ಸಿನಿಮಾ ಸುದ್ದಿ

ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ಜಯಶ್ರೀಯನ್ನು ಆಸ್ತಿಗಾಗಿ ನಡುರಾತ್ರಿ ಬೀದಿಗೆ ತಳ್ಳಿದ್ರಾ ಸೋದರ ಮಾವ!

Vishwanath S

ಬೆಂಗಳೂರು: ಕನ್ನಡದ ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯ ಮತ್ತು ಅವರ ತಾಯಿಯನ್ನು ಸ್ವಂತ ಸೋದರ ಮಾವನೇ ನಡುರಾತ್ರಿ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ನಡೆದಿದೆ.

ಈವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ತಮ್ಮ ಸೋದರ ಮಾವನ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಸೋದರ ಮಾನ ಗಿರೀಶ್ ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ನಡುರಾತ್ರಿ ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಆಸ್ತಿ ವಿವಾದ ಮತ್ತು ಖಾಸಗಿ ಕಾರಣಗಳಿಂದಾಗಿ ಜಯಶ್ರೀ ಮತ್ತು ಗಿರೀಶ್ ನಡುವೆ ಜಗಳವಾಗಿದ್ದು ಕಳೆದ ರಾತ್ರಿ ಜಯಶ್ರೀ ಮತ್ತವರ ತಾಯಿಯನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.

SCROLL FOR NEXT