ಶ್ರೀಲೀಲಾ 
ಸಿನಿಮಾ ಸುದ್ದಿ

ಭರಾಟೆ ನನಗೆ ಸಂಪೂರ್ಣ ಭಿನ್ನ ಅನುಭವ ನೀಡಿದ ಚಿತ್ರ: ಶ್ರೀಲೀಲಾ 

ನಾಯಕಿ ಶ್ರೀಲೀಲಾ ಕಳೆದೊಂದು ತಿಂಗಳಿನಿಂದ ಕೆಲಸದ ಒತ್ತಡದಲ್ಲಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಕಿಸ್ ನಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿರುವ ಶ್ರೀಲೀಲಾ ಎರಡನೇ ಚಿತ್ರ ಭರಾಟೆಯ ಬಿಡುಗಡೆಗೆ ಇದಿರು ನೋಡುತ್ತಿದ್ದಾರೆ.

ನಾಯಕಿ ಶ್ರೀಲೀಲಾ ಕಳೆದೊಂದು ತಿಂಗಳಿನಿಂದ ಕೆಲಸದ ಒತ್ತಡದಲ್ಲಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಕಿಸ್ ನಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿರುವ ಶ್ರೀಲೀಲಾ ಎರಡನೇ ಚಿತ್ರ ಭರಾಟೆಯ ಬಿಡುಗಡೆಗೆ ಇದಿರು ನೋಡುತ್ತಿದ್ದಾರೆ.


ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದ ನಾಯಕ ಶ್ರೀಮುರಳಿ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ 18ರಂದು ತೆರೆಗೆ ಬರಲಿದೆ.ಭರಾಟೆ ಎಂದರೆ ಶಬ್ದ, ಇದು ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆ ಮಾಡುತ್ತದೆ. ಭರಾಟೆ ಚಿತ್ರದಲ್ಲಿ ಶಬ್ದದ ಭಾವನೆಯನ್ನು ಹಲವು ಭಾವನೆಗಳ ಮೂಲಕ ತೋರಿಸಲಾಗುತ್ತದೆ. ಕಿಸ್ ಚಿತ್ರ ಮಾಡುತ್ತಿರುವ ವೇಳೆಗೆ ಭರಾಟೆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. ಇದು ಮೊದಲ ಚಿತ್ರಕ್ಕಿಂತ ಸಂಪೂರ್ಣ ಭಿನ್ನ. ಭರಾಟೆ ಚಿತ್ರದಲ್ಲಿ ಸ್ಟಾರ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಅಲ್ಲದೆ ನನಗೆ ನಟಿಸಲು ಅವಕಾಶ ಸಿಕ್ಕಿದೆ, ಭರತನಾಟ್ಯ, ಕುದುರೆ ಸವಾರಿ, ವೀಣೆ ನುಡಿಸುವ ಅವಕಾಶ ಕೂಡ ಸಿಕ್ಕಿದೆ ಎಂದರು ಶ್ರೀಲೀಲಾ.


ಭರಾಟೆ ಚಿತ್ರೀಕರಣ ವೇಳೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತಂತೆ. ಹಾಡಿನ ಚಿತ್ರೀಕರಣ ವೇಳೆ ಬೆಟ್ಟದಿಂದ ಉರುಳುವ ದೃಶ್ಯವಿತ್ತು. ನಾನು ಭಾರೀ ಗಾತ್ರದ ಗೌನ್ ಧರಿಸಿದ್ದೆ. ಅದು ಹೆಲಿಕಾಪ್ಟರ್ ಶೂಟ್. ಶ್ರೀಮುರಳಿ ಮತ್ತು ನಾನು ಹಾಡೊಂದಕ್ಕೆ ನಟಿಸಬೇಕಾಗಿತ್ತು. ನಂತರ ನಾನು ಓಡಿ ಹೋಗಿ ಅವಿತು ಕೂರಬೇಕು. ಪರ್ವತದ ಮೇಲೆ ನಿಂತಿದ್ದೆವು. ಹಿಂದೆ ಜೋರಾಗಿ ಓಡುವಾಗ ಜಾರಿದೆ. ಪರ್ವತದ ಕೆಳಗೆ ಉರುಳುತ್ತಾ ಹೋದೆ. ಅದೃಷ್ಟವಶಾತ್ ಕಲ್ಲೊಂದು ಮಧ್ಯದಲ್ಲಿ ತಡೆದು ನನ್ನನ್ನು ಕಾಪಾಡಿತು. ಭಯವನ್ನು ನಿವಾರಿಸಲು ಮುಂದಿನ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾದೆ ಎಂದು ಹೇಳುತ್ತಾರೆ ಶ್ರೀಲೀಲಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT