ವಿಹಾನ್ 
ಸಿನಿಮಾ ಸುದ್ದಿ

'ಕಾಲ್ ಕೆಜಿ ಪ್ರೀತಿ' ಹುಡುಕಿಕೊಂಡು ಮಾಲಿವುಡ್ ಗೆ ವಿಹಾನ್ ಎಂಟ್ರಿ!

ಯೋಗರಾಜ್ ಭಟ್ ನಿರ್ದೇಶನದ "ಪಂಚತಂತ್ರ" ನಾಯಕ ವಿಹಾನ್ ಈಗ ಮಾಲಿವುಡ್ ಪ್ರವೇಶಕ್ಕೆ ಸಿದ್ದತೆ ನಡೆಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ವಿಹಾನ್ ಅವರೇ ನಾಯಕನಾಗಿದ್ದ "ಕಾಲ್ ಕೆಜಿ ಪ್ರೀತಿ" ಚಿತ್ರದ ಮಲಯಾಲಂ ರಿಮೇಕ್ ನಲ್ಲಿ ....

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ "ಪಂಚತಂತ್ರ" ನಾಯಕ ವಿಹಾನ್ ಈಗ ಮಾಲಿವುಡ್ ಪ್ರವೇಶಕ್ಕೆ ಸಿದ್ದತೆ ನಡೆಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಅವರೇ ನಾಯಕನಾಗಿದ್ದ "ಕಾಲ್ ಕೆಜಿ ಪ್ರೀತಿ" ಚಿತ್ರದ ಮಲಯಾಲಂ ರಿಮೇಕ್ ನಲ್ಲಿ ಈಗ ವಿಹಾನ್ ಕಾಣಿಸಿಕೊಳ್ಲಲಿದ್ದಾರೆ. ಸತ್ಯ ಸೂರ್ಯ ಸಾಗರ್ ಎಂಬ ಹೊಸ ನಿರ್ದೇಶಕ ಮಲಯಾಳಂ ನಲ್ಲಿ ಕನ್ನಡದ ಚಿತ್ರವೊಂದರ ರೀಮೇಕ್ ಗಾಗಿ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ.
ಕನ್ನಡದಲ್ಲಿ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದ "ಕಾಲ್ ಕೆಜಿ ಪ್ರೀತಿ" ಮಲಯಾಳಂ ರೀಮೇಕ್ ಬಗೆಗೆ ಯುವನಟ ತನ್ನ ಅಭಿಪ್ರಾಯ ಬಹಿರಂಗಪಡಿಸಲು ಹಿಂದೇತು ಹಾಕುತ್ತಿದ್ದಾರೆ. ಮಲಯಾಳಂ ನಿರ್ಮಾಪಕರು ಈ ಚಿತ್ರವನ್ನು ಇಷ್ಟಪಟ್ಟು ರೀಮೇಕ್ ಹಕ್ಕುಗಳನ್ನು ಕೇಳಿದ್ದರು. ಈ ಕುರಿತ ಮಾತುಕತೆ ಇತ್ತೀಚೆಗೆ ಮುಕ್ತಾಯವಾಗಿತ್ತು.
ಈಗ ವಿಹಾನ್ ಮಲಯಾಳಂ ಸೆಟ್ ನಲ್ಲಿ ತಯಾರಾಗುವ ರೀಮೇಕ್ ಚಿತ್ರಕ್ಕಾಗಿ ಸಂಭಾಷಣೆಗಳನ್ನು ನೋಡುತ್ತಿದ್ದಾರೆ.ಹಾಗೆಯೇ ಆಗಸ್ಟ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ.ಸದ್ಯ ವಿಹಾನ್ ಮಾತ್ರ ನಟಿಸುವುದು ಖಚಿತವಾಗಿದ್ದು ಚಿತ್ರದ ಉಳಿದ ಪಾತ್ರಗಳಲಿ ಅಭಿನಯಿಸಲು ನಟ ನಟಿಯರು ಇನ್ನೂ ಅಂತಿಮಗೊಂಡಿಲ್ಲ. ಈ ನಡುವೆ ವಿಹಾನ್ ಕನ್ನಡ ನಿರ್ದೇಶಕರೊಡನೆ ಸಹ ಮಾತುಕತೆ ನಡೆಸಿದ್ದು ಮುಂದಿನ ಕನ್ನಡ ಚಿತ್ರ ಯಾವುದೆನ್ನುವುದನ್ನು ಒಮ್ಮೆ ಮಾತುಕತೆ ಸಂಪೂರ್ಣವಾದ ನಂತರ ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT