ಪುನೀತ್ ರಾಜ್‌ಕುಮಾರ್ 
ಸಿನಿಮಾ ಸುದ್ದಿ

ಪವರ್ ಸ್ಟಾರ್ ಪುನೀತ್ ಗೆ ಆಕ್ಷನ್ ಕಟ್ ಹೇಳಲಿರುವ 'ರಾಮ ರಾಮ ರೆ' ನಿರ್ದೇಶಕ?

"ರಾಮ ರಾಮ ರೇ" ಹಾಗೂ "ಒಂದಲ್ಲ ಎರಡಲ್ಲ" ಖ್ಯಾತಿಯ ನಿರ್ದೇಶಕರಾದ ಡಿ ಸತ್ಯ ಪ್ರಕಾಶ್ ಈಗ ವಿಶೇಷ ಸ್ಕ್ರಿಪ್ಟ್ ತಯಾರಿಯಲ್ಲಿ  ತೊಡಗಿದ್ದಾರೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ಸತ್ಯ ಪ್ರಕಾಶ್ ಅವರ ಮುಂಬರುವ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಲುತ್ತಿರುವುದು....

"ರಾಮ ರಾಮ ರೇ" ಹಾಗೂ "ಒಂದಲ್ಲ ಎರಡಲ್ಲ" ಖ್ಯಾತಿಯ ನಿರ್ದೇಶಕರಾದ ಡಿ ಸತ್ಯ ಪ್ರಕಾಶ್ ಈಗ ವಿಶೇಷ ಸ್ಕ್ರಿಪ್ಟ್ ತಯಾರಿಯಲ್ಲಿ  ತೊಡಗಿದ್ದಾರೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ಸತ್ಯ ಪ್ರಕಾಶ್ ಅವರ ಮುಂಬರುವ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಲುತ್ತಿರುವುದು ಮಾತ್ರವಲ್ಲ ಪುನೀತ್ ಅವರ ಹೋಂ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ ಎನ್ನಲಾಗಿದೆ..

ಹೇಮಂತ್ ಎಂ ರಾವ್ ನಿರ್ದೇಶನದ ಕವಾಲುದಾರಿ, ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಚೊಚ್ಚಲ ಚಿತ್ರ, ಮಾಯಾಬಜಾರ್, ರಾಗಿಣಿ ಚಂದ್ರನ್ ಅಭಿನಯದ ಲಾ  ಸಮರ್ತ್ ನಿರ್ದೇಶನದ ಚಿತ್ರಗಳು ಇದಾಗಲೇ  ಪಿಆರ್ಕೆ ಬ್ಯಾನರ್ ನಿರ್ಮಿಸಿದೆ.ಸತ್ಯ ಪ್ರಕಾಶ್ ಅವರೊಂದಿಗಿನ ಚಿತ್ರವೀಗ ಪುನೀತ್ ಬ್ಯಾನರ್ ನಡಿ ನಿರ್ಮಾಣವಾಗಿ ಆರಲ್ಲಿ ಅವರೇ ನಾಯಕರಾಗಿ ನಟಿಸಿದ್ದರೆ ಅದೊಂದು ಹೊಸ ಮೈಲಿಗಲ್ಲಾಗುವುದು ಖಚಿತವೆಂದು ಮೂಲಗಳು ಹೇಳಿದೆ.. ಪವರ್ ಸ್ಟಾರ್‌ಗಾಗಿ ಸತ್ಯ ಪ್ರಕಾಶ್ ಯಾವ ರೀತಿಯ ಸ್ಕ್ರಿಪ್ಟ್ ತಯಾರಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.ಇದಕ್ಕಾಗಿ ನಿರ್ಮಾಪಕರ ತಂಡದಿಂದ ಅಂತಿಮ ಘೋಷಣೆಯಾಗಬೇಕಿದೆ.

ನಟಸಾರ್ವಭೌಮ ಚಿತ್ರದ ನಾಯಕನಾಗಿದ್ದ ಪುನೀತ್ ಪ್ರಸ್ತುತ ಸಂತೋಷ್ ಆನಂದ್ ರಾಮ್  ನಿರ್ದೇಶನದ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹೊಂಬಾಳೆ  ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರದ ಮಾತಿನ ಭಾಗಗಳು ಕಡೆ ಹಂತದಲ್ಲಿದೆ.ಹಾಡುಗಳ ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

. ಸತ್ಯ ಪ್ರಕಾಶ್ ಅವರೊಂದಿಗಿನ ಚಿತ್ರವು 2020 ರಲ್ಲಿ ಅವರು ಪ್ರಾರಂಭಿಸಲಿರುವ ಯೋಜನೆಗಳಲ್ಲಿ ಒಂದಾಗಲಿದೆ. ಜೇಮ್ಸ್ ಚಿತ್ರಕ್ಕಾಗಿ ನಿರ್ದೇಶಕ ಚೇತನ್ ಕುಮಾರ್ ಅವರೊಂದಿಗೆ ಕೈಜೋಡಿಸಿರುವ ಪುನೀತ್  ಈ ಎರಡು ಚಿತ್ರಗಳ ನಡುವೆ ತಮ್ಮ ಸಮಯವನ್ನು ಸರಿದೂಗಿಸಲು ಯೋಜಿಸಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT