ಶ್ರೀನಿಧಿ ಶೆಟ್ಟಿ 
ಸಿನಿಮಾ ಸುದ್ದಿ

'ಕೆಜಿಎಫ್ ಚಾಪ್ಟರ್2'ಶೂಟಿಂಗ್:ರಜೆ ಮುಗಿಸಿ ಶಾಲೆಗೆ ಬರುವ ಮಕ್ಕಳಂತೆ ಆಗುತ್ತಿದೆ ಎಂದ ನಾಯಕಿ ಶ್ರೀನಿಧಿ ಶೆಟ್ಟಿ

ಯಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹಿಟ್ ಚಿತ್ರ ಕೆಜಿಎಫ್ ನ ಮುಂದುವರಿದ ಸರಣಿ ಚಿತ್ರ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಕಳೆದ ಆಗಸ್ಟ್ 26ರಂದು ಆರಂಭವಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಶೂಟಿಂಗ್ ಸಾಗುತ್ತಿದೆ.

ಯಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹಿಟ್ ಚಿತ್ರ ಕೆಜಿಎಫ್ ನ ಮುಂದುವರಿದ ಸರಣಿ ಚಿತ್ರ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಕಳೆದ ಆಗಸ್ಟ್ 26ರಂದು ಆರಂಭವಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಶೂಟಿಂಗ್ ಸಾಗುತ್ತಿದೆ.

ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಗಾಗಿ ಚಿತ್ರತಂಡ ಸೇರಲಿದ್ದಾರೆ. ಕೆಜಿಎಫ್ ಚಾಪ್ಟರ್ 1 ಮೂಲಕ ಜನಪ್ರಿಯತೆ ಪಡೆದ ಶ್ರೀನಿಧಿ ಶೆಟ್ಟಿಗೆ ಎರಡನೇ ಭಾಗದಲ್ಲಿ ಕೂಡ ನಟಿಸುತ್ತಿರುವುದು ತುಂಬಾ ಖುಷಿಯಿದೆ. ಇಷ್ಟು ದಿನಗಳ ಲಾಕ್ ಡೌನ್ ನಂತರ ಮತ್ತೆ ಕೆಲಸಕ್ಕೆ ಮರಳಿರುವ ಬಗ್ಗೆ ಉತ್ಸಾಹಿತರಾಗಿರುವ ಶ್ರೀನಿಧಿ ಶೆಟ್ಟಿ, ದೀರ್ಘ ಕಾಲದ ರಜೆಯ ನಂತರ ಮತ್ತೆ ಶಾಲೆಗೆ ಹೋಗುವಾಗ ಮಕ್ಕಳಿಗೆ ಯಾವ ಭಾವನೆ ಇರುತ್ತದೆ ಹಾಗೆಯೇ ನನಗಾಗುತ್ತಿದೆ ಎಂದಿದ್ದಾರೆ.

ಕಳೆದ ಮಾರ್ಚ್ 3ರಂದು ನಾನು ಚಿತ್ರದ ಶೂಟಿಂಗ್ ನಲ್ಲಿ ಕೊನೆಯ ಬಾರಿಗೆ ಭಾಗಿಯಾಗಿದ್ದು. ಚಿತ್ರದ ಪ್ರಮುಖ ಭಾಗದ ಚಿತ್ರೀಕರಣವನ್ನು ಹೈದರಾಬಾದ್ ನಲ್ಲಿ ಮುಗಿಸಿಕೊಂಡು ಬಂದಿದ್ದೆ. ನಂತರ 6 ತಿಂಗಳು ಬ್ರೇಕ್ ಆಯಿತು. ಇಷ್ಟು ಸುದೀರ್ಘ ರಜೆಯ ನಂತರ ಮತ್ತೆ ಕೆಲಸ ಆರಂಭಿಸುತ್ತಿದ್ದು ಕೊನೆಗೂ ಶೂಟಿಂಗ್ ಆರಂಭವಾಗಿರುವುದು ಖುಷಿ ತಂದಿದೆ ಎನ್ನುತ್ತಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಕೆಜಿಎಫ್ ಚಾಪ್ಟರ್ 2 ವನ್ನು ಹೊಂಬಾಳೆ ಫಿಲ್ಮ್ಸ್ ತಯಾರಿಸುತ್ತಿದೆ. ಇದರಲ್ಲಿ ಬಾಲಿವುಡ್ ನ ಖ್ಯಾತ ಕಲಾವಿದರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಅಭಿನಯಿಸಿದ್ದಾರೆ.

ತಮಿಳಿನಲ್ಲಿ ವಿಕ್ರಮ್ ನಟನೆಯ ಕೋಬ್ರಾ ಸಿನೆಮಾ ಮೂಲಕ ಶ್ರೀನಿಧಿ ಶೆಟ್ಟಿ ತಮಿಳಿಗೆ ಸಹ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಅದರ ಶೂಟಿಂಗ್ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ನವೆಂಬರ್ ಅಥವಾ ಡೆಸೆಂಬರ್ ನಲ್ಲಿ ಅದರ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ ಎಂದು ಶ್ರೀನಿಧಿ ಶೆಟ್ಟಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT