ಫೃಥ್ವಿ ಅಂಬರ್ 
ಸಿನಿಮಾ ಸುದ್ದಿ

ಹುಟ್ಟು ಹಬ್ಬದಂದೇ ಪೃಥ್ವಿ ಅಂಬರ್ ಗುಡ್ ನ್ಯೂಸ್: 'ದಿಯಾ' ಹೀರೋ ಈಗ 'ಶುಗರ್ ಲೆಸ್'

ನಿರ್ದೇಶಕರಾಗಿ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿರುವ ಕೆ.ಎಂ. ಶಶಿಧರ್‌ 'ಶುಗರ್‌ಲೆಸ್‌' ಸಿನಿಮಾದ ಟೈಟಲ್‌ ಅನೌನ್ಸ್ ಮಾಡಿದ್ದರು. ಈ ಸಿನಿಮಾಗೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಹೆಸರು ಫೈನಲ್ ಆಗಿದೆ.

ನಿರ್ದೇಶಕರಾಗಿ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿರುವ ಕೆ.ಎಂ. ಶಶಿಧರ್‌ 'ಶುಗರ್‌ಲೆಸ್‌' ಸಿನಿಮಾದ ಟೈಟಲ್‌ ಅನೌನ್ಸ್ ಮಾಡಿದ್ದರು. ಈ ಸಿನಿಮಾಗೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಹೆಸರು ಫೈನಲ್ ಆಗಿದೆ.

'ಇದು ತುಂಬಾ ಹ್ಯೂಮರಸ್‌ ಆಗಿರುವ ಸಿನಿಮಾ. ಹಾಸ್ಯವೇ ಪ್ರಧಾನವಾಗಿರುತ್ತದೆ. ನಾನು ಸ್ಕ್ರಿಪ್ಟ್‌ ಮಾಡುವಾಗ ನನ್ನ ಸಿನಿಮಾದ ಹೀರೋ ಪಾತ್ರ ಹೇಗೆಲ್ಲ ಇರಬೇಕು ಎಂದುಕೊಂಡಿದ್ದೆನೋ, ಅದಕ್ಕೆ ಸೂಕ್ತವಾಗಿ ಪೃಥ್ವಿ ಇದ್ದಾರೆ. ನಮ್ಮ ಸಿನಿಮಾವನ್ನು ಅರ್ಪಿಸುತ್ತಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೊಂದಿಗೂ ಈ ಕುರಿತು ಚರ್ಚೆ ಮಾಡಿದೆ. ಆನಂತರ ಪೃಥ್ವಿ ಅವರನ್ನೇ ಫೈನಲ್ ಮಾಡಿದೆವು' ಎಂದು ಹೇಳಿದ್ದಾರೆ.

ನಿರ್ದೇಶಕ ಶಶಿಧರ್. ಈ ಹಿಂದೆ 'ಡಾಟರ್‌ ಆಫ್‌ ಪಾರ್ವತಮ್ಮ' ನಿರ್ಮಿಸಿದ್ದ ಶಶಿಧರ್‌ 'ಶುಗರ್‌ಲೆಸ್‌' ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಪೃಥ್ವಿ ಅಂಬರ್‌ ಜನ್ಮದಿನ. ಆ ಸಲುವಾಗಿ ಇಂದೇ ಈ ಘೋಷಣೆ ಮಾಡಿದ್ದಾರೆ ಶಶಿಧರ್‌. ಸದ್ಯ ಕೊರೊನಾ ಪರಿಸ್ಥಿತಿ ಇರುವುದರಿಂದ, ಸರಿಯಾದ ಸಮಯ ನೋಡಿಕೊಂಡು ಶೂಟಿಂಗ್ ಶುರು ಮಾಡುವುದಕ್ಕೆ ನಿರ್ದೇಶಕರು
ಪ್ಲ್ಯಾನ್ ಮಾಡಿಕೊಂಡಿದ್ದಾರೆ. 

'ರಾಮಾ ರಾಮಾ ರೇ' ಖ್ಯಾತಿಯ ಧರ್ಮಣ್ಣ ಕಡೂರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ. 'ನಾನು ಬೆಳೆದಿದ್ದು ಹಳ್ಳಿಯಲ್ಲೇ. ಹಾಗಾಗಿ ಬಹಳ ರಿಲೇಟ್‌ ಆಗುತ್ತೆ ಎನ್ನಿಸಿತು. ಚಿತ್ರದಲ್ಲಿ ಕಾಮಿಡಿ ತುಂಬಾ ಚೆನ್ನಾಗಿದೆ. ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ.

ದಿಯಾ ನಂತರ ಅನೇಕ ರೋಮ್ಯಾಂಟಿಕ್ ಸಿನಿಮಾ ಆಫರ್ ಗಳು ಬಂದವು, ಆದರೆ ವಿಭಿನ್ನ ಪಾತ್ರ ಮಾಡುವ ಆಸೆಯಿಂದ ಆ ಎಲ್ಲಾ ಆಫರ್ ಗಳನ್ನು ತಿರಸ್ಕರಿಸಿದೆ ಎಂದು ಪೃಥ್ವಿ ಅಂಬರ್ ತಿಳಿಸಿದ್ದಾರೆ. ಮುಂದಿನ ಐದು ಸಿನಿಮಾಗಳು ತುಂಬಾ ವಿಭಿನ್ನವಾಗಿದ್ದು, ಅದರಲ್ಲಿ ಶುಗರ್ ಲೆಸ್ ಕೂಡ ಒಂದಾಗಿದೆ ಎಂದು ಪೃಥ್ವಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT