ರಾಜ್ ಬಿ ಶೆಟ್ಟಿ 
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಇಬ್ಬರು ಹೀರೋಗಳು

ಒಂದು ಮೊಟ್ಟೆಯ ಕಥೆ ' ಚೊಚ್ಚಲ ಚಿತ್ರ ನಿರ್ದೇಶನ ಹಾಗೂ ನಟನಾ ಕೌಶಲ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ರಾಜ್ ಬಿ ಶೆಟ್ಟಿ ಇದೀಗ 'ಹರಿಹರ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರು:'ಒಂದು ಮೊಟ್ಟೆಯ ಕಥೆ ' ಚೊಚ್ಚಲ ಚಿತ್ರ ನಿರ್ದೇಶನ ಹಾಗೂ ನಟನಾ ಕೌಶಲ್ಯದ ಮೂಲಕ ಕನ್ನಡ  ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ರಾಜ್ ಬಿ ಶೆಟ್ಟಿ ಇದೀಗ  'ಹರಿಹರ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸಿಟಿ ಎಕ್ಸ್ ಪ್ರೆಸ್ ಗೆ ಈ ವಿಷಯ ತಿಳಿಸಿರುವ ರಾಜ್, ಈ ಚಿತ್ರದಲ್ಲಿ ಇಬ್ಬರು ಹಿರೋಗಳು ಇರಲಿದ್ದಾರೆ. ತಾನೇ ಹಿರೋ ಆಗಿದ್ದು, ಮತ್ತೊಬ್ಬರನ್ನು ಸದ್ಯದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

  ಪ್ರಸ್ತುತ ಗಾಂಧಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಕಥೆ ಸಿದ್ದವಾಗಿದೆ. ಮೇ ಮಧ್ಯಭಾಗದಿಂದ ಚಿತ್ರೀಕರಣ ಆರಂಭಿಸಲಾಗುವುದು. ಮತ್ತೊಬ್ಬ ಹೀರೋವನ್ನು  ಅಂತಿಮಗೊಳಿಸಿದ ನಂತರ ನನ್ನ ಭಾಗವನ್ನು ಆರಂಭಿಸುತ್ತೇನೆ. ಈಗ ಲೋಕೇಷನ್ ಅಂತಿಮಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಬ್ರಹ್ಮ ಮತ್ತು ವಿಷ್ಣು ನಡುವಿನ ಪ್ರತಿಷ್ಠೆಯ  ಸಂಘರ್ಷ ವರ್ಣಿಸುವ ಯಕ್ಷಗಾನ ನಾಟಕ ಶ್ರೀ ದೇವಿ ಮಹಾತ್ಮೆ  ಸೀಕ್ವೆನ್ಸ್  ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದನ್ನು ಸಮಕಾಲಕ್ಕೆ ಹೊಂದಿಕೊಳ್ಳುವಂತೆ ಪುನರ್ ರಚಿಲಾಗಿದೆ.
ಮಾನವರಂತೆ ದೇವಮಾನವರಲ್ಲಿಯೂ ಪ್ರತಿಷ್ಠೆಕಾಗಿ ನಡೆಯುವ ಕಾದಾಟದಂತೆ ಇಬ್ಬರು ನಾಯಕರ ನಡುವಿನ ಸಂಘರ್ಷ ಚಿತ್ರದಲ್ಲಿ ಸಾಗಲಿದೆ. ಇಂದಿನ ಪ್ರೇಕ್ಷಕರಿಗೆ ಅದು ಇಷ್ಟವಾಗಲಿದೆ ಎಂಬ ನಂಬಿಕೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT