ಸಂಯುಕ್ತಾ ಹೊರನಾಡು 
ಸಿನಿಮಾ ಸುದ್ದಿ

ಚಿತ್ರಕ್ಕಾಗಿ ಬೇಕಾದ್ದನ್ನು ನಿರ್ದೇಶಕರು ಮಾಡಬೇಕು, ಮತ್ತು ಅದಕ್ಕೆ ಬೇಕಾದ್ದನ್ನು ನಾನು ಮಾಡುತ್ತೇನೆ: ಸಂಯುಕ್ತಾ ಹೊರನಾಡ್

ಅರವಿಂದ್ ಕಾಮತ್ ನಿರ್ದೇಶನದ ಮುಂದಿನ 'ಅರಿಷಡ್ವರ್ಗ' ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವಿನಾಶ್, ಮಹೇಶ್ ಬುಂಡಾ, ಶ್ರೀಪತಿ ಮಂಜನಬೈಲು, ಅರವಿಂದ್ ಕುಪ್ಲಿಕರ್, ನಂದಾ ಗೋಪಾಲ್, ಗೋಪಾಲ ಕೃಷ್ಣ ದೇಶಪಾಂಡೆ ಕೂಡಾ ಅಭಿನಯಿಸಿದ್ದಾರೆ.

ಬೆಂಗಳೂರು: ಅರವಿಂದ್ ಕಾಮತ್ ನಿರ್ದೇಶನದ ಮುಂದಿನ 'ಅರಿಷಡ್ವರ್ಗ' ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವಿನಾಶ್, ಮಹೇಶ್ ಬುಂಡಾ, ಶ್ರೀಪತಿ ಮಂಜನಬೈಲು, ಅರವಿಂದ್ ಕುಪ್ಲಿಕರ್, ನಂದಾ ಗೋಪಾಲ್, ಗೋಪಾಲ ಕೃಷ್ಣ ದೇಶಪಾಂಡೆ ಕೂಡಾ ಅಭಿನಯಿಸಿದ್ದಾರೆ.

ಹರಿಥಾಸ್ ಸಂಗಿತ ಸಂಯೋಜಿಸುತ್ತಿದ್ದು, ಬಾಲಾಜಿ ಮನೋಹರ್ ಅವರ ಛಾಯಾಗ್ರಾಹಣವಿದೆ. ನವೆಂಬರ್ 27 ರಂದು ಚಿತ್ರ ಬಿಡುಗಡೆಯಾಗಲಿದ್ದು, ಇದರ ಟ್ರೇಲರ್ ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

'ಅರಿಷಡ್ವರ್ಗ' ಎಂದರೆ, ನಿಮ್ಮೊಳಗಿನ ರಾಕ್ಷಸರು, ಇದೊಂದು ಕೊಲೆ ರಹಸ್ಯವಾಗಿದೆ. ಆದರೆ, ಅದು ಒಂದೇ ಎಂಬಂತೆ ಪರಿಗಣಿಸಿಲ್ಲ,  ಇದು ಸಂಬಂಧಗಳ ನಡುವೆ ರಹಸ್ಯಗಳನ್ನು ಸಹ ಹೊಂದಿದೆ. ಐದಾರು ಪ್ರಮುಖವಾದ ಪಾತ್ರಗಳಿವೆ. ಈ ಚಿತ್ರವು ಶೀರ್ಷಿಕೆಯಂತೆ ಸಾಕಷ್ಟು ಸಂಕೀರ್ಣ ಮತ್ತು ಆಸಕ್ತಿದಾಯಕವಾಗಿರುವುದಾಗಿ ಸಂಯುಕ್ತಾ ಹೊರನಾಡು ಹೇಳಿದ್ದಾರೆ.

ಸಂಕೀರ್ಣ ಪಾತ್ರವನ್ನು ಎಂಜಾಯ್ ಮಾಡುತ್ತಾ ಮಾಡಿದ್ದು, ಮದುವೆ ಸಮಾರಂಭದಂತೆ ಸೆಟ್ ನಲ್ಲಿ ಎಂಜಾಯ್ ಮಾಡಿದ್ದೇನೆ. ಅನೇಕ ಸಂಗತಿಗಳು ನಡೆಯುುತ್ತವೆ. ಸಾಕಾಷ್ಟು ಗೊಂದಲವಿದ್ದು, ಅಂತಹ ವಾತಾವಾರಣವನ್ನು ಪ್ರೀತಿಸುವುದಾಗಿ ಹೇಳುವ ಸಂಯುಕ್ತಾ ಹೆಗ್ಡೆ, ನಾನು ಕೇವಲ ಮೇಕಪ್ ಧರಿಸಲು ಮತ್ತು ನಟಿಸಲು ಇಷ್ಟಪಡುವುದಿಲ್ಲ, ಮತ್ತು ಪ್ರತಿಯೊಬ್ಬರೂ ತಮ್ಮ ಕಡೆಯಿಂದ ಚಲನಚಿತ್ರಕ್ಕೆ ಏನು ಹಾಕುತ್ತಾರೆ ಎಂಬುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಅರವಿಂದ್ ನನ್ನಗೆ   ಸ್ಕ್ರಿಪ್ಟ್ ಕೊಟ್ಟಾಗ,  ಒಪ್ಪಿಕೊಳ್ಳುವ ಮೊದಲು  ಎರಡು ದಿನ ಕೇಳಿದೆ. ಕಾರಣ, ಕಥೆಯ ಮೂಲಕ ಹೋದಾಗ, ನಿರ್ದೇಶಕರು ಅವರು ಯೋಜಿಸಿದ ಕ್ಯಾಮರಾ ಶಾಟ್ ಗಳ ಬಗ್ಗೆ ಮಾತನಾಡಿ, ಚಿತ್ರದ ಬಗೆಗಿನ ಅವರ ಸಮರ್ಪಣೆಯನ್ನು ವಿವರಿಸುತ್ತಾರೆ. 
ನಿರ್ದೇಶಕರು ತನಗೆ ಬೇಕಾದುದನ್ನು ಮಾಡಬೇಕು, ಅದಕ್ಕೆ ಬೇಕಾದಂತೆ ನಾನು ಮಾಡುತ್ತೇನೆ. ಈ ಚಿತ್ರದ ನಿರ್ಮಾಣದ ಸಮಯದಲ್ಲಿ ಈ ರೀತಿಯಲ್ಲಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಸಂಯುಕ್ತಾ ಹೊರನಾಡು ಹಂಚಿಕೊಂಡಿದ್ದಾರೆ.

ನಿರ್ದೇಶಕರು ಸಂಕೀರ್ಣವಾದ ಕಥೆಯೊಂದಿಗೆ ಬಂದಿದ್ದರೂ ಸಹ,  ಅದನ್ನು ವೀಕ್ಷಕರಿಗೆ ತುಂಬಾ ಸರಳವಾಗಿ ವಿವರಿಸಿದ್ದಾರೆ. 
ಅದು ಸಿನೆಮಾದ ಸೌಂದರ್ಯ. ಪ್ರತಿಯೊಂದು ಮನೆಗಳಿಗೂ ಈ ಕಥೆ ಸಂಪರ್ಕ ಕಲ್ಪಿಸಲಿದ್ದು, ಎಂಜಾಯ್ ಮಾಡಲಿದ್ದಾರೆ ಎಂದು ಸಂಯುಕ್ತಾ ಹೊರನಾಡು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT