ರಾಧಿಕಾ ಕುಮಾರಸ್ವಾಮಿ 
ಸಿನಿಮಾ ಸುದ್ದಿ

ಆರೋಗ್ಯ ಚೇತರಿಕೆ, ಮಾ.5ರಿಂದ 'ದಮಯಂತಿ' ಸೆಟ್ ಗೆ ರಾಧಿಕಾ ಪುನರಾಗಮನ

ಶಾಂತಿನಗರ ಸ್ಮಶಾನದಲ್ಲಿ "ಭೈರಾದೇವಿ" ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಚೇತರಿಸಿಕೊಂಡಿದ್ದು ಮಾರ್ಚ್ 5ರಿಂದ "ದಮಯಂತಿ" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು: ಶಾಂತಿನಗರ ಸ್ಮಶಾನದಲ್ಲಿ "ಭೈರಾದೇವಿ" ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಚೇತರಿಸಿಕೊಂಡಿದ್ದು ಮಾರ್ಚ್ 5ರಿಂದ "ದಮಯಂತಿ" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಕೆಲ ದಿನಗಳ ಕಾಲ ವಿಶ್ರಾಂತಿಯ ಬಳಿಕ ನಟಿ ಮತ್ತೆ ಎರಡು ಚಿತ್ರಗಳ ಶೂಟಿಂಗ್ ಗಳಲ್ಲಿ ತೊಡಗಿಸಿಕೊಳ್ಲಲು ಬಯಸಿದ್ದಾರೆ. "ನನ್ನ ಆರೋಗ್ಯ ಈಗ ಉತ್ತಮವಾಗಿದೆ. ಇದೀಗ ನಾನು ದಮಯಂತಿ ಚಿತ್ರದ ವಾರದ ಕಾಲದ ಶುಟಿಂಗ್ ನಲ್ಲಿ ತೊಡಗಿಸಿಕೊಳ್ಲಲು ನಿರ್ಧರಿಸಿದ್ದೇನೆ.ಇದೇ ವೇಳೆ ಭೈರಾದೇವಿಯಲ್ಲಿ ನನಗೆ ಮೂರು ದಿನಗಳ ಕೆಲಸ ಹಾಗೂ ಎರಡು ಹಾಡುಗಳ ಚಿತ್ರೀಕರಣಬಾಕಿ ಇದೆ.ಇದನ್ನು ನಾನು ಮಾರ್ಚ್ 17ರ ನಂತರ ಪೂರ್ಣಗೊಳಿಸುತ್ತೇನೆ" ರಾಧಿಕಾ ಹೇಳಿದ್ದಾರೆ.
ರಾಧಿಕಾ ಅವರ ಸ್ವಂತ ನಿರ್ಮಾಣದಲ್ಲಿ ಮೂಡಿಬರುತ್ತಿರುವ "ಭೈರಾದೇವಿ" ಚಿತ್ರಕ್ಕೆ ಶ್ರೀಜೈ ಆಕ್ಷನ್ ಕಟ್ ಹೇಳಿದ್ದಾರೆ. ಇದು ಥ್ರಿಲ್ಲರ್ ಕಥಾನಕವಾಗಿದು ಅನುಭವಿ ನಟ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಪೋಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ.
ಇನ್ನು ನವರಸನ್ ನಿರ್ದೇಶನದ "ದಮಯಂತಿ" ಎಂಬತ್ತರ ದಶಕದ ಕಥಾನಕವಾಗಿದ್ದು ಇದರಲ್ಲಿ ಸಹ ರಾಧಿಕಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT