ದರ್ಶನ್ 
ಸಿನಿಮಾ ಸುದ್ದಿ

ಆಸ್ತಿ ದೊಡ್ಡಮನೆಯವರದ್ದು, ಹೀಗಾಗಿ ಕೊಡಲ್ಲ ಎಂದೆ: ದರ್ಶನ್ ಜೊತೆಗಿನ ರಂಪಾಟದ ಕಾರಣ ಬಿಚ್ಚಿಟ್ಟ ಉಮಾಪತಿ!

ದರ್ಶನ್ ಹೆಸರಲ್ಲಿ ನಡೆದ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದು ನಿರ್ಮಾಪಕ ಉಪಮಾತಿ ಶ್ರೀನಿವಾಸ್ ಗೌಡ ಮತ್ತೊಂದು ಸ್ಪೋಟಕ ಮಾಹಿತಿ ಸಿಡಿಸಿದ್ದಾರೆ.

ಬೆಂಗಳೂರು: ದರ್ಶನ್ ಹೆಸರಲ್ಲಿ ನಡೆದ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದು ನಿರ್ಮಾಪಕ ಉಪಮಾತಿ ಶ್ರೀನಿವಾಸ್ ಗೌಡ ಮತ್ತೊಂದು ಸ್ಪೋಟಕ ಮಾಹಿತಿ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ನಿರ್ಮಾಪಕ ಉಮಾಪತಿ. ನಮ್ಮಿಬ್ಬರ ಮಧ್ಯೆ ಆಸ್ತಿ ವಿಚಾರ ಬಂದಿದ್ದು ನಿಜ, ಆ ಆಸ್ತಿ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರದ್ದು, ಅದು ದೊಡ್ಡ ಮನೆಯವರ ಆಸ್ತಿ, ಹಾಗಾಗಿ ನಾನು ಅದನ್ನು ಕೊಡೊದಿಲ್ಲ ಎಂದು ಹೇಳಿದ್ದೆ, ಅಲ್ಲಿಗೆ ದರ್ಶನ್ ಸುಮ್ಮನಾಗಿದ್ದರು. ಆಸ್ತಿ ಕೊಟ್ಟಿಲ್ಲ ಎಂದು ದರ್ಶನ್ ಕೋಪ ಮಾಡಿಕೊಂಡಿಲ್ಲ ಎಂದು ಉಮಾಪತಿ ತಿಳಿಸಿದ್ದಾರೆ.

ಆಸ್ತಿಯನ್ನು ನಾನು ಕೊಡೋದಿಲ್ಲ ಎಂದಿದ್ದು ನಿಜ, ಅದಕ್ಕೆ ದರ್ಶನ್ ಬೇಜಾರಾಗಿಲ್ಲ ಅಂದುಕೊಂಡಿದ್ದೇನೆ, ನನ್ನ ಮತ್ತು ದರ್ಶನ್ ನಡುವೆ ಏನೇನೋ ನಡೆದಿರುತ್ತದೆ, ದೊಡ್ಡಮನೆಯವರ ಆಸ್ತಿಯನ್ನು ದರ್ಶನ್ ಅವರಿಗೆ ಕೊಟ್ಟರೇ ಸರಿ ಆಗುತ್ತಾ ನೀವೆ ಯೋಚಿಸಿ ಎಂದು ಪ್ರಶ್ನಿಸಿದ್ದಾರೆ. 

ಇನ್ನೂ ಇಂದ್ರಜಿತ್ ಅವರ ಬಳಿ ಹೋಗಿ ಸಹಾಯ ಪಡೆಯುವ ಅವಶ್ಯಕತೆ ನನಗಿಲ್ಲ ಎಂದು ಉಮಾಪತಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT