ಸಿನಿಮಾ ಸುದ್ದಿ

'ಸರ್ಕಾರಿ ಹಿ.ಪ್ರಾ. ಶಾಲೆ..' ನನ್ನನ್ನು ಕೆರಾಡಿಯಿಂದ ದೆಹಲಿಗೆ ಕರೆದೊಯ್ದ ಚಿತ್ರ:  ರಿಷಬ್ ಶೆಟ್ಟಿ

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶದಲ್ಲಿ ಮೂಡಿಬಂದ ಕಡೆಯ ಚಿತ್ರ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು"ಗೆ ಎರಡು ವರ್ಷಗಳಾಗಿದೆ. "ಸರ್ಕಾರಿ ಹಿ.ಪ್ರ. ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ" ಚಿತ್ರ ಎರಡು ವರ್ಷದ ಹಿಂದೆ . ಆಗಸ್ಟ್ 24 ರಂದುತೆರೆಗೆ ಬಂದಿತ್ತು. ನಿರ್ದೇಶಕ ಹಾಗೂ  ಇಡೀ ತಂಡವು ಇಂದಿಗೂ ಜನರು ಈ ಚಿತ್ರದ ಮೇಲೆ ತೋರಿದ  ಪ್ರೀತಿಗಾಗಿ ಕೃತಜ್ಞರಾಗಿರಬೇಕು. ಎ

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶದಲ್ಲಿ ಮೂಡಿಬಂದ ಕಡೆಯ ಚಿತ್ರ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು"ಗೆ ಎರಡು ವರ್ಷಗಳಾಗಿದೆ. "ಸರ್ಕಾರಿ ಹಿ.ಪ್ರ. ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ" ಚಿತ್ರ ಎರಡು ವರ್ಷದ ಹಿಂದೆ . ಆಗಸ್ಟ್ 24 ರಂದುತೆರೆಗೆ ಬಂದಿತ್ತು. ನಿರ್ದೇಶಕ ಹಾಗೂ  ಇಡೀ ತಂಡವು ಇಂದಿಗೂ ಜನರು ಈ ಚಿತ್ರದ ಮೇಲೆ ತೋರಿದ  ಪ್ರೀತಿಗಾಗಿ ಕೃತಜ್ಞರಾಗಿರಬೇಕು. ಎಂದಿದ್ದಾರೆ.  ಕೇರಳದ ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಮಲಯಾಳಂ ಹೇರಿಕೆಯ ಬಗ್ಗೆ ಹೇಳಿದ್ದ ಈ ಚಿತ್ರ ಇತ್ತೀಚಿನ ದಿನಗಳಲ್ಲಿ ಕೆಲ ಪ್ರತಿಭಟನೆಗಳಿಗೆ ಸಹ ಪ್ರೇರಣೆ ನೀಡಿದೆ. 

ಬೋಧನಾ ಮಾಧ್ಯಮದಲ್ಲಿನ ಬದಲಾವಣೆಗಳಿಂದಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟಗಳು ಚಿತ್ರದ ತಿರುಳಾಗಿದ್ದು ಇದನ್ನು ಪ್ರೇಕ್ಷಕರು ದೊಡ್ಡ ಪ್ರಮಾಣದ ಸಂಭ್ರಮದೊಡನೆ ಸ್ವೀಕರಿಸಿದ್ದಾರೆ.

ಈ ಚಿತ್ರದಲ್ಲಿ ನಟರಾದ ಅನಂತ್ ನಾಗ್, ರಂಜನ್, ಸಂಪತ್, ಪ್ರಮೋದ್ ಶೆಟ್ಟಿ, ಸಪ್ತ ಪಾವೂರ್, ಮಹೇಂದ್ರ, ಸೋಹನ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಮನೀಶ್ ಹೀರೂರ್ ಮತ್ತಿತರರು ನಟಿಸಿದ್ದಾರೆ.  100 ದಿನಗಳ ಕಾಲ ಪ್ರದರ್ಶನ ಕಂಡ ಈ ಚಿತ್ರ  2019 ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದುಕೊಂಡಿತು.

"ಸರ್ಕಾರಿ... ಚಿತ್ರ ಬಹಳ ವಿಶೇಷವಾಗಿದೆ. ಅದು ಎರಡು ವರ್ಷಗಳನ್ನು ಪೂರೈಸಿದೆ ಎಂದು ನಾನು ಎಣಿಸಲೂ ಸಾಧ್ಯವಿಲ್ಲ. ರಾಷ್ಟ್ರೀಯ ಪ್ರಶಸ್ತಿಗಾಗಿ ನಮ್ಮನ್ನು ಕೆರಾಡಿಯಿಂದ ದೆಹಲಿಗೆ ಕರೆದೊಯ್ದ ಚಿತ್ರ ಇದಾಗಿದೆ, ಮತ್ತು ಇಡೀ ತಂಡವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಇದನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ”ಎಂದು ರಿಷಬ್ ಹೇಳುತ್ತಾರೆ.

“ನಾನು ವಿಶೇಷವಾಗಿ ಮಮ್ಮುಟ್ಟಿ, ಪ್ರವೀಣ ಮತ್ತು ಉಪಾಧ್ಯಾಯ ಪಾತ್ರಗಳನ್ನು ಅನ್ವೇಷಿಸಲು ಉದ್ದೇಶಿಸಿದ್ದು  ನನ್ನ ಮುಂದಿನ ಯೋಜನೆಗಳಲ್ಲಿ ಒಂದನ್ನು ನಾನು ಅದರ ಸುತ್ತಲೂ ತಯಾರಿಸಲು ಚಿಂತನೆ ನಡೆಸಿದ್ದೇನೆ.” ರಿಷಬ್ ಹೇಳಿದ್ದಾರೆ. 

 ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗಆಗಿದ್ದು, ಇದು 2021 ರ ಆರಂಭದಲ್ಲಿ ಫ್ಲೋರ್ ಮೇಲೆ ಬರಲಿದೆ. ಏತನ್ಮಧ್ಯೆ, ಬೆಲ್ ಬಾಟಮ್ ಚಿತ್ರದ ಮೂಲಕ ನಟನಾಗಿ  ಯಶಸ್ಸನ್ನು ಕಂಡ ನಿರ್ದೇಶಕರು ತಮ್ಮ ಮುಂದಿನ ಚಿತ್ರ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಿರ್ಮಿಸಿರುವ ಈ ಚಿತ್ರವು ಗಿರಿ ಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT