ಸಿನಿಮಾ ಸುದ್ದಿ

ರಾಜ್ಯಾದ್ಯಂತ ನ. 15ರಂದು ಮನೆ ಮಾರಾಟಕ್ಕಿದೆ!

Vishwanath S

ಬೆಂಗಳೂರು: ಚಿಕ್ಕಣ್ಣ, ಸಾಧು ಕೋಕಿಲ, ಕುರಿ ಪ್ರತಾಪ್ ಸೇರಿಕೊಂಡು, ನಗಿಸುತ್ತಾ, ಭಯಪಡಿಸುತ್ತಾ ಮನೆ ಮಾರೋದಿಕ್ಕೆ ಬರ್ತಿದ್ದಾರೆ  ಅಂದ್ರೆ ಗೋತ್ತಾಯ್ತಲ್ಲ?  ಇದೇ ೧೫ರಂದು ರಾಜ್ಯಾದ್ಯಂತ ಮನೆ ಮಾರಾಟಕ್ಕಿದೆ ಚಿತ್ರ ಬಿಡುಗಡೆಯಾಗುತ್ತಿದೆ.

ಎಸ್.ವಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್ ವಿ ಬಾಬು ನಿರ್ಮಿಸಿ, ಮಂಜು ಸ್ವರಾಜ್ ನಿರ್ದೇಶನದ ಚಿತ್ರಕ್ಕೆ ಸೆನ್ಸಾರ್ ಯುಎ/ಎ ಅರ್ಹತಾ ಪತ್ರ ನೀಡಿದ್ದು, ೧೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಶಿಶಿರ, ಶ್ರಾವಣಿ ಸುಬ್ರಮಣ್ಯ, ಶ್ರೀಕಂಠ, ಪಟಾಕಿ ಚಿತ್ರಗಳ ನಿರ್ದೇಶಕರಾದ ಮಂಜು ಸ್ವರಾಜ್  ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ  ಬರೆದಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್ ಬಾಬು ಅವರ  ಛಾಯಾಗ್ರಹಣವಿದೆ. ವಿಶ್ವ ಸಂಕಲನ, ಕಂಬಿ ರಾಜು, ಕಲೈ ನೃತ್ಯ ನಿರ್ದೇಶನ, ವಿಕ್ರಂ ಮೋರ್  ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.       

ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ರಾಜೇಶ್  ನಟರಂಗ, ಕಾರುಣ್ಯರಾಮ್, ಶಿವರಾಂ, ಗಿರಿ, ನೀನಾಸಂ ಅಶ್ವತ್ ಮುಂತಾದವರು ಈ ಚಿತ್ರದ  ತಾರಾಬಳಗದಲ್ಲಿದ್ದಾರೆ.

SCROLL FOR NEXT