ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಹೊಸ ಅವತಾರದಲ್ಲಿ `ದಾರಿ ತಪ್ಪಿದ ಮಗ’

ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು...

ಬೆಂಗಳೂರು: ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು ನೋಡಬಯಸುವ ಪ್ರೇಕ್ಷಕರಿಗಾಗಿ ೧೯೭೫ರಲ್ಲಿ ತೆರೆಕಂಡ 'ದಾರಿ ತಪ್ಪಿದ ಮಗ’ ಮತ್ತೆ ಹೊಸ ಅವತಾರದಲ್ಲಿ ಬರಲಿದೆ.

ಅಂದು ಪೇಕೇಟಿ ಶಿವರಾಂ ನಿರ್ಮಿಸಿ ನಿರ್ದೇಶಿಸಿದ್ದ ಬಹುತಾರಾಗಣದ ಚಿತ್ರದಲ್ಲಿ ರಸಿಕರ ರಾಜ, ಕರ್ನಾಟಕ ರತ್ನ ಡಾ ರಾಜ್‌ಕುಮಾರ್, ಜಯಮಾಲಾ, ಆರತಿ, ಕಲ್ಪನಾ, ಮಂಜುಳ ನಾಯಕ, ನಾಯಕಿಯರಾಗಿದ್ದರೆ, ಪೋಷಕ ಪಾತ್ರದಲ್ಲಿ ಎಂ ವಿ ರಾಜಮ್ಮ, ವಜ್ರಮುನಿ, ಕೆ ಎಸ್ ಅಶ್ವತ್ಥ್ ಮೊದಲಾದವರಿದ್ದಾರೆ.

ಇದೇ ನವೆಂಬರ್ 22ರಂದು ದಾರಿತಪ್ಪಿದ ಮಗ ಮತ್ತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 

ಅಂದು 35 ಎಂ ಎಂನಲ್ಲಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ 7.1 ಡಿಟಿಎಸ್ 2ಕೆ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುನಿರಾಜು ಅವರು ಚಿತ್ರ ನಿರ್ಮಾಣ ಸಂಸ್ಥೆ ಜಯಪ್ರಭ ಪ್ರೊಡಕ್ಷನ್ಸ್ ಮೂಲಕ ಹೊರತರುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT