50ನೇ ಐಎಫ್ ಎಫ್ ಐ 
ಸಿನಿಮಾ ಸುದ್ದಿ

50ನೇ ಐಎಫ್ ಎಫ್ ಐನಲ್ಲಿ ಅಮಿತಾಬ್ ಆಯ್ದ ಚಲನಚಿತ್ರಗಳು ಸೇರಿದಂತೆ 241 ಚಲನಚಿತ್ರಗಳ ಪ್ರದರ್ಶನ

ಭಾರತದ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 76 ದೇಶಗಳ 200 ಅತ್ಯುತ್ತು ಚಲನಚಿತ್ರಗಳು, 26 ವಿಶಿಷ್ಠ ಚಲನಚಿತ್ರಗಳು ಮತ್ತು ಭಾರತೀಯ ಪನೋರಮಾ ವಿಭಾಗದಲ್ಲಿ 15 ವೈಶಿಷ್ಟ್ಯ ರಹಿತ ಚಲನಚಿತ್ರಗಳನ್ನೊಳಗೊಂಡಂತೆ  241 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ನವದೆಹಲಿ: ಭಾರತದ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 76 ದೇಶಗಳ 200 ಅತ್ಯುತ್ತು ಚಲನಚಿತ್ರಗಳು, 26 ವಿಶಿಷ್ಠ ಚಲನಚಿತ್ರಗಳು ಮತ್ತು ಭಾರತೀಯ ಪನೋರಮಾ ವಿಭಾಗದಲ್ಲಿ 15 ವೈಶಿಷ್ಟ್ಯ ರಹಿತ ಚಲನಚಿತ್ರಗಳನ್ನೊಳಗೊಂಡಂತೆ  241 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸುವರ್ಣ ಮಹೋತ್ಸವ ಆವೃತ್ತಿಯಲ್ಲಿ ಸುಮಾರು 10 ಸಾವಿರ ಚಿತ್ರ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದೆ. ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈ ವರ್ಷ ಐಎಫ್ ಎಫ್ ಐ ತನ್ನ ಸುವರ್ಣ ಮಹೋತ್ಸವ ಆವೃತ್ತಿಯನ್ನು ಆಚರಿಸುತ್ತಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಅಮಿತಾಬ್ ಬಚ್ಚನ್  ಅವರು ಸಿನಿಮಾಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು 50ನೇ ಆವೃತ್ತಿಯಲ್ಲಿ ಅವರ ಪರಿಣಾಮಕಾರಿ ಮತ್ತು ಮನರಂಜನೆಯ ಚಿತ್ರಗಳ ಪ್ಯಾಕೇಜ್ ಮೂಲಕ ಗೌರವಿಸಲಾಗುತ್ತದೆ ಮತ್ತು ಆಚರಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ 2019ರಲ್ಲಿ 50 ವರ್ಷಗಳನ್ನು ಪೂರೈಸಿದ ವಿವಿಧ ಭಾಷೆಗಳ 12 ಪ್ರಮುಖ ಚಲನಚಿತ್ರಗಳನ್ನು ಸಹ ಪ್ರದರ್ಶಿಸಲಾಗುವುದು, ಇಂಡಿಯನ್ ಪನೋರಮಾ ಐಎಫ್ ಐಎಫ್ ಐನ ಪ್ರಮುಖ ವಿಭಾಗವಾಗಿದೆ. ಇದು ವರ್ಷದ ಸಮಕಾಲೀನ ಭಾರತೀಯ ವೈಶಿಷ್ಟ್ಯ ಮತ್ತು ವೈಶಿಷ್ಟೇತರ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ ಎಂದು ಅವರು ತಿಳಿಸಿದರು.

ಅಭಿಷೇಕ್ ಷಾ ನಿರ್ದೇಶನದ ಹೆಲ್ಲಾರೊ ( ಗುಜರಾತಿ ) ಚಿತ್ರವನ್ನು 2019 ಭಾರತೀಯ ಪನೋರಮಾದ ಆರಂಭಿಕ ಚಲಚಿತ್ರವಾಗಿ ಆಯ್ಕೆ ಮಾಡಲಾಗಿದೆ. ನಾನ್ ಫೀಚರ್ ವಿಭಾಗದ ತೀರ್ಪುಗಾರರ ಮಂಡಳಿಗೆ ಪ್ರಸಿದ್ಧ ಸಾಕ್ಷ್ಯಚಿತ್ರ ನಿರ್ಮಾಪಕ ರಾಜೇಂದ್ರ ಜಂಗ್ಲೆ ನೇತೃತ್ವ ವಹಿಸಿದ್ದಾರೆ. ಈ ವಿಭಾಗದಲ್ಲಿ ಭಾರತೀಯ ಪನೋರಮಾ 2019ರ ಆರಂಭಿಕ ಚಿತ್ರ ಅಶಿಶ್ ಪಾಂಡೆ ನಿರ್ದೇಶನದ ಕಾಶ್ಮೀರಿ ಚಿತ್ರ 'ನೂರ್ಹ್ ' ಈ ವರ್ಷದ ಚಲನಚಿತ್ರೋತ್ಸವದಲ್ಲಿ ರಷ್ಯಾ ಪಾಲುದಾರ ರಾಷ್ಟ್ರವಾಗಲಿದೆ ಎಂದು ಜಾವೇಡಕರ್ ಪ್ರಕಟಿಸಿದ್ದಾರೆ. 

ಮೊದಲ ಸಲ ದೃಷ್ಟಿ ಹೀನರಿಗೆ ಆಡಿಯೋ ವಿವರಣೆಯನ್ನು ಹೊಂದಿರುವ ಚಲನಚಿತ್ರಗಳನ್ನು ಸಹ ಪ್ರದರ್ಶಿಸಲಾಗುತ್ತದೆ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT