ರಾಧಿಕಾ ಕುಮಾರಸ್ವಾಮಿ 
ಸಿನಿಮಾ ಸುದ್ದಿ

ಆರೋಗ್ಯ ಚೇತರಿಕೆ, ಮಾ.5ರಿಂದ 'ದಮಯಂತಿ' ಸೆಟ್ ಗೆ ರಾಧಿಕಾ ಪುನರಾಗಮನ

ಶಾಂತಿನಗರ ಸ್ಮಶಾನದಲ್ಲಿ "ಭೈರಾದೇವಿ" ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಚೇತರಿಸಿಕೊಂಡಿದ್ದು ಮಾರ್ಚ್ 5ರಿಂದ "ದಮಯಂತಿ" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು: ಶಾಂತಿನಗರ ಸ್ಮಶಾನದಲ್ಲಿ "ಭೈರಾದೇವಿ" ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಚೇತರಿಸಿಕೊಂಡಿದ್ದು ಮಾರ್ಚ್ 5ರಿಂದ "ದಮಯಂತಿ" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಕೆಲ ದಿನಗಳ ಕಾಲ ವಿಶ್ರಾಂತಿಯ ಬಳಿಕ ನಟಿ ಮತ್ತೆ ಎರಡು ಚಿತ್ರಗಳ ಶೂಟಿಂಗ್ ಗಳಲ್ಲಿ ತೊಡಗಿಸಿಕೊಳ್ಲಲು ಬಯಸಿದ್ದಾರೆ. "ನನ್ನ ಆರೋಗ್ಯ ಈಗ ಉತ್ತಮವಾಗಿದೆ. ಇದೀಗ ನಾನು ದಮಯಂತಿ ಚಿತ್ರದ ವಾರದ ಕಾಲದ ಶುಟಿಂಗ್ ನಲ್ಲಿ ತೊಡಗಿಸಿಕೊಳ್ಲಲು ನಿರ್ಧರಿಸಿದ್ದೇನೆ.ಇದೇ ವೇಳೆ ಭೈರಾದೇವಿಯಲ್ಲಿ ನನಗೆ ಮೂರು ದಿನಗಳ ಕೆಲಸ ಹಾಗೂ ಎರಡು ಹಾಡುಗಳ ಚಿತ್ರೀಕರಣಬಾಕಿ ಇದೆ.ಇದನ್ನು ನಾನು ಮಾರ್ಚ್ 17ರ ನಂತರ ಪೂರ್ಣಗೊಳಿಸುತ್ತೇನೆ" ರಾಧಿಕಾ ಹೇಳಿದ್ದಾರೆ.
ರಾಧಿಕಾ ಅವರ ಸ್ವಂತ ನಿರ್ಮಾಣದಲ್ಲಿ ಮೂಡಿಬರುತ್ತಿರುವ "ಭೈರಾದೇವಿ" ಚಿತ್ರಕ್ಕೆ ಶ್ರೀಜೈ ಆಕ್ಷನ್ ಕಟ್ ಹೇಳಿದ್ದಾರೆ. ಇದು ಥ್ರಿಲ್ಲರ್ ಕಥಾನಕವಾಗಿದು ಅನುಭವಿ ನಟ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಪೋಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ.
ಇನ್ನು ನವರಸನ್ ನಿರ್ದೇಶನದ "ದಮಯಂತಿ" ಎಂಬತ್ತರ ದಶಕದ ಕಥಾನಕವಾಗಿದ್ದು ಇದರಲ್ಲಿ ಸಹ ರಾಧಿಕಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

ಶಿಸ್ತಿನಲ್ಲಿರಿಸಲು 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT