ಯೋಗರಾಜ್ ಭಟ್ ಜೊತೆ ಬಿಸಿ ಪಾಟೀಲ್ ಸಿನಿಮಾ 
ಸಿನಿಮಾ ಸುದ್ದಿ

ಕೃಷಿ ಸಚಿವ ಬಿಸಿ ಪಾಟೀಲ್ ಜೊತೆ ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನಿಮಾ

ನಿರ್ದೇಶಕ ಯೋಗರಾಜ್ ಭಟ್  ಮತ್ತೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್  ಮತ್ತೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ. 

ಕೆಲವು ವರ್ಷಗಳ ಹಿಂದೆಯಷ್ಟೇ ಅವರು 'ಹ್ಯಾಪಿ ನ್ಯೂ ಇಯರ್‌' ಸಿನಿಮಾಗೆ ಬಂಡವಾಳ ಹೂಡಿದ್ದರು. ಇದೀಗ ಅವರು ಸಚಿವರಾದರೂ ಸಿನಿಮಾ ನಂಟು ಬಿಡದೆ ಮತ್ತೆ ಭಟ್ಟರ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ನನ್ನದು ಮತ್ತು ಬಿ.ಸಿ ಪಾಟೀಲ್‌ರದ್ದು ಬಯಲು ಸೀಮೆಯ ಸ್ನೇಹ. ಇಬ್ಬರೂ ಒಂದೇ ಭಾಗದಿಂದ ಬಂದವರು. ಹಾಗಾಗಿ ನಮ್ಮಿಬ್ಬರಲ್ಲಿ ಪರಸ್ಪರ ವಿಶೇಷವಾದ ಪ್ರೀತಿ, ವಿಶ್ವಾಸವಿದೆ. ಯಾವುದೋ ವಿಚಾರಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿ ಮಾಡಿದ್ದೆ. ಆಗ ಸಿನಿಮಾ ಮಾಡುವ ವಿಚಾರ ಪ್ರಸ್ತಾಪವಾಯಿತು. ಈ ಬಗ್ಗೆ ಒಂದೆರಡು ಲೈನ್‌ ಹೇಳಿದ್ದೆ. ನಂತರ ಸಿನಿಮಾ ನಿರ್ಮಾಣ ಫೈನಲ್‌ ಆಯಿತು. ಗುರು ಪೂರ್ಣಿಮೆಯ ದಿನ ನಾವು ಮತ್ತೆ ಭೇಟಿಯಾದೆವು ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ. 

ಈ ಸಿನಿಮಾಗೆ ಕಥೆ ಮತ್ತು ಕಲಾವಿದರು ಫೈನಲ್‌ ಆಗಿದ್ದು, ಇವೆಲ್ಲವನ್ನೂ ಅವರು ಸದ್ಯದಲ್ಲೇ ಅನೌನ್ಸ್‌ ಮಾಡಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‌ ಮತ್ತು ಆ್ಯಕ್ಷನ್‌ ಓರಿಯೆಂಟೆಡ್‌ ಸಿನಿಮಾ. ಕನ್ನಡ , ತೆಲುಗು, ತಮಿಳು ಭಾಷೆಗಳಲ್ಲಿ ನಟಿಸುತ್ತಿರುವ ಕಲಾವಿದರೊಬ್ಬರು ಈ ಸಿನಿಮಾದಲ್ಲಿ ನಾಯಕರಾಗಿದ್ದು, ನಾಯಕಿ ಕೂಡ ದಕ್ಷಿಣ ಭಾರತದ ಖ್ಯಾತ ತಾರೆ ಎನ್ನಲಾಗುತ್ತಿದೆ.

ಯೋಗರಾಜ್‌ ಭಟ್‌ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಕಾಂಬಿನೇಶನ್‌ನಲ್ಲಿ ಸಾಕಷ್ಟು ಯಶಸ್ವಿ ಹಾಡುಗಳು ಬಂದಿದ್ದು, ಬಿ.ಸಿ ಪಾಟೀಲರ ಸಿನಿಮಾಗಾಗಿ ಈ ಜೋಡಿ ಮತ್ತೆ ಒಂದಾಗಿದೆ. ಗುರು ಪೂರ್ಣಿಮೆ ದಿನ ಯೋಗರಾಜ್‌ ಭಟ್ಟರ ಕಚೇರಿಯಲ್ಲಿ ಹರಿಕೃಷ್ಣ, ಯೋಗರಾಜ್‌ ಭಟ್‌ ಮತ್ತು ಅವರ ಸ್ನೇಹಿತ, ನಿರ್ದೇಶಕ ಸೂರಿ, ಸುಧೀರ್‌ ಅರಸ್‌, ನಟ, ಕಥೆಗಾರ ವಿಕಾಸ್‌ ಮತ್ತು ಬಿ.ಸಿ ಪಾಟೀಲ್‌ ಇರುವ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT