3ದೇವಿ ಸ್ಟಿಲ್ 
ಸಿನಿಮಾ ಸುದ್ದಿ

51 ಸೆಲೆಬ್ರಿಟಿಗಳಿಂದ ಜೂನ್ 6 ರಂದು '3ದೇವಿ' ಟ್ರೈಲರ್ ರಿಲೀಸ್!

ಶುಭಾ ಪೂಂಜಾ, ಜ್ಯೋತ್ಸ್ನಾ ಬಿ ರಾವ್ ಹಾಗೂ ಸಂಧ್ಯಾ ಲಕ್ಷ್ಮಿನಾರಾಯಣ ನಟನೆಯ 3ದೇವಿ ಸಿನಿಮಾ ಟ್ರೈಲರ್ ಜೂನ್ 6 ರಂದು ರಿಲೀಸ್ ಆಗಲಿದೆ. 

ಶುಭಾ ಪೂಂಜಾ, ಜ್ಯೋತ್ಸ್ನಾ ಬಿ ರಾವ್ ಹಾಗೂ ಸಂಧ್ಯಾ ಲಕ್ಷ್ಮಿನಾರಾಯಣ ನಟನೆಯ 3ದೇವಿ ಸಿನಿಮಾ ಟ್ರೈಲರ್ ಜೂನ್ 6 ರಂದು ರಿಲೀಸ್ ಆಗಲಿದೆ. 

ಸುಮಾರು 51 ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೈಲರ್ ರಿಲೀಸ್ ಮಾಡಲಿದ್ದು, 300 ಜನ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ನಾನು ಈ ಚಿತ್ರಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇನೆ. ಇದಲ್ಲದೆ, ಬಿಗ್ ಬಾಸ್ ನಂತರ, ನಾನು ಯುವತಿಯರು ಮತ್ತು ಮಕ್ಕಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದೇನೆ ಮತ್ತು ಈ ಚಿತ್ರದ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ" ಎಂದು ಶುಭಾ ಹೇಳುತ್ತಾರೆ.

ಆಲ್ಟರ್ಡ್ ಇಗೋ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ಶುಭ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. "ನಾನು ಕಾರ್ಯನಿರ್ವಾಹಕ ನಿರ್ಮಾಪಕಿಯಾದ್ದೇನೆ, ಬರಹಗಾರ-ನಿರ್ದೇಶಕ ಅಶ್ವಿನ್ ಎ ಮ್ಯಾಥ್ಯೂ ಅವರೊಂದಿಗೆ ಪ್ರಾರಂಭದಿಂದಲೇ ಕೆಲಸ ಮಾಡಿದ್ದೇನೆ" ಎಂದು ಶುಭಾ ತಿಳಿಸಿದ್ದಾರೆ.

3ದೇವಿ ಸಿನಿಮಾ ಮಹಿಳಾ ಆಧಾರಿತ ಕಥೆಯಾಗಿದೆ. ತಮ್ಮ ಜೀವನದಲ್ಲಿ ದಬ್ಬಾಳಿಕೆಯ ಸಂದರ್ಭಗಳಿಂದ ಹೊರಬರಲು ನಿರ್ಧರಿಸುವ ಮೂವರು ಮಹಿಳೆಯರು ತಮ್ಮ ಮನಸ್ಸನ್ನು ತೆರವುಗೊಳಿಸುವ ಪ್ರಯಾಣದಲ್ಲಿ ಸಾಗುತ್ತಾರೆ. ಈ ಪ್ರಯಾಣದಲ್ಲಿ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ಜೀವಂತವಾಗಿರಲು ಇರುವ ಏಕೈಕ ಮಾರ್ಗವೆಂದರೆ ಅವರೊಳಗಿರುವ ಆಂತರಿಕ ದೇವತೆಗಳನ್ನು ಆಹ್ವಾನಿಸುವುದು. 3 ದೇವಿ ಟ್ರೈಲರ್ ಇದರ ಸಂಪೂರ್ಣ ಚಿತ್ರಣ ನೀಡುತ್ತದೆ ಎಂದು  ಶುಭಾ ತಿಳಿಸಿದ್ದಾರೆ.

ಈ ನಡುವೆ ಪ್ರೊಡಕ್ಷನ್ ಹೌಸ್, ಸಿನಿಮಾದ ಭಾಗವಾಗಿರುವ ಪ್ರತಿಯೊಬ್ಬ ಕಲಾವಿದರಿಗೂ ಪೋಸ್ಟರ್ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಪ್ರಯೋಗ ನಡೆಸಿದೆ "ಪ್ರತಿಯೊಬ್ಬ ನಟ, ಸಂಭಾಷಣೆ ಇಲ್ಲದವರೂ ಸಹ ಇದರ ಭಾಗವಾಗಿದ್ದಾರೆ, ಮತ್ತು ಪ್ರತಿಯೊಬ್ಬರೂ ಇದನ್ನು ಟ್ರೋಫಿ ಎಂದು ಪರಿಗಣಿಸಿದ್ದಾರೆ.

ನಕಾರಾತ್ಮಕತೆ ಮತ್ತು ನಿರಾಶಾವಾದ ಇರುವ ಸಮಯದಲ್ಲಿ, ಇದು ಅವರಿಗೆ ನಿಜವಾದ ಸಂತೋಷವನ್ನು ತಂದಿದೆ ಎಂದು ಶುಭಾ ತಿಳಿಸಿದ್ದಾರೆ. ಸಣ್ಣ ಪಾತ್ರಗಳನ್ನು ನಿರ್ವಹಿಸುವವರು ಮತ್ತು 30 ವರ್ಷಗಳಿಂದ ಉದ್ಯಮದೊಂದಿಗೆ ಸಂಬಂಧ ಹೊಂದಿರುವವರಿಗೆ ಅಪಾರ ಸಂತಸ ತಂದಿದೆ ಎಂದು ಹೇಳಿದ್ದಾರೆ. ಈ ಸಿನಿಮಾಗೆ ಕಾರ್ತಿಕ್ ಸರಗೂರು ಸಂಭಾಷಣೆ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT