ಸಂಯುಕ್ತಾ ಹೊರನಾಡ್ 
ಸಿನಿಮಾ ಸುದ್ದಿ

ವೆಬ್ ಸೀರೀಸ್ ನಲ್ಲಿ ರಿಸ್ಕ್ ಕಡಿಮೆ: ಸಂಯುಕ್ತಾ ಹೊರನಾಡ್

ಲೈಫು ಇಷ್ಟೇನಾ ಚಿತ್ರದಲ್ಲಿನ ಮನೋಜ್ಞ ಅಭಿನಯದ ಮೂಲಕ ಕನ್ನಡ ಅಭಿಮಾನಿಗಳ ಮನಸೂರೆಗೊಳಿಸಿದ್ದ ನಟಿ ಸಂಯುಕ್ತಾ ಹೊರನಾಡ್ ಅವರು ಇದೀಗ ಒಟಿಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. 

ಲೈಫು ಇಷ್ಟೇನಾ ಚಿತ್ರದಲ್ಲಿನ ಮನೋಜ್ಞ ಅಭಿನಯದ ಮೂಲಕ ಕನ್ನಡ ಅಭಿಮಾನಿಗಳ ಮನಸೂರೆಗೊಳಿಸಿದ್ದ ನಟಿ ಸಂಯುಕ್ತಾ ಹೊರನಾಡ್ ಅವರು ಇದೀಗ ಒಟಿಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. 

ನಿರ್ದೇಶಕ ಪ್ರದೀಪ್ ದೇವ ಕುಮಾರ್ ಅವರ ತೆಲುಗು ವೆಬ್ ಸರಣಿ ಲಾಕಡ್ ನಲ್ಲಿ ಸಂಯುಕ್ತಾ ಅಭಿನಯಿಸಿದ್ದರು.  ಈ ವೆಬ್ ಸಿರೀಸ್ ಅಲ್ಲು ಅರ್ಜುನ್ ಒಡೆತನದ ಆಹಾ ಎಂಬ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿತ್ತು. ಕೊರೋನಾ ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ಈ ವೆಬ್ ಸಿರೀಸ್ ಬಿಡುಗಡೆಗೊಂಡು ಜನರನ್ನು ಆಕರ್ಷಿಸಿತ್ತು ಎಂದು ಸಂಯುಕ್ತಾ ಹೇಳಿದ್ದಾರೆ. 

ವೆಬ್ ಸರಣಿಗೂ ಲಾಕ್‌ಡೌನ್‌ಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಅದು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ಕುತೂಹಲಕಾರಿಯಾಗಿ, ನನ್ನ ಹಿಂದಿನ ವೆಬ್ ಸರಣಿ, G.O.D (ಗಾಡ್ಸ್ ಆಫ್ ಧರ್ಮಪುರಿ) ಸಹ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ವರ್ಷದ ಟಾಪ್ 10 ಸರಣಿಗಳಲ್ಲಿ ಸ್ಥಾನ ಪಡೆದಿದೆ. ನಾನು ಹೈದರಾಬಾದ್‌ನಿಂದ ಮಲಯಾಳಿ ಪತ್ರಕರ್ತೆಯಾಗಿ ನಟಿಸುತ್ತಿದ್ದೆ ಮತ್ತು ಅದನ್ನು ಹಂಪಿಯಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಅವರು ಹೇಳುತ್ತಾರೆ.

ಇನ್ನು ಸಂಯುಕ್ತಾ ಅಭಿನಯದ ತಮಿಳು ಚಿತ್ರ ಅಭಿಯಮ್ ಅನುವುಮ್ ಮತ್ತು ನಾಲ್ಕು ಕನ್ನಡ ಚಲನಚಿತ್ರಗಳಾದ ಆಮ್ಲೆಟ್, ಅರಿಷಡ್ವರ್ಗ, ಮೈಸೂರು ಮಸಾಲ: ದಿ ಯುಎಫ್‌ಒ ಘಟನೆ, ಮತ್ತು ರೆಡ್ ರಮ್ ಸಹ ಒಟಿಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನಿರ್ಮಾಪಕರು ಪ್ರಸ್ತುತ ಪ್ರಮುಖ ಪ್ಲಾಟ್‌ಫಾರ್ಮ್‌ಗಳೊಂದಿಗೆ ಚರ್ಚಿಸಿದ್ದಾರೆ ಆದರೆ ಇನ್ನೂ ಅಧಿಕೃತವಾಗಿಲ್ಲ ಎಂದು ಹೇಳಿದ್ದಾರೆ. 

ಇಂದು ಹೊಸ ಚಿತ್ರಗಳನ್ನು ಜನರು ತಮ್ಮ ಶೌಚಾಲಯದಲ್ಲೇ ಕುಳಿತು ನೋಡುವಂತಾಗಿದೆ. ಇದು ಕಳೆದ 50-60 ದಿನಗಳಲ್ಲಿ ನನ್ನ ಅನುಭವಕ್ಕೆ ಬಂದಿದೆ. ಕೊರೋನಾವೈರಸ್ ಮಹಾಮಾರಿಯ ಹೆದರಿಕೆಯಿಂದ ಜನರು ತಮ್ಮ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಅಂಟಿಕೊಳ್ಳಲು ಆದ್ಯತೆ ನೀಡುತ್ತಾರೆ ಎಂದು ಸಂಯುಕ್ತಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT