ಹಿರಣ್ಣಯ್ಯ 
ಸಿನಿಮಾ ಸುದ್ದಿ

ನಾಟಕ ಕ್ಷೇತ್ರದ 'ಮಾಣಿಕ್ಯ' ಹಿರಣ್ಣಯ್ಯ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ

ಹಿರಿಯ ರಂಗಕಲಾವಿದ, ನಾಟಕರಂಗದ ಮಾಣಿಕ್ಯ ಮಾಸ್ಟರ್ ಹಿರಣ್ಣಯ್ಯ ಇಂದು ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ಸ್ಯಾಂಡಲ್ ವುಡ್ ನ ಹಿರಿಯ ನಟರು, ನಿರ್ಮಾಪಕರು....

ಬೆಂಗಳೂರು: ಹಿರಿಯ ರಂಗಕಲಾವಿದ, ನಾಟಕರಂಗದ ಮಾಣಿಕ್ಯ ಮಾಸ್ಟರ್ ಹಿರಣ್ಣಯ್ಯ ಇಂದು ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ಸ್ಯಾಂಡಲ್ ವುಡ್ ನ ಹಿರಿಯ ನಟರು, ನಿರ್ಮಾಪಕರು ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಟ ದೇವರಾಜ್, ಮಂಡ್ಯ ರಮೇಶ್, ಕಿಚ್ಚ ಸುದೀಪ್, ಮಾಸ್ಟರ್ ಆನಂದ್ ಸೇರಿ ಹಲವರು ಹಿರಣ್ಣಯ್ಯ ನವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ನಟ ದೇವರಾಜ್ ಮಾತನಾಡಿ "ರಂಗಭೂಮಿ ಹಿರಿಯ ಕಲಾವಿದರು, ಕನ್ನಡ ಭಾಷೆ, ನಾಟಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ.ಹಲವು ಕಲಾವಿದರಿಗೆ ಬದುಕು ನೀಡಿದ ಕನ್ನಡ ಭಾಷೆ ಬಗೆಗೆ ಜಾಗೃತಿ ಮೂಡಿಸಿದ್ದ ಹಿರಣ್ಣಯ್ಯ ಇಂದು ನಮ್ಮೊಡನಿಲ್ಲ  ಅವರ ನೆನಪು ಮಾತ್ರ ಸದಾ ಜತೆಗಿರಲಿದೆ" ಎಂದಿದ್ದಾರೆ.
ನಟ ಮಂಡ್ಯ ರಮೇಶ್ ಮಾತನಾಡಿ"ಹಿರಣ್ಣಯ್ಯ ತಮ್ಮ ನಾಟಕರಂಗವನ್ನೇ ಹೋರಾಟದ ಕ್ಷೇತ್ರವಾಗಿಸಿಕೊಂಡಿದ್ದರು" ಎಂದು ತಮ್ಮ ಹಾಗೂ ಅವರ ನಡುವಿನ ಎರಡು ದಶಕಗಳ ನೆನಪನ್ನು ಮೆಲುಕು ಹಾಕಿದ್ದಾರೆ.
"73 ಶಾಂತಿ ನಿವಾಸ ಚಿತ್ರದಲ್ಲಿ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದೆವು. ಅವರ ಪ್ರತಿಭೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆ, ಅವರು ನನ್ನ ಹೃದಯಕ್ಕೆ ಸದಾ ಹತ್ತಿರವಾಗಿದ್ದಾರೆ" ಕಿಚ್ಚ ಸುದೀಪ್ ಹೇಳಿದ್ದಾರೆ.
ಚಾಲೆಂಜಿಂಗ್ ಸ್ತಾರ್ ದರ್ಶನ್ "ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ರವರು ಇಂದು ವಿಧಿವಶರಾಗಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರೊಡನೆ ‘ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿರುತ್ತ" ಎಂದು ಟ್ವೀಟ್ ಮಾಡಿ ಹಿರಣ್ಣಯ್ಯನವರನ್ನು ಸ್ಮರಿಸಿದ್ದಾರೆ.
"ಅವರೊಬ್ಬ ಲೆಜೆಂಡ್, ಅವರ ನಿಧನ ನನಗೆ ತುಂಬಾ ಆಘಾತವಾಗಿದೆ. ಅವರು ನಮ್ಮೊಡನೆ ಬಹಳ ವಿಷಯ ಹಂಚಿಕೊಳ್ಳುತ್ತಿದ್ದರು" ಮಾಸ್ಟರ್ ಆನಂದ್ ಹೇಳಿದ್ದಾರೆ.
"ಮಾಸ್ಟರ್ ಹಿರಣ್ಣಯ್ಯ ಜೀವನದಲ್ಲಿ ಸಹ ಮಾಸ್ಟರ್ ಆಗಿದ್ದರು. ಅವರ ಮಾತು ನೇರವಾಗಿ ನಾಟುವಂತಿತ್ತು. ಮಾಸ್ಟರ್ ಆಗಿಯೇ ಸಮಾಜದ ಓರೆ, ಕೋರೆಯನ್ನು ತಿದ್ದುತ್ತಿದ್ದರು" ಎಂದು ನಟ ಶ್ರೀನಾಥ್ ಹಿರಣ್ಣಯ್ಯನವರನ್ನು ನೆನೆದಿದ್ದಾರೆ.
ನವರಸ ನಾಯಕ ಜಗ್ಗೇಶ್ ಸಹ ಹಿರಣ್ಣಯ್ಯನವರನ್ನು ನೆನೆದು "ಇಂದಿನ ಮೆಜಸ್ಟಿಕ್ ಬಸ್ನಿಲ್ದಾಣ ಅಂದು "ಹಿರಣಯ್ಯ ಮಿತ್ರಮಂಡಲಿ"ಬಿಡಾರ!ನನ್ನ 1976ರಲ್ಲಿ ಇವರ ನಾಟಕ ನೋಡಲು ಅಪ್ಪಅಮ್ಮನ ಜೊತೆ ಹೋಗುತ್ತಿದ್ದೆ!ನಮ್ಮ ಸೋದರಮಾವ ರಂಗನಟ Tmಭಧ್ರಾಚಲ ನಾಟಕದ ಟಿಕೆಟ್ ಕೊಡುತ್ತಿದ್ದರು!ಹಳ್ಳಿಯಂತಿದ್ದ ಆದಿನಗಳ ಬಾಲ್ಯ ನೆನಪಾಯಿತು! ಇವರ ದೇವದಾಸಿ ಚಿತ್ರದ ಹಾಡು ಹಾಡಿ 9ನೆ ತರಗತಿಯಲ್ಲಿ ಪಾರಿತೋಷಕಪಡೆದಿದ್ದೆ " ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT