ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕಾರ್ಯಕ್ರಮದ ಹೊಸ ಸೀಸನ್ ನವೆಂಬರ್ 30 ರಿಂದ ಆರಂಭವಾಗಿದೆ.
ಸೋಮವಾರದಿಂದ ಶುಕ್ರವಾರದವರಗೆ ಪ್ರತಿ ದಿನ ರಾತ್ರಿ 10 ಗಂಟೆಗೆ 'ಶಾಂತಂ ಪಾಪಂ' ದಿನಕ್ಕೊಂದು ಕ್ರೈಮ್ ಸ್ಟೋರಿಯನ್ನು ಕಿರುತೆರೆ ಪ್ರೇಕ್ಷಕರ ಮುಂದೆ ಇಡಲಿದೆ.
'ಪಾಪದ ಕತೆಗಳು ಪಾಠ ಕಲಿಸೋ ಕತೆಗಳು' ಎಂಬ ಅಡಿಬರಹವಿರುವ ಇವುಗಳ ಬಹುತೇಕ ಕತೆಗಳು ನೈಜ ಘಟನೆಗಳನ್ನು ಆಧರಿಸಿದ್ದಾಗಿವೆ.
ಡಾವೆಂಕಿ ಸಾಹಿತ್ಯ ರಚನೆ ಇರುವ 'ಶಾಂತಂ ಪಾಪಂ' ಟೈಟಲ್ ಹಾಡಿಗೆ, ವೀರ ಸಮರ್ಥ್ ಸಂಗೀತ ಸಂಯೋಜನೆ ಮಾಡಿದ್ದು, ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿದ್ದಾರೆ. ವಿನೋದ್ ದೋಂಡಳೆ ಈ ಕಾರ್ಯಕ್ರಮದ ಪ್ರಧಾನ ನಿರ್ದೇಶಕರು.