ತಾನ್ಯ ಹೋಪೆ 
ಸಿನಿಮಾ ಸುದ್ದಿ

ನಾನು ಕಾಯುತ್ತಿದ್ದ ಒಳ್ಳೆಯ ಸಮಯ ಬಂದಾಗಿದೆ: ತಾನ್ಯಾ ಹೋಪೆ

ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.

ಜನವರಿ 24 ರಂದು ತಾನ್ಯ ಹೋಪೆ ಅಭಿನಯದ ಖಾಕಿ ಮತ್ತು ತೆಲುಗಿನ ಡಿಸ್ಕೋ ರಾಜಾ ಸಿನಿಮಾ ರಿಲೀಸ್ ಆಗುತ್ತಿದೆ.

ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.

ಕನ್ನಡದ ಯಜಮಾನ ಸಿನಿಮಾದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದರು. ತದಂ ತಮಿಳು ಸಿನಿಮಾದಲ್ಲಿ ಅರುಣ್ ವಿಜಯ್ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

ಎರಡು ಸಿನಿಮಾಗಳ ಪ್ರಮೋಷನ್ ನಲ್ಲಿ ತುಂಬಾ ಬ್ಯುಸಿಯಗಿದ್ದೇನೆ, ಏಕೆಂದರೇ 2 ಸಿನಿಮಾಗಳು ಒಂದೇ ದಿನಾಂಕದಲ್ಲಿ ರಿಲಸ್ ಆಗುತ್ತಿವೆ, ಹೀಗಾಗಿ 2 ನಗರಗಳಿಗೆ ತೆರಳಿ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಎರಡು ಸಿನಿಮಾಗಳ ಕಥೆ ಡಿಫರೆಂಟ್ ಆಗಿವೆ, ಖಾಕಿ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಗೆ ನಾಯಕಿಯಾಗಿದ್ದಾರೆ. ಇದರ ಸರ್ಕಾರದಲ್ಲಿ ನಡೆಯುವ ಭ್ರಷ್ಟಾಚಾರದ ಕಥೆಯಾಗಿದೆ. ಭ್ರಷ್ಚಾಚಾರ ತಡೆಯಲು ಸರ್ಕಾರದ ವೈಫಲ್ಯ ಹಾಗೂ  ಜನ ತಮ್ಮನ್ನು ಹೇಗೆ ತಾವು ರಕ್ಷಿಸಿಕೊಳ್ಳಲು ಮುಂದಾಗುತ್ತಾರೆ ಎಂಬ ಕಥೆ ಇದಾಗಿದೆ. ತೆಲುಗಿನ ಡಿಸ್ಕೋ ರಾಜ ಸಿನಿಮಾದಲ್ಲಿ ರವಿತೇಜಾ ಗೆ ನಾಯಕಿಯಾಗಿದ್ದಾರೆ. 

ಎರಡು ಬೇರೆ ಬೇರೆ ಇಂಡಸ್ಟ್ರಿಗಳಲ್ಲಿ ಬೇರೆ ಬೇರೆ ತರ ಅನುಭವ ಆಗಿದೆ.  ಆದರೆ ಭಾಷೆ ಎಂದಿಗೂ ನನಗೆ ಸಮಸ್ಯೆ ಆಗಿಲ್ಲ. ಎಂರಡು ಸಿನಿಮಾ ತಂಡಗಳು ನನ್ನ ಜೊತೆ ಉತ್ತಮವಾಗಿ ಸಂವಹನ ಹೊಂದಿದ್ದರು.  ಚಿತ್ರತಂಡದ ಪ್ರತಿಯೊಬ್ಬರ ಜೊತೆಯೂ ಮಾತನಾಡುತ್ತಿದ್ದೆ. ನನ್ನನ್ನು ನಾನು ಏನು ಎಂದು ತೋರಿಸಿಕೊಳ್ಳುನ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. 2016 ರಲ್ಲಿ ನಾನು ಕೆಲಸ ಆರಂಭಿಸಿದೆ,  ಇದುವರೆಗೂ 10 ಸಿನಿಮಾಗಳಲ್ಲಿ ನಟಿಸಿದ್ದೇನೆ, ‘ಒಳ್ಳೆಯದಕ್ಕಾಗಿ ನಾನು ಕಾಯುವ ಸಮಯ ಇದಾಗಿದೆ ಎಂದು ಅವರು ಹೋಪೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT