ಸಿನಿಮಾ ಸುದ್ದಿ

ಚಿತ್ರಕ್ಕಾಗಿ ಬೇಕಾದ್ದನ್ನು ನಿರ್ದೇಶಕರು ಮಾಡಬೇಕು, ಮತ್ತು ಅದಕ್ಕೆ ಬೇಕಾದ್ದನ್ನು ನಾನು ಮಾಡುತ್ತೇನೆ: ಸಂಯುಕ್ತಾ ಹೊರನಾಡ್

Nagaraja AB

ಬೆಂಗಳೂರು: ಅರವಿಂದ್ ಕಾಮತ್ ನಿರ್ದೇಶನದ ಮುಂದಿನ 'ಅರಿಷಡ್ವರ್ಗ' ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವಿನಾಶ್, ಮಹೇಶ್ ಬುಂಡಾ, ಶ್ರೀಪತಿ ಮಂಜನಬೈಲು, ಅರವಿಂದ್ ಕುಪ್ಲಿಕರ್, ನಂದಾ ಗೋಪಾಲ್, ಗೋಪಾಲ ಕೃಷ್ಣ ದೇಶಪಾಂಡೆ ಕೂಡಾ ಅಭಿನಯಿಸಿದ್ದಾರೆ.

ಹರಿಥಾಸ್ ಸಂಗಿತ ಸಂಯೋಜಿಸುತ್ತಿದ್ದು, ಬಾಲಾಜಿ ಮನೋಹರ್ ಅವರ ಛಾಯಾಗ್ರಾಹಣವಿದೆ. ನವೆಂಬರ್ 27 ರಂದು ಚಿತ್ರ ಬಿಡುಗಡೆಯಾಗಲಿದ್ದು, ಇದರ ಟ್ರೇಲರ್ ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

'ಅರಿಷಡ್ವರ್ಗ' ಎಂದರೆ, ನಿಮ್ಮೊಳಗಿನ ರಾಕ್ಷಸರು, ಇದೊಂದು ಕೊಲೆ ರಹಸ್ಯವಾಗಿದೆ. ಆದರೆ, ಅದು ಒಂದೇ ಎಂಬಂತೆ ಪರಿಗಣಿಸಿಲ್ಲ,  ಇದು ಸಂಬಂಧಗಳ ನಡುವೆ ರಹಸ್ಯಗಳನ್ನು ಸಹ ಹೊಂದಿದೆ. ಐದಾರು ಪ್ರಮುಖವಾದ ಪಾತ್ರಗಳಿವೆ. ಈ ಚಿತ್ರವು ಶೀರ್ಷಿಕೆಯಂತೆ ಸಾಕಷ್ಟು ಸಂಕೀರ್ಣ ಮತ್ತು ಆಸಕ್ತಿದಾಯಕವಾಗಿರುವುದಾಗಿ ಸಂಯುಕ್ತಾ ಹೊರನಾಡು ಹೇಳಿದ್ದಾರೆ.

ಸಂಕೀರ್ಣ ಪಾತ್ರವನ್ನು ಎಂಜಾಯ್ ಮಾಡುತ್ತಾ ಮಾಡಿದ್ದು, ಮದುವೆ ಸಮಾರಂಭದಂತೆ ಸೆಟ್ ನಲ್ಲಿ ಎಂಜಾಯ್ ಮಾಡಿದ್ದೇನೆ. ಅನೇಕ ಸಂಗತಿಗಳು ನಡೆಯುುತ್ತವೆ. ಸಾಕಾಷ್ಟು ಗೊಂದಲವಿದ್ದು, ಅಂತಹ ವಾತಾವಾರಣವನ್ನು ಪ್ರೀತಿಸುವುದಾಗಿ ಹೇಳುವ ಸಂಯುಕ್ತಾ ಹೆಗ್ಡೆ, ನಾನು ಕೇವಲ ಮೇಕಪ್ ಧರಿಸಲು ಮತ್ತು ನಟಿಸಲು ಇಷ್ಟಪಡುವುದಿಲ್ಲ, ಮತ್ತು ಪ್ರತಿಯೊಬ್ಬರೂ ತಮ್ಮ ಕಡೆಯಿಂದ ಚಲನಚಿತ್ರಕ್ಕೆ ಏನು ಹಾಕುತ್ತಾರೆ ಎಂಬುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಅರವಿಂದ್ ನನ್ನಗೆ   ಸ್ಕ್ರಿಪ್ಟ್ ಕೊಟ್ಟಾಗ,  ಒಪ್ಪಿಕೊಳ್ಳುವ ಮೊದಲು  ಎರಡು ದಿನ ಕೇಳಿದೆ. ಕಾರಣ, ಕಥೆಯ ಮೂಲಕ ಹೋದಾಗ, ನಿರ್ದೇಶಕರು ಅವರು ಯೋಜಿಸಿದ ಕ್ಯಾಮರಾ ಶಾಟ್ ಗಳ ಬಗ್ಗೆ ಮಾತನಾಡಿ, ಚಿತ್ರದ ಬಗೆಗಿನ ಅವರ ಸಮರ್ಪಣೆಯನ್ನು ವಿವರಿಸುತ್ತಾರೆ. 
ನಿರ್ದೇಶಕರು ತನಗೆ ಬೇಕಾದುದನ್ನು ಮಾಡಬೇಕು, ಅದಕ್ಕೆ ಬೇಕಾದಂತೆ ನಾನು ಮಾಡುತ್ತೇನೆ. ಈ ಚಿತ್ರದ ನಿರ್ಮಾಣದ ಸಮಯದಲ್ಲಿ ಈ ರೀತಿಯಲ್ಲಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಸಂಯುಕ್ತಾ ಹೊರನಾಡು ಹಂಚಿಕೊಂಡಿದ್ದಾರೆ.

ನಿರ್ದೇಶಕರು ಸಂಕೀರ್ಣವಾದ ಕಥೆಯೊಂದಿಗೆ ಬಂದಿದ್ದರೂ ಸಹ,  ಅದನ್ನು ವೀಕ್ಷಕರಿಗೆ ತುಂಬಾ ಸರಳವಾಗಿ ವಿವರಿಸಿದ್ದಾರೆ. 
ಅದು ಸಿನೆಮಾದ ಸೌಂದರ್ಯ. ಪ್ರತಿಯೊಂದು ಮನೆಗಳಿಗೂ ಈ ಕಥೆ ಸಂಪರ್ಕ ಕಲ್ಪಿಸಲಿದ್ದು, ಎಂಜಾಯ್ ಮಾಡಲಿದ್ದಾರೆ ಎಂದು ಸಂಯುಕ್ತಾ ಹೊರನಾಡು ತಿಳಿಸಿದ್ದಾರೆ.

SCROLL FOR NEXT