ಚಲನಚಿತ್ರ ಗೀತರಚನೆಕಾರ ಕವಿರಾಜ್ 
ಸಿನಿಮಾ ಸುದ್ದಿ

ಬಡವರಿಗಾಗಿ ಉಚಿತ ಆಕ್ಸಿಜನ್ ಸೆಂಟರ್ ಆರಂಭಿಸಿ ಮಾದರಿಯಾದ ಕವಿರಾಜ್

ಚಿತ್ರಸಾಹಿತಿ ಕವಿರಾಜ್ ಅವರು ಕೆಲವ ಸಮಾನ ಮನಸ್ಕರೊಟ್ಟಿಗೆ ಸೇರಿಕೊಂಡು ಬಡವರಿಗೆ ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್ ಆರಂಭಿಸಿ ಮಾದರಿಯಾಗಿದ್ದಾರೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಕನ್ನಡ ಚಿತ್ರರಂಗ ಸ್ಪಂದಿಸುತ್ತಿಲ್ಲ ಎಂಬ ಆರೋಪದ ನಡುವೆಯೇ ಚಿತ್ರ ಸಾಹಿತಿ ಕವಿರಾಜ್, ಬಡವರಿಗಾಗಿ ಉಚಿತ ಆಕ್ಸಿಜನ್ ಸೆಂಟರ್ ಆರಂಭಿಸಿದ್ದಾರೆ. ಆದರೆ ಜನರ ಚಪ್ಪಾಳೆ ಗಿಟ್ಟಿಸಿ ಹಣ ಎಣಿಸಿಕೊಂಡ ಹಲವು ಪ್ರಮುಖ ನಟ, ನಟಿಯರು ಈ ಸಂದರ್ಭದಲ್ಲಿ ಗಪ್ ಚುಪ್ ಆಗಿರುವ ಬಗ್ಗೆ ಸಾರ್ವಜನಿಕರಲ್ಲಿ ಬೇಸರ ಮೂಡಿದೆ.

ಆದಾಗ್ಯೂ, ಚಿತ್ರಸಾಹಿತಿ ಕವಿರಾಜ್ ಅವರು ಕೆಲವ ಸಮಾನ ಮನಸ್ಕರೊಟ್ಟಿಗೆ ಸೇರಿಕೊಂಡು ಬಡವರಿಗೆ ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್ ಆರಂಭಿಸಿ ಮಾದರಿಯಾಗಿದ್ದಾರೆ.

ಆಮ್ಲಜನಕ ಸಿಗದೆ ಕೋವಿಡ್‌ ರೋಗಿಗಳು ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡು ಮರುಗಿದ್ದು,''ಪರಿಸ್ಥಿತಿ ಬಹಳ ಕೈ ಮೀರಿದೆ. ಮುಂದೆ ಇನ್ನೂ ಕಠಿಣ ಆಗುವ ಸೂಚನೆಯಿದೆ. ಇಂತಾ ಹೊತ್ತಲ್ಲಿ ವ್ಯವಸ್ಥೆಯನ್ನು ದೂರುತ್ತ ಕೂರುವುದಕ್ಕಿಂತಾ, ಒಂದು ಕಲ್ಯಾಣ ಮಂಟಪ/ ಶೆಡ್ / ಖಾಲಿ ಬಿಲ್ಡಿಂಗ್/ ಶಾಲಾ ಕಾಲೇಜ್ ಬಿಲ್ಡಿಂಗ್ ತರಹದ ಯಾವುದಾದರೂ ಒಂದು ಜಾಗದಲ್ಲಿ ನಾವೇ ಅಂದರೆ ಒಂದಷ್ಟು ಸಮಾನ ಮನಸ್ಕ ಜನರೇ ಸೇರಿ ಒಂದಷ್ಟು ಆಕ್ಸಿಜನ್ ಸಮೇತ ಬೆಡ್ ಗಳನ್ನು ಬಡವರಿಗೆ ಏಕೆ ಒದಗಿಸಬಾರದು ಎಂಬ ಚಿಂತನೆ ಬಂದಿದೆ. ಸಮಾನ ಮನಸ್ಕರು, ಕೈ ಜೋಡಿಸುವ ಆಸಕ್ತಿ ಇರುವವರು ಸಾಧ್ಯಾಸಾಧ್ಯತೆ , ಸವಾಲು, ಪರಿಕರಗಳ ಲಭ್ಯತೆ (ಕಟ್ಟಡ, ಆಕ್ಸಿಜನ್ ಇತ್ಯಾದಿ.) ಬಗ್ಗೆ ಸಲಹೆ ಸೂಚನೆ ನೀಡಿ'' ಎಂದು ಮನವಿ ಮಾಡಿ ಕೆಲವು ಸಮಾನ ಮನಸ್ಕರನ್ನು ಟ್ಯಾಗ್ ಮಾಡಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇ 07ರಂದು ಫೇಸ್‌ಬುಕ್ ಪೋಸ್ಟ್ ಮಾಡಿರುವ ಕವಿರಾಜ್, 'ನಾವೆಲ್ಲಾ ಸೇರಿ ಬಡವರಿಗೆ 'ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್' ಮಾಡುವ ಚಿಂತನೆಗೆ ಹಲವರು ಕೈ ಜೋಡಿಸುತ್ತಿದ್ದು ಆಶಾದಾಯಕ ಪ್ರಗತಿಯಾಗಿದೆ. ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಮೊದಲ ಹಂತಕ್ಕೆ ಆಗಿದೆ. ಕೋಣನಕುಂಟೆ ಬಳಿ ಒಳ್ಳೆಯ ಸ್ಥಳ ದೊರಕಿದೆ, ಬಿಬಿಎಂಪಿ ಆರೋಗ್ಯ ಅನುಮತಿ ಮತ್ತು ಸಹಕಾರದ ಭರವಸೆ ಸಿಕ್ಕಿದೆ'' ಎಂದಿದ್ದಾರೆ. ಆದರೆ 'ಯಾರಾದರೊಬ್ಬರು ಸಹೃದಯಿ ವೈದ್ಯರು ನಮ್ಮ ಜೊತೆ ಕೈ ಜೋಡಿಸಬೇಕು .ದಿನಕ್ಕೆ ಒಂದು ಭೇಟಿ ಕೊಟ್ಟು ಪರಿಶೀಲಿಸುವಂತಾದರು ಸಾಕು. ಅವರಿಗೆ ಗೌರವಧನವನ್ನು ನೀಡಬಹುದು. ಅಂತವರು ಯಾರಾದರು ನಿಮ್ಮ ಬಳಗದಲ್ಲಿದ್ದರೆ ತಿಳಿಸಿ‌. ನಮ್ಮ ಜೊತೆ ಯಾವುದೇ ರೀತಿಯಲ್ಲಿ ಕೈ ಜೋಡಿಸಲು ಆಸಕ್ತಿ ಇರುವವರೆಲ್ಲರಿಗೂ ಸ್ವಾಗತ'' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT