಯ ಕಥೆ ನಿರ್ದೇಶನ ನೀಡಿದರೇ ಇವರಿಗೆ ಕೆಲಸ ಮಾಡಲು ಸಾಧ್ಯವೇ ಎಂಬ ಯೋಚನೆ ಮೂಡಿತ್ತು ಎಂದು ಲೋಹಿತ್ ತಿಳಿಸಿದ್ದಾರೆ.
ನಾನು ಮಮ್ಮಿ ಸೇವ್ ಮಿ ಭಾಗ 2 ಮಾಡಲು ಆಲೋಚಿಸಿದ್ದೆ, ಆದರೆ ಕಥೆಗೆ ಹಿಮಪಾತವಾಗುವ ಸನ್ನಿವೇಶಗಳಲ್ಲಿ ಶೂಟಿಂಗ್ ಮಾಡುವ ಅವಶ್ಯಕತೆಯಿತ್ತು, ಇದೇ ವೇಳೆ ಕೊಲ್ಕೋತಾದ ಒಂದು ಸ್ಥಳದ ಬಗ್ಗೆ ನಾನು ಒಂದು ಲೇಖನ ಓದಿದ್ದೆ, ಇದು ಕುಟುಂಬವೊಂದು ತಮ್ಮ ಮಕ್ಕಳನ್ನು ಕಳೆದುಕೊಳ್ಳುವ ಬಗೆಗಿನ ಕಥೆಯಾಗಿತ್ತು, ಅದು ನನ್ನ ಗಮನ ಸೆಳೆಯಿತು, ಅದೇ ದೇವಕಿ ಸಿನಿಮಾ ಮೂಲ ಕಥೆಯಾಗಿದೆ ಎಂದು ಲೋಹಿತ್ ತಿಳಿಸಿದ್ದಾರೆ.
ಆರು ವರ್ಷಗಳ ನಂತರವೂ ತಾಯಿಯೊಬ್ಬಳು ತನ್ನ ಮಗ ಬರುತ್ತಾನೆ ಎಂಬ ಭರವಸೆಯೊಂದಿಗೆ ಲೋಟದಲ್ಲಿ ಹಾಲು ಹಿಡಿದುಕೊಂಡು ನಿಲ್ಲುತ್ತಾಳೆ ಎಂಬ ಕಥೆ ಇದಾಗಿತ್ತು, ಅದರಲ್ಲಿ ಕೆಲವು ಅಂಶಗಳನ್ನು ತೆಗೆದುಕೊಂಡು ಸಿನಿಮಾ ಕಥೆಗೆ ಹೊಂದುವ ರೀತಿ ಬದಲಾಯಿಸಿಕೊಂಡಿದ್ದೇನೆ, ಘಟನೆ ನಡೆದ ಪ್ರದೇಶದಲ್ಲೇ ಶೂಟಿಂಗ್ ಮಾಡಲು ನಿರ್ಧರಿಸಿದೆ, 
ದೆಹಲಿ ಮತ್ತು ಕೊಲ್ಕೊತಾದಲ್ಲಿ ಪ್ರತಿ 10 ನಿಮಷಕ್ಕೊಮ್ಮೆ ಒಂದು ಮಗುವಿನ ಕಿಡ್ನಾಪ್ ಆಗುತ್ತಿರುತ್ತದೆ. ಇದನ್ನು ಹೈಲೈಟ್ ಮಾಡಲು ನಾನು ಮುಂದಾದೆ, ನಮ್ಮ 10 ಸಿನಿಮಾದಲ್ಲಿ 10 ಮೌಲ್ಯಗಳು ಇವೆ, ಸಿನಿಮಾ ನಿಮ್ಮನ್ನು ಅಳಿಸುತ್ತದೆ ಹಾಗೆಯೇ ನಗಿಸುತ್ತದೆ ಎಂದು ಹೇಳಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಸಿನಿಮಾವಾದ್ದರಿಂದ ನಾನು ಪ್ರಿಯಾಂಕಾ ಉಪೇಂದ್ರ ಅವರನ್ನೇ ಆಯ್ಕೆ ಮಾಡಿಕೊಂಡೆ, ಅವರ ಜೊತೆ ವರ್ಷಕ್ಕೊಂದು ಸಿನಿಮಾ ಮಾಡುವ ಬಯಕೆ ವ್ಯಕ್ತ ಪಡಿಸಿರುವ ಲೋಹಿತ್ , ನನ್ನ ಆಸೆಯ ಕಥೆಯಂತೆ ದೇವಕಿ ಸಿನಿಮಾ ನಿರ್ದೇಶನ ಮಾಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT