ಅನುಷ್ಕಾ ಶೆಟ್ಟಿ 
ಸಿನಿಮಾ ಸುದ್ದಿ

ದೇಹದ ತೂಕ ಇಳಿಸಿ‘ಮಾತು ಕಳೆದುಕೊಂಡ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ!

ಪ್ರಯೋಗಾತ್ಮಕ ಚಿತ್ರ 'ಸೈಜ್​ ಝೀರೊ'ದಲ್ಲಿಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್​ ಸ್ವೀಟಿ, ಕನ್ನಡತಿ ಅನುಷ್ಕಾ ಶೆಟ್ಟಿ, ಆ ಬಳಿಕ  ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್​ಗಳನ್ನು ಕಳೆದುಕೊಂಡಿದ್ದರು

ಹೈದರಾಬಾದ್/ಬೆಂಗಳೂರು: ಪ್ರಯೋಗಾತ್ಮಕ ಚಿತ್ರ 'ಸೈಜ್​ ಝೀರೊ'ದಲ್ಲಿಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್​ ಸ್ವೀಟಿ, ಕನ್ನಡತಿ ಅನುಷ್ಕಾ ಶೆಟ್ಟಿ, ಆ ಬಳಿಕ  ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್​ಗಳನ್ನು ಕಳೆದುಕೊಂಡಿದ್ದರು.ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದರಾದರೂ,ಯಾವುದೂ ಫಲ ನೀಡಲಿಲ್ಲ.

 ಕಡೆಗೆ'ಬಾಹುಬಲಿ' ಸಿನಿಮಾಗಾಗಿ ಹೇಳುಕೊಳ್ಳುವಷ್ಟು ಅಲ್ಲವಾದರೂ, ತಕ್ಕಮಟ್ಟಿಗೆ ತೆಳ್ಳಗಾಗಿದ್ದರು. ನಂತರ'ಭಾಗಮತಿ'ಸಿನಿಮಾದಲ್ಲೂ ಅವರು ಕೊಂಚ ದಪ್ಪವಾಗಿಯೇ ಕಾಣುತ್ತಿದ್ದರು.ಇದಾದ ನಂತರ ಅವರಿಗೆ ಯಾವುದೇ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿರಲಿಲ್ಲ.

ಇದರಿಂದ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಂಡು,ಭಾರತಕ್ಕೆ ಮರಳುವ ಮುನ್ನವೇ ಅವರಿಗೆಹಾಲಿವುಡ್​ ​ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊಂದು ಅರಸಿ ಬಂದಿತ್ತು.ಆ ಸಿನಿಮಾಗಾಗಿ ಫೋಟೋಶೂಟ್​ ಸಹ ಮಾಡಿಸಲಾಗಿತ್ತು.ಆದರೆ ಈಗ ಬಂದಿರುವ ಹೊಸ ಸುದ್ದಿ ಏನು ಗೊತ್ತಾ? ಅನುಷ್ಕಾ‘ಮಾತನಾಡದ ಸ್ಥಿತಿ ತಲುಪಿದ್ದಾರಂತೆ’
  
ಆಘಾತಕ್ಕೆ ಒಳಗಾಗಬೇಡಿ, ಅನುಷ್ಕಾ ದೇಹದ ತೂಕ ಇಳಿಸಿಕೊಳ್ಳದೆ ಹೋಗಿದ್ದರೆ, ಹೊಸ ಸಿನಿಮಾದ ‘ಸೈಲೆನ್ಸ್’ ನಲ್ಲಿ ಮಾತು ಬಾರದ ಪಾತ್ರ ಅವರಿಗೆ ಸಿಗುತ್ತಿರಲಿಲ್ಲ.ಐದು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಅಭಿನಯಿಸಲಿದ್ದು, ಮಾತು ಬಾರದ ಕಲಾವಿದೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಹೆಸರು ಸಾಕ್ಷಿ.
 
 ‘ಸೈಲೆನ್ಸ್’ ಚಿತ್ರದಲ್ಲಿ ಆರ್​ ಮಾಧವನ್​, ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು ಹಾಗೂ ಮೈಕೆಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಂಗ್ಲ​, ಹಿಂದಿ​, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿಯೂ ಚಿತ್ರ ತೆರೆ ಕಾಣಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT