ಬ್ರಹ್ಮಚಾರಿ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಕನ್ನಡ ಚಿತ್ರೋದ್ಯಮದಲ್ಲೇ ಮೊದಲು! 'ಬ್ರಹ್ಮಚಾರಿ''ಗಾಗಿ ಸಂಜಿತ್ ಹೆಗ್ಡೆ, ಸುಪ್ರಿಯಾ ರಾಮ್ ಲೈವ್ ಶೋ

ಸಂಜಿತ್ ಹೆಗ್ಡೆ ಹಾಗೂ ಸುಪ್ರಿಯಾ ರಾಮ್ ಜೋಡಿ "ಬ್ರಹ್ಮಚಾರಿ" ಚಿತ್ರದ ಲೈವ್ ಸಾಂಗ್ ನಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರೋದ್ಯಮದಲ್ಲೇ ಈ ಬಗೆಯ ಮೊದಲ ಪ್ರಯತ್ನವಾಗಿರಲಿದೆ ಎಂದು ವರದಿ ಹೇಳಿದೆ.

ಸಂಜಿತ್ ಹೆಗ್ಡೆ ಹಾಗೂ ಸುಪ್ರಿಯಾ ರಾಮ್ ಜೋಡಿ "ಬ್ರಹ್ಮಚಾರಿ" ಚಿತ್ರದ ಲೈವ್ ಸಾಂಗ್ ನಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರೋದ್ಯಮದಲ್ಲೇ ಈ ಬಗೆಯ ಮೊದಲ ಪ್ರಯತ್ನವಾಗಿರಲಿದೆ ಎಂದು ವರದಿ ಹೇಳಿದೆ.

“ಸೋಶಿಯಲ್ ಮೀಡಿಯಾ ಅಥವಾ ರೇಡಿಯೊದಲ್ಲಿ ಅನಾವರಣಗೊಳ್ಳುವ ಹಾಡನ್ನು ನೂಮ್ ಆಗಿ ಮಾಡಲಾಗಿದೆ. ಲೈವ್ ಪ್ರದರ್ಶನದೊಂದಿಗೆ ಟ್ರ್ಯಾಕ್ ಬಿಡುಗಡೆಯಾಗುತ್ತಿರುವುದು ಇದೇ ಮೊದಲು, ಇದು ಒಂದು ಅನನ್ಯ ಅನುಭವವಾಗಿರುತ್ತದೆ ”ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಗಾಯಕರು ಕೇಳುಗರಿಗೆ ರೋಮ್ಯಾಂಟಿಕ್ ಮಧುರ ಅನುಭವವನ್ನು ನೀಡಲಿದ್ದಾರೆ ಎನ್ನಲಾಗಿದೆ.

ಇದು ಎಂಥಾ ಮಿಲನ- ವೆಂಬರ್ 15 ರಂದು ಮಂತ್ರಿ ಮಾಲ್‌ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಲಿದೆ. ಹಾಡಿಗೆ ಸಾಹಿತ್ಯವನ್ನು ನಾಗೇಂದ್ರ ಬರೆದಿದ್ದರೆ ಸಂಗೀತವನ್ನು ಬ್ರಹ್ಮ ವಿಶ್ ಸಂಯೋಜಿಸಿದ್ದಾರೆ. "ಬ್ರಹ್ಮಚಾರಿ"ಯಲ್ಲಿ ಇದೇ ಮೊದಲ ಬಾರಿಗೆ ಗೆ ಸತೀಶ್ ನಿನಾಸಂ ಮತ್ತು ಅದಿತಿ ಪ್ರಭುದೇವ  ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ತನ್ನ ಟ್ರೇಲರ್‌ಗಳು ಮತ್ತು ಹಾಡುಗಳೊಂದಿಗೆ ಸದ್ದು ಮಾಡುತ್ತಿರುವ ಕಾಮಿಡಿ ಎಂಟರ್‌ಟೈನರ್ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.ಚಿತ್ರವು ನವೆಂಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು ತಯಾರಕರು ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ನಂತರ ಅಂತಿಮ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವವರಿದ್ದಾರೆ. ಉದಯ್ ಕೆ ಮೇಥಾ ನಿರ್ಮಾಣದ ಈ ಚಿತ್ರದಲ್ಲಿ ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT