ಅಂಜಲಿ ಅನೀಶ್ 
ಸಿನಿಮಾ ಸುದ್ದಿ

'ಪದವಿ ಪೂರ್ವ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಂಜಲಿ ಅನೀಶ್ ಪ್ರವೇಶ

ಹರಿಪ್ರಸಾದ್ ಜಯಣ್ಣ ನಿರ್ದೇಶನದ "ಪದವಿ ಪೂರ್ವ" ಚಿತ್ರದ ಮೂಲಕ ಅಂಜಲಿ ಹರೀಶ್ ಎಂಬ ನವ ಪ್ರತಿಭೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುತ್ತಿದೆ.  2019 ರ ಟೈಮ್ಸ್ ಫ್ರೆಶ್ ಫೇಸ್, ರಾಂಪ್‌ನಲ್ಲಿ ಭಾಗವಹಿಸಿದ್ದ ಅಂಜಲಿ ಇದೀಗ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಹರಿಪ್ರಸಾದ್ ಜಯಣ್ಣ ನಿರ್ದೇಶನದ "ಪದವಿ ಪೂರ್ವ" ಚಿತ್ರದ ಮೂಲಕ ಅಂಜಲಿ ಹರೀಶ್ ಎಂಬ ನವ ಪ್ರತಿಭೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುತ್ತಿದೆ.  2019 ರ ಟೈಮ್ಸ್ ಫ್ರೆಶ್ ಫೇಸ್, ರಾಂಪ್‌ನಲ್ಲಿ ಭಾಗವಹಿಸಿದ್ದ ಅಂಜಲಿ ಇದೀಗ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಇನ್ನೊಬ್ಬ ಹೊಸ ಪ್ರತಿಭೆ ಪೃಥ್ವಿ ಶಾಮನೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಮೂಲತಃ ದಾವಣಗೆರೆಯವರಾಗಿದ್ದು ಮಾಡೆಲ್ ವೃತ್ತಿಯಲ್ಲಿದ್ದಾರೆ.

ಮಾಡೆಲ್ ಮತ್ತು ಕಾನೂನು ವಿದ್ಯಾರ್ಥಿನಿ ಅಂಜಲಿ ನಿರ್ದೇಶನ ಕ್ಷೇತ್ರದಲ್ಲಿ ಕೆಲ ಕಾಲ ಅನುಭವ ಪಡೆದಿದ್ದಾರೆ.  ಮೂರು ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಇನ್ನುಳಿದ ಪಾತ್ರವರ್ಗ ಅಂತಿಮಗೊಂಡ ನಂತರ ಚಿತ್ರತಂಡವು ನವೆಂಬರ್ ಎರಡನೇ ವಾರದಿಂದ ಫ್ಲೋರ್‍ ಗೆ ತೆರಳಲು ತೀರ್ಮಾನಿಸಿದೆ.

"ಪದವಿ ಪೂರ್ವ" ಎಂದರೆ  ಹೆಸರೇ ಹೇಳಿದಂತೆ ಇದು ವಿಶ್ವವಿದ್ಯಾನಿಕಯದ ಪದವಿ ಪೂರ್ವ ವಿದ್ಯಾರ್ಥಿಗಳ ಸುತ್ತ ಸುತ್ತುವ ಕಥೆಯಾಗಿದೆ. ಯೋಗರಾಜ್ ಭಟ್ ಅವರ ಜತೆ ಗುರುತಿಸಿಕೊಂಡಿರುವ ಹರಿಪ್ರಸಾದ್ ಫ್ರೆಂಡ್ ಶಿಪ್ ಹಾಗೂ ರೊಮಾನ್ಸ್  ಆಧಾರಿತ ಕಥೆಯೊಂದಿಗೆ ಬಂದಿದ್ದಾರೆ ಮತ್ತು 90ರ ದಶಕದ ಉತ್ತರಾರ್ಧದ ಕಾಲೇಜು ಹಿನ್ನೆಲೆಯನ್ನಿಟ್ಟುಕೊಂಡು ಸಿದ್ದವಾಗಿದ್ದಾರೆ.

"ಪದವಿ ಪೂರ್ವ" ಚಿತ್ರವನ್ನು ಯೋಗರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದನ್ನು ಯೋಗರಾಜ್ ಭಟ್ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ, ಅರ್ಜುನ್ ಜನ್ಯಾ ಸಂಗೀತ ಮತ್ತು ಸಂತೋಷ್ ರೈ ಪತ್ತಾಜೆ  ಕ್ಯಾಮೆರಾ ಕೆಲಸ ನಿಭಾಯಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT