ಅನುಪಮಾ ಪರಮೇಶ್ವರನ್ 
ಸಿನಿಮಾ ಸುದ್ದಿ

ಯಾರದೋ ದೇಹಕ್ಕೆ ನಟಿಯ ತಲೆ ಅಂಟಿಸಿ ಪೋಸ್ಟ್: ಗರಂ ಆದ 'ನಟಸಾರ್ವಭೌಮ' ಬೆಡಗಿ ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಬಹುಭಾಷಾ ನಟಿ, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ "ನಟಸಾರ್ವಭೌಮ" ಚಿತ್ರದಲ್ಲಿ ಅಭಿನಯಿಸಿದ ಈ ನಟಿಗೆ ಇದೀಗ ತಡೆಯಲಾಗದಷ್ಟು ಕೋಪ ಬಂದಿದೆ. ಇದಕ್ಕೆ ಕಾರಣವೆಂದರೆ ಅವರ ಫೇಸ್‍ಬುಕ್ ಖಾತೆ ಹ್ಯಾಕ್ ಆಗಿರುವುದು. ಮಾತ್ರವಲ್ಲ ಕಿಡಿಗೇಡಿಗಳು ಮಾರ್ಫ್ ಮಾಡಿದ ಫೋಟೋಗಳನ್ನು ಆಕೆಯ ಖಾತೆಯಲ್ಲಿ ಅಪ್ ಮಾಡಿದ್ದಾರೆ

ಅನುಪಮಾ ಪರಮೇಶ್ವರನ್ ಬಹುಭಾಷಾ ನಟಿ, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ "ನಟಸಾರ್ವಭೌಮ" ಚಿತ್ರದಲ್ಲಿ ಅಭಿನಯಿಸಿದ ಈ ನಟಿಗೆ ಇದೀಗ ತಡೆಯಲಾಗದಷ್ಟು ಕೋಪ ಬಂದಿದೆ. ಇದಕ್ಕೆ ಕಾರಣವೆಂದರೆ ಅವರ ಫೇಸ್‍ಬುಕ್ ಖಾತೆ ಹ್ಯಾಕ್ ಆಗಿರುವುದು. ಮಾತ್ರವಲ್ಲ ಕಿಡಿಗೇಡಿಗಳು ಮಾರ್ಫ್ ಮಾಡಿದ ಫೋಟೋಗಳನ್ನು ಆಕೆಯ ಖಾತೆಯಲ್ಲಿ ಅಪ್ ಮಾಡಿದ್ದಾರೆ

ಈ ಸಂಬಂಧ ಇದೀಗ ನಟಿ ಅನುಪಮಾ ಸೈಬರ್ ಕ್ರೈಂ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ಯಾವಉದೋ ಕಿಡಿಗೇಡಿಗಳು ಯಾರದೋ ಫೋಟೋಗೆ ಅನುಪಮಾ ಪರಮೇಶ್ವರನ್ ಅವರ ತಲೆಯನ್ನು ಅಂಟಿಸಿ ಸಾಮಾಜಿಕ ತಾಣದಲ್ಲಿ ಅಪ್ ಮಾಡಿದ್ದಾರೆ. ಇದು ವೈರಲ್ ಆಗಿದ್ದು ನಟಿ ಇಂತಹಾ ಫೇಕ್ ಫೋಟೋಗಳನ್ನು ದಯವಿಟ್ಟು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

"ನಿಮ್ಮೆಲ್ಲರಲ್ಲಿ ವಿನಮ್ರ ಮನವಿ ದಯವಿಟ್ಟು ಮಾರ್ಫ್ ಮಾಡಿರುವ ಫೋಟೋ ಹಂಚಿಕೊಳ್ಳಬೇಡಿ. ಇದರಿಂದ ಅವರ ಮನಸಿಗೆ ತುಂಬಾ ಘಾಸಿ ಮಾಡುತ್ತದೆ. ಅವರು ಒಬ್ಬ ಹೆಣ್ಣು ಮಗಳು ಎಂಬುದನ್ನು ಮರೆಯಬೇಡಿ"  ನಟಿ ತನ್ನಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ಇಂತಹಾ ಫೇಕ್ ಫೋಟೋ ನಟಿಯ ಅಧಿಕೃತ ಖಾತೆಯಿಂದಲೇ ಅಪ್ ಆಗಿದ್ದು ಇದೀಗ ನಟಿ ಬೇರೆ ಸಾಮಾಜಿಕ ಮಾದ್ಯಮಗಳ ಮೂಲಕ ಅಭಿಮಾನಿಗಳಿಗೆ ಈ ಫೇಕ್ ಸುದ್ದಿ ಹಂಚಿಕೊಳ್ಳದಂತೆ ಕೋರಿದ್ದಾರೆ.

ಅನುಪಮಾ ಪರಮೇಶ್ವರನ್ ಸಧ್ಯ ತೆಲುಗಿನ "ಪಲುಕೆ ಬಂಗಾರಮಾಯೆರಾ" ಎಂಬ ಚಿತ್ರದಲ್ಲಿಆಭಿನಯಿಸುತ್ತಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕ ಈ ಚಿತ್ರದ ಶೂಟಿಂಗ್ ಮುಂದುವರಿಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT