ರಾಜ್‌ಕುಮಾರ್ , ನಿಸಾರ್ ಅಹಮದ್ 
ಸಿನಿಮಾ ಸುದ್ದಿ

ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ 'ರಾಜಕುಮಾರರು': ನಿಸಾರ್ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್‌ ಮನದಾಳದ ಮಾತು

ನಿಸಾರ್ ಅಹಮದ್ ಅವರಂತಹ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಮಾತನಾಡಲು ನಾನು ತುಂಬಾ ‘ಚಿಕ್ಕವನಾಗಿದ್ದರೂ’, ನನ್ನ ತಂದೆ ಮತ್ತು ಅವರ ನಡುವಿನ ಸ್ನೇಹವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.

ನಿಸಾರ್ ಅಹಮದ್ ಅವರಂತಹ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಮಾತನಾಡಲು ನಾನು ತುಂಬಾ ‘ಚಿಕ್ಕವನಾಗಿದ್ದರೂ’, ನನ್ನ ತಂದೆ ಮತ್ತು ಅವರ ನಡುವಿನ ಸ್ನೇಹವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾರ್ವಭೌಮರು. ಡಾ.ರಾಜ್‌ಕುಮಾರ್ ನಟಸರ್ವಭೂಮವಾಗಿದ್ದರೆ, ನಿಸಾರ್  ಸಾಹಿತ್ಯಸಾರ್ವಭೂಮ. ನಮ್ಮಂತೆಯೇ ಅವರೂ ಸಹ ಕೂಡು ಕುಟುಂಬದಲ್ಲಿ ವಾಸವಾಗಿದ್ದರು.

ಅವರ ಕುಟುಂಬದ ಕಾರ್ಯಕ್ರಮಗಳಿಗೆ ನಮ್ಮನ್ನು ಆಹ್ವಾನಿಸುತ್ತಿದ್ದರು. ಅದಾಗ  ಕನಿಷ್ಠ 50 ಜನರು ಹಾಜರಾಗುತ್ತಿದ್ದರು. ಎಲ್ಲಾ ಒಟ್ಟಾಗಿ ಕುಳಿತು ಊಟ ಮಾಡುವುದನ್ನು ಅವರು ಇಷ್ಟಪಡುತ್ತಿದ್ದರು.ಹಾಗೊಮ್ಮೆ ಊಟಕ್ಕೆ ಕುಳಿತರೆ ಅದು ಕನಿಷ್ಟ ಐದು ಗಂಟೆ ಕಾಲ ಮುಂದುವರಿಯುತ್ತಿತ್ತು. ನಮ್ಮ ಅಪ್ಪಾಜಿ ಹಾಗೂ ನಿಸಾರ್ ಅವರು ಇಬ್ಬರೂ ಒಟ್ಟಿಗೆ ಸಮಯ ಕಳೆಯುವುದೆಂದರೆ ಬಲು ಇಷ್ಟವಾಗಿತ್ತು.ಅವರು ಪರಸ್ಪರರ ಮನೆಗಳಿಗೆ ಡ್ರಾಪ್ ಕೊಟ್ಟುಕೊಳ್ಳುತ್ತಿದ್ದರು. ಗೇಟ್‌ನಲ್ಲಿ ನಿಂತು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಬಿರಿಯಾನಿಯನ್ನು ಇಬ್ಬರೂ ಪ್ರಧಾನವಾಗಿ ಹಂಚಿಕೊಳ್ಳುತ್ತಿದ್ದರು.

ಅಪ್ಪಾಜಿ ಸಾವಿನ ನಂತರ ನಿಸಾರ್ ಅವರ ಜನ್ಮ ದಿನಾಚರಣೆಗೆ ಹಾಜರಾಗುವುದನ್ನು ಖಾಯಂ ಆಗಿ ಮಾಡಿಕೊಂಡಿದ್ದರು. ಅವರು ಬಂದಾಗಲೆಲ್ಲಾ ನ್ನ ತಂದೆಯ ಬಗ್ಗೆ ನೆನಪುಗಳನ್ನು ಪುನರ್ ಮನನ ಮಾಡಿಕೊಳ್ಳುತ್ತಿದ್ದರು.ಅವರನ್ನು ನೋಡಿದಾಗಲೆಲ್ಲಾ ನನ್ನ ತಂದೆಯೇ ನೆನಪಾಗುತ್ತಿದ್ದರು.  ಇಬ್ಬರ ನಡುವಿನ ಸಂಬಂಧ ಬಹಳ ಗಟ್ಟಿಯಾಗಿತ್ತು. ಇಬ್ಬರೂ ತಾವೇನು ಹೇಳಿದ್ದೇವೆಯೋ ಅದೇ ಆಗಿದ್ದರು. ಏನಾಗಿದ್ದರೋ ಅದನ್ನೇ ಹೇಳುತ್ತಿದ್ದರು. ರಾಜ್‌ಕುಮಾರ್ ಒಂದು ಸಮುದಾಯವನ್ನು ಹೇಗೆ ಪ್ರತಿನಿಧಿಸಿರಲಿಲ್ಲವೋ ನಿಸಾರ್ ಸಹ ತಮ್ಮ ಬರವಣಿಗೆಯ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಿದ್ದವರು.  ಇಬ್ಬರು ಶ್ರೇಷ್ಠ ವ್ಯಕ್ತಿಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT