ಮುಗಿಲ್ಪೇಟೆ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಮನು ರವಿಚಂದ್ರನ್ 'ಮುಗಿಲ್ಪೇಟೆ'ಯಲ್ಲಿ ರಿಷಿಗೆ ವಿಶೇಷ ಪಾತ್ರ

ಭರತ ನಾವುಂದ  ನಿರ್ದೇಶನದ ಮನು ರವಿಚಂದ್ರನ್ ನಟಿಸಿರುವ "ಮುಗಿಲ್ಪೇಟೆ"ಯಲ್ಲಿ ರಿಷಿಯನ್ನು ವಿಶೇಷ ಪಾತ್ರದಲ್ಲಿ ತೋರಿಸಲಾಗಿದೆ. ಈ ನಟ ಈ ಹಿಂದೆ ಮಂಜು ಮಾಂಡವ್ಯ ಅವರ ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಇದೇ ರೀತಿ ವಿಶೇಷ ಪಾತ್ರಧಾರಿಯಾಗಿ ಕಾಣಿಸಿದ್ದರು.

ಭರತ ನಾವುಂದ  ನಿರ್ದೇಶನದ ಮನು ರವಿಚಂದ್ರನ್ ನಟಿಸಿರುವ "ಮುಗಿಲ್ಪೇಟೆ"ಯಲ್ಲಿ ರಿಷಿಯನ್ನು ವಿಶೇಷ ಪಾತ್ರದಲ್ಲಿ ತೋರಿಸಲಾಗಿದೆ. ಈ ನಟ ಈ ಹಿಂದೆ ಮಂಜು ಮಾಂಡವ್ಯ ಅವರ ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಇದೇ ರೀತಿ ವಿಶೇಷ ಪಾತ್ರಧಾರಿಯಾಗಿ ಕಾಣಿಸಿದ್ದರು. ಆದರೆ, ಈ ಬಾರಿ ನಟ ತನ್ನ ಸ್ನೇಹಿತ ಮನು ರವಿಚಂದ್ರನ್ ಗಾಗಿ ಈ ಪಾತ್ರಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ.ಚಿಕ್ಕ ಶೆಡ್ಯೂಲ್ ಹೊಂದಿರುವ ರಿಷಿ ಇದಾಗಲೇ ತಮ್ಮ ಭಾಗದ ಶೂತಿಂಗ್ ನಲ್ಲಿ ಭಾಗವಹಿಸಿದ್ದಾರೆ.

ಇನ್ನು ರಿಷಿ ಪಾತ್ರದ ಬಗೆಗೆ ಚಿತ್ರ ನಿರ್ದೇಶಕರು ಸಾಕಷ್ಟು ಮಾಹಿತಿ ಬಹಿರಂಗಪಡಿಸಿಲ್ಲ. ಕಮರ್ಷಿಯಲ್ ಎಂಟರ್ಟೈನರ್ ನಟನನ್ನು ಎರಡು ಛಾಯೆಯಲ್ಲಿ ತೋರಿಸಲಿದೆ.ತಯಾರಕರು ಡಿಸೆಂಬರ್ 11 ರಂದು ನಟನ ಜನ್ಮದಿನದಂದು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ.

ಚಿತ್ರದ ಪ್ರಮುಖ ಭಾಗವನ್ನು  ಸಕಲೇಶಪುರದಲ್ಲಿ ಚಿತ್ರೀಕರಿಸಲಾಗಿದೆ. ಮನು ಅವರ ಸ್ನೇಹಿತರು ಮತ್ತು ನಿರ್ಮಾಪಕ ಮೋತಿ ಮಹೇಶ್ ಮತ್ತು ರಕ್ಷಾ ವಿಜಯ್ ಅವರ ಬೆಂಬಲದೊಂದಿಗೆ ಮುಗಿಲ್ಪೇಟೆ ಯಲ್ಲಿ ಮಾಡಲಿ ಕಂ ನಟಿ ಕಯಾದು ಮೋಗನ್ ಲೋಹರ್ ನಾಯಕಿಯಾಗಿದ್ದಾರೆ. ಚಿತ್ರದ ಸಂಗೀತವನ್ನು ಶ್ರೀಧರ್ ವಿ ಸಂಭ್ರಮ್ ನೀಡಿದ್ದು  ರವಿವರ್ಮ (ಗಂಗು) ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಅವಿನಾಶ್, ಸಾಧು ಕೋಕಿಲಾ ಮತ್ತು ರಂಗಾಯಣ ರಘು ಸಹ ಅಭಿನಯಿಸಿರುವುದು ಚಿತ್ರದ ಇನ್ನೊಂದು ವಿಶೇಷತೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT