ಮುಗಿಲ್ಪೇಟೆ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಮನು ರವಿಚಂದ್ರನ್ 'ಮುಗಿಲ್ಪೇಟೆ'ಯಲ್ಲಿ ರಿಷಿಗೆ ವಿಶೇಷ ಪಾತ್ರ

ಭರತ ನಾವುಂದ  ನಿರ್ದೇಶನದ ಮನು ರವಿಚಂದ್ರನ್ ನಟಿಸಿರುವ "ಮುಗಿಲ್ಪೇಟೆ"ಯಲ್ಲಿ ರಿಷಿಯನ್ನು ವಿಶೇಷ ಪಾತ್ರದಲ್ಲಿ ತೋರಿಸಲಾಗಿದೆ. ಈ ನಟ ಈ ಹಿಂದೆ ಮಂಜು ಮಾಂಡವ್ಯ ಅವರ ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಇದೇ ರೀತಿ ವಿಶೇಷ ಪಾತ್ರಧಾರಿಯಾಗಿ ಕಾಣಿಸಿದ್ದರು.

ಭರತ ನಾವುಂದ  ನಿರ್ದೇಶನದ ಮನು ರವಿಚಂದ್ರನ್ ನಟಿಸಿರುವ "ಮುಗಿಲ್ಪೇಟೆ"ಯಲ್ಲಿ ರಿಷಿಯನ್ನು ವಿಶೇಷ ಪಾತ್ರದಲ್ಲಿ ತೋರಿಸಲಾಗಿದೆ. ಈ ನಟ ಈ ಹಿಂದೆ ಮಂಜು ಮಾಂಡವ್ಯ ಅವರ ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಇದೇ ರೀತಿ ವಿಶೇಷ ಪಾತ್ರಧಾರಿಯಾಗಿ ಕಾಣಿಸಿದ್ದರು. ಆದರೆ, ಈ ಬಾರಿ ನಟ ತನ್ನ ಸ್ನೇಹಿತ ಮನು ರವಿಚಂದ್ರನ್ ಗಾಗಿ ಈ ಪಾತ್ರಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ.ಚಿಕ್ಕ ಶೆಡ್ಯೂಲ್ ಹೊಂದಿರುವ ರಿಷಿ ಇದಾಗಲೇ ತಮ್ಮ ಭಾಗದ ಶೂತಿಂಗ್ ನಲ್ಲಿ ಭಾಗವಹಿಸಿದ್ದಾರೆ.

ಇನ್ನು ರಿಷಿ ಪಾತ್ರದ ಬಗೆಗೆ ಚಿತ್ರ ನಿರ್ದೇಶಕರು ಸಾಕಷ್ಟು ಮಾಹಿತಿ ಬಹಿರಂಗಪಡಿಸಿಲ್ಲ. ಕಮರ್ಷಿಯಲ್ ಎಂಟರ್ಟೈನರ್ ನಟನನ್ನು ಎರಡು ಛಾಯೆಯಲ್ಲಿ ತೋರಿಸಲಿದೆ.ತಯಾರಕರು ಡಿಸೆಂಬರ್ 11 ರಂದು ನಟನ ಜನ್ಮದಿನದಂದು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ.

ಚಿತ್ರದ ಪ್ರಮುಖ ಭಾಗವನ್ನು  ಸಕಲೇಶಪುರದಲ್ಲಿ ಚಿತ್ರೀಕರಿಸಲಾಗಿದೆ. ಮನು ಅವರ ಸ್ನೇಹಿತರು ಮತ್ತು ನಿರ್ಮಾಪಕ ಮೋತಿ ಮಹೇಶ್ ಮತ್ತು ರಕ್ಷಾ ವಿಜಯ್ ಅವರ ಬೆಂಬಲದೊಂದಿಗೆ ಮುಗಿಲ್ಪೇಟೆ ಯಲ್ಲಿ ಮಾಡಲಿ ಕಂ ನಟಿ ಕಯಾದು ಮೋಗನ್ ಲೋಹರ್ ನಾಯಕಿಯಾಗಿದ್ದಾರೆ. ಚಿತ್ರದ ಸಂಗೀತವನ್ನು ಶ್ರೀಧರ್ ವಿ ಸಂಭ್ರಮ್ ನೀಡಿದ್ದು  ರವಿವರ್ಮ (ಗಂಗು) ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಅವಿನಾಶ್, ಸಾಧು ಕೋಕಿಲಾ ಮತ್ತು ರಂಗಾಯಣ ರಘು ಸಹ ಅಭಿನಯಿಸಿರುವುದು ಚಿತ್ರದ ಇನ್ನೊಂದು ವಿಶೇಷತೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT