ಬ್ರಹ್ಮಚಾರಿ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಕನ್ನಡ ಚಿತ್ರೋದ್ಯಮದಲ್ಲೇ ಮೊದಲು! 'ಬ್ರಹ್ಮಚಾರಿ''ಗಾಗಿ ಸಂಜಿತ್ ಹೆಗ್ಡೆ, ಸುಪ್ರಿಯಾ ರಾಮ್ ಲೈವ್ ಶೋ

ಸಂಜಿತ್ ಹೆಗ್ಡೆ ಹಾಗೂ ಸುಪ್ರಿಯಾ ರಾಮ್ ಜೋಡಿ "ಬ್ರಹ್ಮಚಾರಿ" ಚಿತ್ರದ ಲೈವ್ ಸಾಂಗ್ ನಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರೋದ್ಯಮದಲ್ಲೇ ಈ ಬಗೆಯ ಮೊದಲ ಪ್ರಯತ್ನವಾಗಿರಲಿದೆ ಎಂದು ವರದಿ ಹೇಳಿದೆ.

ಸಂಜಿತ್ ಹೆಗ್ಡೆ ಹಾಗೂ ಸುಪ್ರಿಯಾ ರಾಮ್ ಜೋಡಿ "ಬ್ರಹ್ಮಚಾರಿ" ಚಿತ್ರದ ಲೈವ್ ಸಾಂಗ್ ನಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರೋದ್ಯಮದಲ್ಲೇ ಈ ಬಗೆಯ ಮೊದಲ ಪ್ರಯತ್ನವಾಗಿರಲಿದೆ ಎಂದು ವರದಿ ಹೇಳಿದೆ.

“ಸೋಶಿಯಲ್ ಮೀಡಿಯಾ ಅಥವಾ ರೇಡಿಯೊದಲ್ಲಿ ಅನಾವರಣಗೊಳ್ಳುವ ಹಾಡನ್ನು ನೂಮ್ ಆಗಿ ಮಾಡಲಾಗಿದೆ. ಲೈವ್ ಪ್ರದರ್ಶನದೊಂದಿಗೆ ಟ್ರ್ಯಾಕ್ ಬಿಡುಗಡೆಯಾಗುತ್ತಿರುವುದು ಇದೇ ಮೊದಲು, ಇದು ಒಂದು ಅನನ್ಯ ಅನುಭವವಾಗಿರುತ್ತದೆ ”ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಗಾಯಕರು ಕೇಳುಗರಿಗೆ ರೋಮ್ಯಾಂಟಿಕ್ ಮಧುರ ಅನುಭವವನ್ನು ನೀಡಲಿದ್ದಾರೆ ಎನ್ನಲಾಗಿದೆ.

ಇದು ಎಂಥಾ ಮಿಲನ- ವೆಂಬರ್ 15 ರಂದು ಮಂತ್ರಿ ಮಾಲ್‌ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಲಿದೆ. ಹಾಡಿಗೆ ಸಾಹಿತ್ಯವನ್ನು ನಾಗೇಂದ್ರ ಬರೆದಿದ್ದರೆ ಸಂಗೀತವನ್ನು ಬ್ರಹ್ಮ ವಿಶ್ ಸಂಯೋಜಿಸಿದ್ದಾರೆ. "ಬ್ರಹ್ಮಚಾರಿ"ಯಲ್ಲಿ ಇದೇ ಮೊದಲ ಬಾರಿಗೆ ಗೆ ಸತೀಶ್ ನಿನಾಸಂ ಮತ್ತು ಅದಿತಿ ಪ್ರಭುದೇವ  ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ತನ್ನ ಟ್ರೇಲರ್‌ಗಳು ಮತ್ತು ಹಾಡುಗಳೊಂದಿಗೆ ಸದ್ದು ಮಾಡುತ್ತಿರುವ ಕಾಮಿಡಿ ಎಂಟರ್‌ಟೈನರ್ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.ಚಿತ್ರವು ನವೆಂಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು ತಯಾರಕರು ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ನಂತರ ಅಂತಿಮ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವವರಿದ್ದಾರೆ. ಉದಯ್ ಕೆ ಮೇಥಾ ನಿರ್ಮಾಣದ ಈ ಚಿತ್ರದಲ್ಲಿ ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT