ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ 'ಆಬ್ರಕಡಾಬ್ರ'!

ಆಬ್ರಕಡಾಬ್ರ ಎಂದರೆ ಬರೀ ಮ್ಯಾಜಿಕ್ ಮಂತ್ರವಲ್ಲ, ಬದುಕಿನ ಅರ್ಥದ ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ನವ ನಿರ್ದೇಶಕ ಶಿಶಿರ್ ರಾಜ್ ಮೋಹನ್.

ಬೆಂಗಳೂರು: ನಟ ರಕ್ಷಿತ್ ಶೆಟ್ಟಿಯವರ ಪರಮ್ವಾಹ್ ಸ್ಟುಡಿಯೋ ಆಬ್ರಕಡಾಬ್ರ ಎನ್ನುವ ಹೊಸ ಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದೆ. ಈ ಚಿತ್ರವನ್ನು ಉದಯೋನ್ಮುಖ ಬರಹಗಾರ ಮತ್ತು ನಿರ್ದೇಶಕ ಶಿಶಿರ್ ರಾಜ್ ಮೋಹನ್ ಅವರು ನಿರ್ದೇಶಿಸಲಿದ್ದಾರೆ. 

ಈ ಹಿಂದೆ ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಶಿಯನ್ ನೊಗ್ರಾಜ್ ಸಿನಿಮಾಗಳನ್ನು ಪರಮ್ವಾಹ್ ಸ್ಟುಡಿಯೊ ಹೊರತಂದಿತ್ತು.ಐದೇ ಸಂಸ್ಥೆಯ 'ಸಕುಟುಂಬ ಸಮೇತ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 

ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡ ರಕ್ಷಿತ್ ಶೆಟ್ಟಿ ತಮ್ಮ ಸಂಸ್ಥೆಯಿಂದ ಅನಂತ್ ನಾಗ್ ಅಭಿನಯದ ಆಬ್ರಕಡಾಬ್ರ ಚಿತ್ರ ನಿರ್ಮಿಸುತ್ತಿರುವುದಾಗಿ ಘೋಷಿಸಲು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದರು. ವರ್ಷಾ ಕೊಡ್ಗಿ ಅವರು ವಿನ್ಯಾಸ ಮಾಡಿರುವ ಸಿನಿಮಾ ಪೋಸ್ಟರ್ ಸಿನಿಮಾದ ಕಥಾಹಂದರದ ಕುರಿತು ಕುತೂಹಲ ಮೂಡಿಸಿದೆ. 

ತಾರಗಣದಲ್ಲಿ ಸಿರಿ ರವಿಕುಮಾರ್, ಬಿ.ವಿ ಶೃಂಗ, ಅವಿನಾಶ್ ರೈ ಮತ್ತಿತರು ಇದ್ದಾರೆ. ನಿರ್ದೇಶಕ ಶಿಶಿರ್ ರಾಜಮೋಹನ್ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಅವರು ಕಿರುಚಿತ್ರ ಹಾಗೂ ಜಾಹೀರಾತುಗಳನ್ನು ನಿರ್ಮಿಸಿದ್ದಾರೆ. 

ಆಬ್ರಕಡಾಬ್ರ ಎಂದರೆ ಅದೊಂದು ಮ್ಯಾಜಿಕ್ ಮಂತ್ರವಲ್ಲ, ಜೀವನದುದ್ದಕ್ಕೂ ನಮಗಾಗುವ ಅರ್ಥೈಸುವಿಕೆ, ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ಶಿಶಿರ್.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT