ಯೋಗರಾಜ್ ಭಟ್ ಜೊತೆ ಬಿಸಿ ಪಾಟೀಲ್ ಸಿನಿಮಾ 
ಸಿನಿಮಾ ಸುದ್ದಿ

ಕೃಷಿ ಸಚಿವ ಬಿಸಿ ಪಾಟೀಲ್ ಜೊತೆ ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನಿಮಾ

ನಿರ್ದೇಶಕ ಯೋಗರಾಜ್ ಭಟ್  ಮತ್ತೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್  ಮತ್ತೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ಕೃಷಿ ಸಚಿವ ಬಿ.ಸಿ ಪಾಟೀಲ್‌ ನಿರ್ಮಾಣ ಮಾಡುತ್ತಿದ್ದಾರೆ. 

ಕೆಲವು ವರ್ಷಗಳ ಹಿಂದೆಯಷ್ಟೇ ಅವರು 'ಹ್ಯಾಪಿ ನ್ಯೂ ಇಯರ್‌' ಸಿನಿಮಾಗೆ ಬಂಡವಾಳ ಹೂಡಿದ್ದರು. ಇದೀಗ ಅವರು ಸಚಿವರಾದರೂ ಸಿನಿಮಾ ನಂಟು ಬಿಡದೆ ಮತ್ತೆ ಭಟ್ಟರ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ನನ್ನದು ಮತ್ತು ಬಿ.ಸಿ ಪಾಟೀಲ್‌ರದ್ದು ಬಯಲು ಸೀಮೆಯ ಸ್ನೇಹ. ಇಬ್ಬರೂ ಒಂದೇ ಭಾಗದಿಂದ ಬಂದವರು. ಹಾಗಾಗಿ ನಮ್ಮಿಬ್ಬರಲ್ಲಿ ಪರಸ್ಪರ ವಿಶೇಷವಾದ ಪ್ರೀತಿ, ವಿಶ್ವಾಸವಿದೆ. ಯಾವುದೋ ವಿಚಾರಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿ ಮಾಡಿದ್ದೆ. ಆಗ ಸಿನಿಮಾ ಮಾಡುವ ವಿಚಾರ ಪ್ರಸ್ತಾಪವಾಯಿತು. ಈ ಬಗ್ಗೆ ಒಂದೆರಡು ಲೈನ್‌ ಹೇಳಿದ್ದೆ. ನಂತರ ಸಿನಿಮಾ ನಿರ್ಮಾಣ ಫೈನಲ್‌ ಆಯಿತು. ಗುರು ಪೂರ್ಣಿಮೆಯ ದಿನ ನಾವು ಮತ್ತೆ ಭೇಟಿಯಾದೆವು ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ. 

ಈ ಸಿನಿಮಾಗೆ ಕಥೆ ಮತ್ತು ಕಲಾವಿದರು ಫೈನಲ್‌ ಆಗಿದ್ದು, ಇವೆಲ್ಲವನ್ನೂ ಅವರು ಸದ್ಯದಲ್ಲೇ ಅನೌನ್ಸ್‌ ಮಾಡಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‌ ಮತ್ತು ಆ್ಯಕ್ಷನ್‌ ಓರಿಯೆಂಟೆಡ್‌ ಸಿನಿಮಾ. ಕನ್ನಡ , ತೆಲುಗು, ತಮಿಳು ಭಾಷೆಗಳಲ್ಲಿ ನಟಿಸುತ್ತಿರುವ ಕಲಾವಿದರೊಬ್ಬರು ಈ ಸಿನಿಮಾದಲ್ಲಿ ನಾಯಕರಾಗಿದ್ದು, ನಾಯಕಿ ಕೂಡ ದಕ್ಷಿಣ ಭಾರತದ ಖ್ಯಾತ ತಾರೆ ಎನ್ನಲಾಗುತ್ತಿದೆ.

ಯೋಗರಾಜ್‌ ಭಟ್‌ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಕಾಂಬಿನೇಶನ್‌ನಲ್ಲಿ ಸಾಕಷ್ಟು ಯಶಸ್ವಿ ಹಾಡುಗಳು ಬಂದಿದ್ದು, ಬಿ.ಸಿ ಪಾಟೀಲರ ಸಿನಿಮಾಗಾಗಿ ಈ ಜೋಡಿ ಮತ್ತೆ ಒಂದಾಗಿದೆ. ಗುರು ಪೂರ್ಣಿಮೆ ದಿನ ಯೋಗರಾಜ್‌ ಭಟ್ಟರ ಕಚೇರಿಯಲ್ಲಿ ಹರಿಕೃಷ್ಣ, ಯೋಗರಾಜ್‌ ಭಟ್‌ ಮತ್ತು ಅವರ ಸ್ನೇಹಿತ, ನಿರ್ದೇಶಕ ಸೂರಿ, ಸುಧೀರ್‌ ಅರಸ್‌, ನಟ, ಕಥೆಗಾರ ವಿಕಾಸ್‌ ಮತ್ತು ಬಿ.ಸಿ ಪಾಟೀಲ್‌ ಇರುವ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT