ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಹೊಸ ಅವತಾರದಲ್ಲಿ `ದಾರಿ ತಪ್ಪಿದ ಮಗ’

ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು...

ಬೆಂಗಳೂರು: ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು ನೋಡಬಯಸುವ ಪ್ರೇಕ್ಷಕರಿಗಾಗಿ ೧೯೭೫ರಲ್ಲಿ ತೆರೆಕಂಡ 'ದಾರಿ ತಪ್ಪಿದ ಮಗ’ ಮತ್ತೆ ಹೊಸ ಅವತಾರದಲ್ಲಿ ಬರಲಿದೆ.

ಅಂದು ಪೇಕೇಟಿ ಶಿವರಾಂ ನಿರ್ಮಿಸಿ ನಿರ್ದೇಶಿಸಿದ್ದ ಬಹುತಾರಾಗಣದ ಚಿತ್ರದಲ್ಲಿ ರಸಿಕರ ರಾಜ, ಕರ್ನಾಟಕ ರತ್ನ ಡಾ ರಾಜ್‌ಕುಮಾರ್, ಜಯಮಾಲಾ, ಆರತಿ, ಕಲ್ಪನಾ, ಮಂಜುಳ ನಾಯಕ, ನಾಯಕಿಯರಾಗಿದ್ದರೆ, ಪೋಷಕ ಪಾತ್ರದಲ್ಲಿ ಎಂ ವಿ ರಾಜಮ್ಮ, ವಜ್ರಮುನಿ, ಕೆ ಎಸ್ ಅಶ್ವತ್ಥ್ ಮೊದಲಾದವರಿದ್ದಾರೆ.

ಇದೇ ನವೆಂಬರ್ 22ರಂದು ದಾರಿತಪ್ಪಿದ ಮಗ ಮತ್ತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 

ಅಂದು 35 ಎಂ ಎಂನಲ್ಲಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ 7.1 ಡಿಟಿಎಸ್ 2ಕೆ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುನಿರಾಜು ಅವರು ಚಿತ್ರ ನಿರ್ಮಾಣ ಸಂಸ್ಥೆ ಜಯಪ್ರಭ ಪ್ರೊಡಕ್ಷನ್ಸ್ ಮೂಲಕ ಹೊರತರುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್