ಶಶಾಂಕ್ ಚಿತ್ರಕ್ಕೆ ಪ್ರಖ್ಯಾತ್-ಸಂಜನ ಆನಂದ್ ನಾಯಕ-ನಾಯಕಿ 
ಸಿನಿಮಾ ಸುದ್ದಿ

ಎಲ್ಲಿವರೆಗೂ ಬಂದಿದೆ ಗೊತ್ತೇ 5 ನಿರ್ದೇಶಕರ ಕನ್ನಡ ಚಿತ್ರ?: ಶಶಾಂಕ್ ಚಿತ್ರಕ್ಕೆ ಪ್ರಖ್ಯಾತ್ ನಾಯಕ, ಸಂಜನ ಆನಂದ್ ನಾಯಕಿ

ಚಿತ್ರವೊಂದಕ್ಕೆ ಕನ್ನಡದ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಇದರ ಭಾಗವಾಗಿರುವ ನಿರ್ದೇಶಕ ಶಶಾಂಕ್ ಈಗಾಗಲೇ ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಖ್ಯಾತ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರವೊಂದಕ್ಕೆ ಕನ್ನಡದ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಇದರ ಭಾಗವಾಗಿರುವ ನಿರ್ದೇಶಕ ಶಶಾಂಕ್ ಈಗಾಗಲೇ ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಖ್ಯಾತ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

ನಡುವೆ ಅಂತರವಿರಲಿ ಮೂಲಕ ಸಿನಿ ಪಯಣ ಆರಂಭಿಸಿದ್ದ ಪ್ರಖ್ಯಾತ್ ಪರಮೇಶ್ ಗೆ ಶಶಾಂಕ್ ನಿರ್ದೇಶನದ ಈ ಸೆಗ್ಮೆಂಟ್ ಎರಡನೇ ಸಿನಿಮಾ ಆದರೆ, ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ಆನಂದ್ ತಮ್ಮ ಎರಡನೇ ಸಿನಿಮಾ ಸಲಗ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.

ಶಶಾಂಕ್ ನಿರ್ದೇಶನದ ಸಿನಿಮಾದ ಸೆಗ್ಮೆಂಟ್ ಚಿತ್ರೀಕರಣ ಈ ವಾರದಿಂದ ಸಕಲೇಶಪುರದಲ್ಲಿ ಆರಂಭಗೊಳ್ಳಲಿದ್ದು 8 ದಿನಗಳವರೆಗೆ ಚಿತ್ರೀಕರಣ ಮಾಡುವ ಯೋಜನೆ ಹೊಂದಿದ್ದಾರೆ ನಿರ್ದೇಶಕರು.

ಇನ್ನು ಉಳಿದ ನಾಲ್ವರು ನಿರ್ದೇಶಕರು-ಯೋಗರಾಜ್ ಭಟ್, ಕೆಎಂ ಚೈತನ್ಯ, ಜಯತೀರ್ಥ, ಪವನ್ ಕುಮಾರ್ ಅವರ ಭಾಗದ ಸೆಗ್ಮೆಂಟ್ ಗಳ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರವೊಂದಕ್ಕೆ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವ ಯೋಜನೆಗೆ ಜೀವ ಬಂದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಮುಕ್ತಾಯಗೊಳಿಸಲು ಯೋಜನೆ ಹೊಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT