ವಿನಯ್ ರಾಜ್ 
ಸಿನಿಮಾ ಸುದ್ದಿ

'10' ಶೂಟಿಂಗ್ ಮುಗಿಸಿದರೂ ಬಾಕ್ಸಿಂಗ್ ಗುಂಗಿನಿಂದ ಹೊರಬಾರದ ರಾಜ್ ಮೊಮ್ಮಗ!

ಕರಮ್ ಚಾವ್ಲಾ ನಿರ್ದೇಶಿಸಿ ವಿನಯ್ ರಾಜ್ ನಟಿಸಿರುವ '10' ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ.  ಈ ಸಿನಿಮಾದಲ್ಲಿ ವಿನಯ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ,

ಸಿನಿಮಾದಲ್ಲಿ ಬಾಕ್ಸರ್ ಪಾತ್ರಕ್ಕಾಗಿ ವಿಶೇಷವಾಗಿ ಕಥೆ ಹೆಣೆಯಲಾಗಿದೆ, ಶೂಟಿಂಗ್ ಮುಗಿದಿದ್ದರೂ ವಿನಯ್ ರಾಜ್  ಗೆ ಇನ್ನೂ ಹ್ಯಾಂಡ್ ಗ್ಲೋವ್ಸ್ ಬಿಚ್ಚಿಡುವ ಮನಸ್ಸಾಗಿಲ್ಲ, ಶೂಟಿಂಗ್ ಉತ್ತಮವಾಗಿ ನಡೆಯಿತು. ಯಾವುದೇ ರೀತಿಯ ಗದ್ದಲವಿಲ್ಲದೇ  ನಾವು ಶೂಟಿಂಗ್ ಮುಗಿಸಿದ್ದೇವೆ,  ಸಿನಿಮಾ ಶೂಂಟಿಂಗ್ ಪೂರ್ಣವಾಗಿ  ಮುಗಿದ ನಂತರವಷ್ಟೇ ಸಿನಿಮಾ ಸಂಬಂಧಿತ ವಿವರಗಳನ್ನು ಬಹಿರಂಗಪಡಿಸುವುದಾಗಿ ವಿನಯ್ ರಾಜ್ ತಿಳಿಸಿದ್ದಾರೆ.

ಬಾಕ್ಸರ್ ಪಾತ್ರದಲ್ಲಿ ನಟಿಸಿರುವುದು ತುಂಬಾ ಹೊಸ ಅನುಭವ ನೀಡಿದೆ. ಸಿನಿಮಾಗಾಗಿ ಸುಮಾರು 5ರಿಂದ ಆರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದರು.  ಈಗಲೂ ಕೂಡ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿರುವುದಾಗಿ ವಿನಯ್ ರಾಜ್ ಹೇಳಿದ್ದಾರೆ. ವಾರದಲ್ಲಿ ಮೂರು ದಿನವಾದರೂ ಬಾಕ್ಸಿಂಗ್ ರಿಂಗ್ ಗೆ ಹೋಗುತ್ತೇನೆ,  ಹೀಗಾಗಿ ಬಾಕ್ಸಿಂಗ್ ನನ್ನ ಜೀವನದ ಒಂದು ಅಂಗವಾಗಿ ಹೋಗಿದೆ ಎಂದು ವಿನಯ್ ಅಭಿಪ್ರಾಯ ಪಟ್ಟಿದ್ದಾರೆ.

3 ಗಂಟೆ ವ್ಯಾಯಾಮ ಮಾಡಿ ಒಂದೂವರೆ ಗಂಟೆ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತೇನೆ.  ಜೊತೆಗೆ ಕಠಿಣ ಪಥ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ, ನಿರ್ದೇಶಕ ಕರ್ಮ್ ಚಾವ್ಲಾ ಜೊತೆಗಿನ ಕೆಲಸದ ಅನುಭವ ಬಿಚ್ಚಿಟ್ಟ ವಿನಯ್ ರಾಜ್, ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ, ಪರಸ್ಪರ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.. ರನ್ ಆಂಟೋನಿ ಸಿನಿಮಾದಿಂದ ನಾವಿಬ್ಬರು ಪರಿಚಯಸ್ಥರು, 

2 ವರ್ಷದ ಹಿಂದೆಯೇ ಅವರು ಕಥೆಯ ಬಗ್ಗೆ ಹೇಳಿದ್ದರು,  ಅದರ  ಸಂಬಂಧ ನಾವು ಚರ್ಚಿಸುತ್ತಿದ್ದೆವು,  ಆದರೆ ಕಥೆಯನ್ನು ಅವರ ಮತ್ತಷ್ಟು ಉತ್ತಮ ಗೊಳಿಸುತ್ತಿದ್ದರು.  ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಜೊತೆ ಕಥೆಯ ಬಗ್ಗೆ ತಿಳಿಸಿದ್ದರು, ಅವರು ಕಥೆ ಮೆಚ್ಚಿದ ನಂತರ ಮೂವರು ಒಟ್ಟಾಗಿ ಕುಳಿತು ಚರ್ಚಿಸುತ್ತಿದ್ದೆವು ಎಂದು ವಿನಯ್  ವಿವರಿಸಿದ್ದಾರೆ.

ಸದ್ಯ ಸಿನಿಮಾ ಪೋಸ್ಚ್ ಪ್ರೊಡಕ್ಷನ್ ಹಂತದಲ್ಲಿದ್ದು ಇನ್ನು 2 -3 ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT