ಪ್ರಕಾಶ್ ಬೆಳವಾಡಿ 
ಸಿನಿಮಾ ಸುದ್ದಿ

ಕನ್ನಡದಲ್ಲೂ 'ಶಕುಂತಲಾ ದೇವಿ' ಅಂತಾ ಚಿತ್ರ ನಿರ್ಮಿಸಬೇಕಾಗಿತ್ತು!

ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಶಕುಂತಲಾ ದೇವಿ ಚಿತ್ರದಲ್ಲಿ ನಟಿಸಿದ್ದು ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದೇ ತಿಂಗಳ 31ರಂದು ಅಮೆಜಾನ್ ಪ್ರೈಂನಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಇಂತಹ ಚಿತ್ರಗಳು ಕನ್ನಡದಲ್ಲೂ ನಿರ್ಮಾಣವಾಗಬೇಕು ಎಂದು ನಟ ಪ್ರಕಾಶ್ ಬೆಳವಾಡಿ ಅವರು ಹೇಳಿದ್ದಾರೆ. 

ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಶಕುಂತಲಾ ದೇವಿ ಚಿತ್ರದಲ್ಲಿ ನಟಿಸಿದ್ದು ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದೇ ತಿಂಗಳ 31ರಂದು ಅಮೆಜಾನ್ ಪ್ರೈಂನಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಇಂತಹ ಚಿತ್ರಗಳು ಕನ್ನಡದಲ್ಲೂ ನಿರ್ಮಾಣವಾಗಬೇಕು ಎಂದು ನಟ ಪ್ರಕಾಶ್ ಬೆಳವಾಡಿ ಅವರು ಹೇಳಿದ್ದಾರೆ. 

ನಟ, ನಾಟಕ ಕಲಾವಿದ, ಶಿಕ್ಷಕ, ಪತ್ರಕರ್ತ, ಕಾರ್ಯಕರ್ತ ಮತ್ತು ಪ್ರೇರಕ ಭಾಷಣಕಾರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದುಡಿದ ಖ್ಯಾತಿ ಹೊಂದಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ಸಿನಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಅವರು ನಂತರ ದಕ್ಷಿಣ ಭಾರತ ಮತ್ತು ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ.  

ನಿರ್ದೇಶಕ ಗಿರೀಶ್ ಕರ್ನಾಡ್ ನನಗೆ ಕಾನೂರು ಹೆಗ್ಗಡತಿ ಚಿತ್ರದಲ್ಲಿ ನನ್ನ ಮೊದಲ ದೊಡ್ಡ ಪಾತ್ರವನ್ನು ನೀಡಿದ್ದರೂ, ನಾನು ಹೆಚ್ಚು ಗಮನ ಸೆಳೆಯಲಿಲ್ಲ. ನಾನು ಬಾಲಿವುಡ್‌ನಲ್ಲಿ ಸ್ಥಾಪನೆಯಾದ ನಂತರವೇ ಕನ್ನಡ ಚಿತ್ರರಂಗದ ಮುಖ್ಯವಾಹಿನಿಯ ನಿರ್ದೇಶಕರು ನನ್ನನ್ನು ಗಮನಿಸಲಾರಂಭಿಸಿದರು. ಟಿ.ಎನ್. ಸೀತಾರಾಮ್ ಮತ್ತು ಮಹಂತೇಶ್ ರಾಮ್‌ಡ್ರಗ್ ಅವರ ಅಗಾಸಿ ಪಾರ್ಲರ್ ನಿರ್ದೇಶಿಸಿದ ಆಫ್-ಬೀಟ್ ಚಿತ್ರಗಳಲ್ಲಿ ನಾನು ನಟಿಸಿದ್ದೇನೆ, ಆದರೆ ಮುಖ್ಯವಾಹಿನಿಯ ಸಿನೆಮಾದಲ್ಲಿ ಭಾಗವಹಿಸಲು ಸಮಯ ಹಿಡಿಯಿತು ಎಂದು ಬೆಳವಾಡಿ ಹೇಳಿದ್ದಾರೆ. 

ಪ್ರಕಾಶ್ ಬೆಳವಾಡಿ ನಟಿಸಿರುವ ಶಕುಂತಲಾ ದೇವಿ ಜೀವನಾಧಾರಿತ ಇದೇ ಜುಲೈ 31ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದೆ. ವಿದ್ಯಾ ಬಾಲನ್ ನಟಿಸಿರುವ ಈ ಚಿತ್ರದಲ್ಲಿ ಪ್ರಕಾಶ್ ತಂದೆಯಾಗಿ ನಟಿಸಿದ್ದಾರೆ. "ಇದು ಒಂದು ಸಣ್ಣ ಪಾತ್ರ, ಆದರೆ ಇದು ಬಯೋಪಿಕ್ ಆಗಿರುವುದರಿಂದ ನಾನು ಒಪ್ಪಿಕೊಂಡೆ ಎಂದರು. ಇನ್ನು ಕನ್ನಡದಲ್ಲೂ ಇಂತರ ಚಿತ್ರಗಳು ನಿರ್ಮಾಣವಾಗಬೇಕು. ಇದು ಒಂದು ಪ್ರಮುಖ ಕಥೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT