ಆಡಿಯೋ ಬಿಡುಗಡೆ 
ಸಿನಿಮಾ ಸುದ್ದಿ

ಮುದ್ದೆ ಉಂಡವರ 'ಆನೆಬಲ'

ಗ್ರಾಮೀಣ ಸೊಗಡಿನ, ಅದರಲ್ಲೂ ವಿಶೇಷವಾಗಿ ಮಂಡ್ಯ ನೆಲದ ಕಥಾಹಂದರದ ಚಿತ್ರ 'ಆನೆಬಲ' ಧ್ವನಿಸಾಂದ್ರಿಕೆ ಬಿಡುಗಡೆಯಾಗಿದೆ.

ಬೆಂಗಳೂರು: ಗ್ರಾಮೀಣ ಸೊಗಡಿನ, ಅದರಲ್ಲೂ ವಿಶೇಷವಾಗಿ ಮಂಡ್ಯ ನೆಲದ ಕಥಾಹಂದರದ ಚಿತ್ರ 'ಆನೆಬಲ' ಧ್ವನಿ ಸುರಳಿ ಇತ್ತೀಚಿಗೆ ಬಿಡುಗಡೆಯಾಗಿದೆ.

ರಾಗಿ ಮುದ್ದೆಯ ಮಹಿಮೆ ಸಾರುವ 'ಮುದ್ದೆ ಮುದ್ದೆ ರಾಗಿ ಮುದ್ದೆ, ನಿದ್ದೆ ನಿದ್ದೆ ತಂಪು ನಿದ್ದೆ', 'ಮಳವಳ್ಳಿ ಜಾತ್ರೇಲಿ' ಹಾಡುಗಳ ಸಾಹಿತ್ಯ, ಸಂಗೀತ ಕೇಳುಗರ ಗಮನ ಸೆಳೆಯುತ್ತದೆ. ಮೇಕಿಂಗ್ ಕೂಡ ಸೊಗಸಾಗಿ ಮೂಡಿ ಬಂದಿದೆ.

ನಾಯಕ ನಟ ಸಾಗರ್ ದೇಸಿ ಸ್ಟೆಪ್ಸ್ ಸಖತ್ತಾಗಿದೆ. ಜನತಾ ಟಾಕೀಸ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಎ ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಹಾಗೂ ಎಮ್ ಎಸ್ ರಘುನಂದನ್ ಬಂಡವಾಳ ಹೂಡಿದ್ದಾರೆ. ಸೂನಗಹಳ್ಳಿ ರಾಜು ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವಿದೆ.

ಚಿತ್ರದುದ್ದಕ್ಕೂ ರಾಗಿ ಹಾಗೂ ರಾಗಿ ಮುದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ಇದುವರೆಗೂ ಈ ವಸ್ತು ವಿಷಯದಡಿ ಯಾವುದೇ ಚಿತ್ರ ಮೂಡಿಬಂದಿಲ್ಲ. ಜತೆಗೆ ಜನಪದ ಸಂಸ್ಕೃತಿ, ಸೋಬಾನೆ ಪದಗಳ ಬಳಕೆ, ಹಳ್ಳಿಯ ಸೊಬಗನ್ನು ಅತ್ಯದ್ಭುತವಾಗಿ ಚಿತ್ರಿಸಲಾಗಿದೆ ಎಂದು ನಿರ್ದೇಶಕ ಸೂನಗಹಳ್ಳಿ ರಾಜು ತಿಳಿಸಿದ್ದಾರೆ.

ಹಳ್ಳಿಯ ಕೆಲಸಗಳಿಗೆ ಕೈ ಜೋಡಿಸುವ ಯುವಪಡೆ, ಓದಿನ ಜತೆಗೆ ಅವರ ತುಂಟಾಟ, ತಮಾಷೆಗಳನ್ನು ಮಂಡ್ಯ ನೆಲದ ಭಾಷೆಯಲ್ಲಿ ಹಾಸ್ಯಮಯವಾಗಿ ಹೆಣೆಯಲಾಗಿದೆ. ೧೨೦ಕ್ಕೂ ಹೆಚ್ಚುಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ೧೦೨ ವರ್ಷ ವಯಸ್ಸಿನ ವಳಗೆರೆಹಳ್ಳಿ ಗೌರಮ್ಮ ಕೂಡ ಪಾತ್ರವೊಂದಕ್ಕೆ ಜೀವ ತುಂಬಿರುವುದಲ್ಲದೆ ಸ್ವತಃ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದಲ್ಲಿ ನೈಜತೆ ಮತ್ತು ಸಹಜತೆ ಢಾಳಾಗಿದೆ ಎಂದಿದ್ದಾರೆ.

'ಮುದ್ದೆ ಮುದ್ದೆ' ಹಾಡಿಗೆ ಡಾ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದರೆ, 'ಮಳವಳ್ಳಿ ಜಾತ್ರೇಲಿ ತುಂಡ್ ಹೈಕ್ಳಾ ದರ್ಬಾರು' ಹಾಡನ್ನು ನಿರ್ದೇಶಕ ಸೂನಗಹಳ್ಳಿ ರಾಜು ಅವರೇ ಬರೆದಿದ್ದಾರೆ.

ನಿರ್ಮಾಪಕ ಎ ವಿ ವೇಣುಗೋಪಾಲ್, ನಾಟಿ ಸೈಲ್ ಕತೆ ಮತ್ತು ನೇರ ನಿರೂಪಣೆಯ ಕತೆಯನ್ನು ಕೇಳಿ, ಇಷ್ಟಪಟ್ಟು ಬಂಡವಾಳ ಹೂಡಿದ್ದೇವೆ ಚಿತ್ರೀಕರಣ ಮುಕ್ತಾಯವಾಗಿದ್ದು, ಡಿಸೆಂಬರ್ ಗೆ ತೆರೆಗೆ ತರುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. 

'ಆನೆಬಲ' ಚಿತ್ರದ ತಾರಾಗಣದಲ್ಲಿ ಸಾಗರ್, ರಕ್ಷಿತ, ಮಲ್ಲರಾಜು, ಚಿರಂಜೀವಿ, ಹರೀಶ್ ಶೆಟ್ಟಿ, ಮುತ್ತುರಾಜು, ಕೀಲಾರ ಉದಯ್, ಶಂಭೂಗೌಡ, ಸಿದ್ದು, ರೂಪ, ಸುಮಾ, ಕಾಳೇನಹಳ್ಳಿ ಕೆಂಚೇಗೌಡ, ಲಂಕೇಶ್ ಸೇರಿದಂತೆ ೧೨೦ಕ್ಕೂ ಹೆಚ್ಚು ಕಲಾವಿದರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT