ಅದಿತಿ ಪ್ರಭುದೇವ 
ಸಿನಿಮಾ ಸುದ್ದಿ

ಓಲ್ಡ್ ಮಾಂಕ್ ಗೆ ಅದಿತಿ ಪ್ರಭುದೇವ ನಾಯಕಿ!

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿರುವ ನಟಿ ಎಂದರೆ, ಅದು ಅದಿತಿ ಪ್ರಭುದೇವ. ಕಳೆದ ವರ್ಷ ಅವರು ಸಾಲು ಸಾಳು ಸಿನಿಮಾಗಳಲ್ಲಿ ನಟಿಸಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿರುವ ನಟಿ ಎಂದರೆ, ಅದು ಅದಿತಿ ಪ್ರಭುದೇವ. ಕಳೆದ ವರ್ಷ ಅವರು ಸಾಲು ಸಾಳು ಸಿನಿಮಾಗಳಲ್ಲಿ ನಟಿಸಿದ್ದರು.

ಈ ವರ್ಷವೂ ಸಾಕಷ್ಟು ಸಿನಿಮಾಗಳನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ನಟ/ನಿರ್ದೇಶಕ ಶ್ರೀನಿ ಅವರ ಮುಂದಿನ ಸಿನಿಮಾ 'ಓಲ್ಡ್‌ ಮಾಂಕ್‌'ನಲ್ಲಿ ನಾಯಕಿಯಾಗಿ ಅವರು ಆಯ್ಕೆಯಾಗಿದ್ಧಾರೆ. 

ಶ್ರೀನಿವಾಸ ಕಲ್ಯಾಣ’, ‘ಬೀರ್​ಬಲ್’ ಸಿನಿಮಾಗಳಿಗೆ ಆಕ್ಷನ್-ಕಟ್ ಹೇಳಿ ನಾಯಕನಾಗಿಯೂ ಅಭಿನಯಿಸಿದ್ದ ಶ್ರೀನಿವಾಸ್ ಅವರ ನಿರ್ದೇಶನದ ಹೊಸ ಸಿನಿಮಾ

‘ಓಲ್ಡ್​ಮಾಂಕ್’ಗೆ ನಟಿ ಅದಿತಿ ಪ್ರಭುದೇವ ನಾಯಕಿ. ಈ ಸಿನಿಮಾದಲ್ಲೂ ಶ್ರೀನಿ ನಿರ್ದೇಶನ ಮಾಡುವ ಜತೆಗೆ ನಾಯಕರಾಗಿಯೂ ಅಭಿನಯಿಸಲಿದ್ದಾರೆ. ಇತ್ತೀಚೆಗಷ್ಟೇ ‘ಓಲ್ಡ್​ಮಾಂಕ್’ ಚಿತ್ರದ ಬಗ್ಗೆ ಘೋಷಣೆ ಮಾಡಿದ್ದ ಶ್ರೀನಿ, ಕೆಲವು ದಿನಗಳಿಂದ ರಾಜ್ಯದ ಕೆಲವೆಡೆ ಆಡಿಷನ್ ಮಾಡಿ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಸಿದ್ದರು. ಈ ಮಧ್ಯೆ ನಾಯಕಿಯ ಪಾತ್ರಕ್ಕೆ ಒಂದಷ್ಟು ಆಯ್ಕೆಗಳನ್ನು ಗಮನಿಸಿದ್ದ ಅವರು ಅಂತಿಮವಾಗಿ ಅದಿತಿ ಪ್ರಭುದೇವ ಅವರನ್ನು ತಮ್ಮ ಜೋಡಿ ಆಗಿಸಿಕೊಳ್ಳಲು ತೀರ್ವನಿಸಿದ್ದಾರೆ.

‘ಓಲ್ಡ್​ಮಾಂಕ್’ ಎಂಬ ಶೀರ್ಷಿಕೆ ಹಿನ್ನೆಲೆಯಲ್ಲಿ ಇಲ್ಲಿ ಅದಿತಿ ತೀರಾ ಫಾರ್ವರ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದೆಲ್ಲ ಭಾವಿಸುವಂತಿಲ್ಲ. ಅಷ್ಟಕ್ಕೂ ಟೈಟಲ್​ಗೂ ಅವರ ಪಾತ್ರಕ್ಕೂ ತದ್ವಿರುದ್ಧ. ‘ಇಡೀ ಸಿನಿಮಾ ಕಾಮಿಡಿಯದ್ದಾದರೂ ನಾನಿಲ್ಲಿ ಪಕ್ಕಾ ಸಂಪ್ರದಾಯಸ್ಥ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಾಯಕಿಯದ್ದು ಇಲ್ಲಿ ಸಂಪೂರ್ಣ ಸಂಸ್ಕೃತಿಭರಿತ ಮನಸ್ಥಿತಿ’ ಎನ್ನುತ್ತ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ನಟಿ ಅದಿತಿ.

ನಾನು ಮೊದಲು ಕಥೆ ಕೇಳುತ್ತೇನೆ, ಆಮೇಲೆ ನನ್ನ ಪಾತ್ರದ ಬಗ್ಗೆ ಕೇಳುತ್ತೇನೆ. ಎರಡೂ ಓಕೆ ಅನಿಸಿದಾಗ ಒಪ್ಪಿಕೊಳ್ಳುತ್ತೇನೆ’ ಎನ್ನುವ ಅದಿತಿಗೆ, ಈ ಚಿತ್ರದ ಟೈಟಲ್ ಕೇಳಿ ಅಚ್ಚರಿ ಆಗಿತ್ತಂತೆ. ‘ಓಲ್ಡ್​ಮಾಂಕ್ ಎನ್ನುವುದು ಒಂದು ಡ್ರಿಂಕ್ಸ್ ಹೆಸರು ಅಂತ ನನಗೆ ಈ ಚಿತ್ರದ ಟೈಟಲ್ ಬಗ್ಗೆ ವಿವರಣೆ ಕೇಳಿದಾಗಲೇ ಗೊತ್ತಾಗಿದ್ದು. ಆದರೆ ಈ ಚಿತ್ರದಲ್ಲಿ 18 ವೃದ್ಧ ಜೋಡಿಗಳೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆ ನಿಟ್ಟಿನಲ್ಲೂ ಓಲ್ಡ್​ಮಾಂಕ್ ಟೈಟಲ್ ಸೂಕ್ತವಾಗುತ್ತದೆ’ ಎಂಬ ಅನಿಸಿಕೆಯನ್ನೂ ಅವರು ವ್ಯಕ್ತಪಡಿಸುತ್ತಾರೆ.

ಅಂದಹಾಗೆ ಅದಿತಿ ಪ್ರಭುದೇವ ಅಭಿನಯದ ‘ತೋತಾಪುರಿ’ ಸಿನಿಮಾದ ಶೂಟಿಂಗ್ ಒಂದಷ್ಟು ಬಾಕಿ ಇದೆ. ಸದ್ಯ ‘ಚಾಂಪಿಯನ್’, ‘ಒಂಬತ್ತನೇ ದಿಕ್ಕು’ ಚಿತ್ರಗಳ ಶೂಟಿಂಗ್ ಮುಗಿಸಿರುವ ಅವರು, ಶೀಘ್ರದಲ್ಲೇ ‘ಓಲ್ಡ್​ಮಾಂಕ್’ ಕೈಗೆತ್ತಿಕೊಳ್ಳಲಿದ್ದಾರೆ. ಅರ್ಥಾತ್ ಈ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಂಧನ ನ್ಯಾಯಸಮ್ಮತ: ಭಾರತಕ್ಕೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಆದೇಶ!

ವಿಜಯಪುರ ಬಳಿಕ ಇದೀಗ ಬಾಗಲಕೋಟೆ ಪ್ರವೇಶಕ್ಕೂ ಕಾಡಸಿದ್ದೇಶ್ವರ ಶ್ರೀಗಳಿಗೆ ನಿರ್ಬಂಧ!

ಲಕ್ಷ ಕೋಟಿ ಹೂಡಿಕೆಯ Google AI ಹಬ್ ಆಂಧ್ರಕ್ಕೆ ಹೊಯ್ತು: ನಮ್ಮ ಸಚಿವರು ಜಾತಿ, ಜಾತಿ ಗಣತಿಯಲ್ಲಿ ಮಗ್ನ; ಉದ್ಯಮಿ ಪೈ ವ್ಯಂಗ್ಯ

Pak-Afghan ಕದನ ವಿರಾಮ ಅಂತ್ಯ ಬೆನ್ನಲ್ಲೇ ಸೇನಾ ನೆಲೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 7 ಪಾಕ್ ಸೈನಿಕರು ಬಲಿ!

ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಶಕ್ತಿ ಯೋಜನೆ; 'ನಕಲಿ' ಪ್ರಮಾಣಪತ್ರ ಹಂಚಿಕೊಂಡ್ರಾ CM?

SCROLL FOR NEXT