ಸಿನಿಮಾ ಸುದ್ದಿ

ಅಣ್ಣ ಚಿರಂಜೀವಿ ಸರ್ಜಾ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ನಟ ಧ್ರುವ ಸರ್ಜಾ!

Vishwanath S

ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು. ಅಷ್ಟರಲ್ಲೇ ಚಿರು ಕುಡಿ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಇನ್ನು ಇತ್ತೀಚೆಗಷ್ಟೇ ಮೇಘನಾ ರಾಜ್ ಅವರು ಸೀಮಂತ ಶಾಸ್ತ್ರ ಕಾರ್ಯಕ್ರಮ ಸಹ ನಡೆದಿತ್ತು.

ದಿವಂಗತ ಚಿರಂಜೀವಿ ಸರ್ಜಾ ಅವರ ಮಗುವಿಗಾಗಿ ನಟ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಮತ್ತು ಚಿನ್ನದ ಬಟ್ಟಲನ್ನು ಖರೀದಿಸಿದ್ದಾರೆ. ಇನ್ನು ಇಡೀ ಕುಟುಂಬ ಜೂನಿಯರ್ ಚಿರುಗೆ ಸ್ವಾಗತ ಕೋರಲು ಸಿದ್ಧರಾಗಿದ್ದಾರೆ. 

ಜೂನಿಯರ್ ಚಿರು ಆಗಮನಕ್ಕೂ ಮುನ್ನವೇ ಧ್ರುವ ಸರ್ಜಾ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲು ಮತ್ತು ಚಿನ್ನದ ಬಟ್ಟಲನ್ನು ಖರೀದಿಸಿದ್ದಾರೆ.

ಅಕ್ಟೋಬರ್ 4ರಂದು ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತ್ತು. 

ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು.

SCROLL FOR NEXT