ನಾನು ನಿನ್ನ ಪ್ರೀತಿಸುವೆ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಮುದ್ದಾದ ಜೋಡಿಗಳ ಕ್ಯೂಟ್ ಲವ್ ಸ್ಟೋರಿ "ನಾನು ನಾನು ಪ್ರೀತಿಸುತ್ತಿರುವೆ"

ನಾನು ನಾನು ಪ್ರೀತಿಸುತ್ತಿರುವೆ... ನಿನ್ನೆ ನಿನ್ನೆ ಪ್ರೀತಿಸುತ್ತಿರುವೆ... ಎಂಬ ಆಲ್ಬಂ ಸಾಂಗ್‌ವೊಂದು ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಸದ್ದು ಮಾಡುತ್ತಿದೆ.

ಬೆಂಗಳೂರು; ನಾನು ನಾನು ಪ್ರೀತಿಸುತ್ತಿರುವೆ... ನಿನ್ನೆ ನಿನ್ನೆ ಪ್ರೀತಿಸುತ್ತಿರುವೆ...ಎಂಬ ಆಲ್ಬಂ ಸಾಂಗ್‌ವೊಂದು ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಸದ್ದು ಮಾಡುತ್ತಿದೆ. 

ಈ ಮೊದಲು ಬಿಡುಗಡೆ ಆಗಿದ್ದ ಟೀಸರ್ ಸಹ ಕುತೂಹಲ ಕೆರಳಿಸಿತ್ತು. 24 ಗಂಟೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಮಂದಿಯನ್ನು ಸೆಳೆದಿತ್ತು. ಶುಕ್ರವಾರ ಸಾಂಗ್ ರಿಲೀಸ್ ಆಗಿದ್ದು, ಸೌಂಡ್ ಜೋರಾಗಿಯೇ ಇದೆ. ಮುದ್ದಾದ ಜೋಡಿಗಳ ನವಿರಾದ ಪ್ರೇಮಕತೆ ಇರುವ ಹಾಡಿಗೆ ಸಾಹಿತ್ಯ, ಸಂಗೀತ, ಹಿನ್ನೆಲೆ ದೃಶ್ಯಕಾವ್ಯ  ಮತ್ತಷ್ಟು ಜೀವ ತುಂಬಿದೆ.  

ಕಷ್ಣ- ತುಳಸಿ ಸಿನಿಮಾ ಖ್ಯಾತಿಯ ಮೇಘಶ್ರೀ ಈ ಕ್ಯೂಟ್ ಲವ್ ಸ್ಟೋರಿ ಹಾಡಿನ ನಾಯಕಿ. ಬಬ್ಲಿ ಬಬ್ಲಿ ಹುಡುಗಿಯಾಗಿ ಮೇಘ್ರಶ್ರೀ ಕಾಣಿಸಿಕೊಂಡಿದ್ದು, ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ನಾಯಕರಾಗಿ ಮಿಂಚಿದ್ದಾರೆ.

ಮಂಗಳೂರಿನ ಕಡಲ ಕಿನಾರೆಯಲ್ಲಿ ಅರಳಿರುವ ಈ ಪ್ರೇಮಕಾವ್ಯ, ಸಖತ್ ಟ್ರೆಂಡಿ ಆಗಿದೆ. ತನ್ನ ಹುಡುಗಿಯನ್ನು ಒಲಿಸಿಕೊಳ್ಳಲು ನಾಯಕ ಮಾಡುವ ಮುದ್ದಾಟ ಅಷ್ಟೇ ಚೆಂದವಾಗಿದೆ. ಸೌಂದರ್ಯಕ್ಕಿಂತ ಪ್ರೀತಿ ಮುಖ್ಯ ಎಂಬ ಸಂದೇಶ ಸಹ ಹಾಡಿನಲ್ಲಿದೆ.

ನಿರ್ಮಾಪಕಿ ಮಮತಾ ಶ್ರೀ ಗೌಡ

ತನಿಖೆ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಜಿ.ಎಸ್.ಕಲಿಗೌಡ ಸಾಹಿತ್ಯ ಬರೆದಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. ಮುರಳಿ ಮಾಸ್ಟರ್ ಹುಸೇನ್ ನೃತ್ಯ ನಿರ್ದೇಶನ ಮಾಡಿದ್ದು, ಕ್ರಿಸ್ಟೋಫರ್ ಜೈಸನ್ ಸಂಗೀತ ಮನಸ್ಸಿಗೆ ಮುದ ನೀಡುವಂತಿದೆ. ಧನು ಕೃಷ್ಣ ಸಂಕಲನದ ಹೊಣೆ ಹೊತ್ತಿದ್ದಾರೆ. ಶ್ಯಾಮ್ ಸಿಂಧನೂರು ಅವರ ಕ್ಯಾಮರಾ ಮೋಡಿ ಮಾಡಿದೆ.

ಕನಸುಗಳ ಫ್ಯಾಕ್ಟರಿ
ಡಿಎಂಎಫ್(ಡೈಮೆಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ) ಎಂಬ ಆಡಿಯೋ ಸಂಸ್ಥೆ ಈ ಆಲ್ಬಂ ಸಾಂಗ್‌ನ ನಿರ್ಮಾಪಕರು.  ನಿರ್ಮಾಪಕಿ ಮಮತಾ ಶ್ರೀ  ಇದರ ಹಿಂದಿರುವ ಶಕ್ತಿ. ಹೊಸಬರಿಗೆ ವೇದಿಕೆ ಕಲ್ಪಿಸಬೇಕೆಂಬ ಇವರ ಮೊದಲ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರಯತ್ನದಲ್ಲೇ ಗೆದ್ದಿರುವ ಖುಷಿ  ತಂಡಕ್ಕಿದೆ. ತಿಂಗಳಿಗೊಂದು ಆಲ್ಬಂ ಸಾಂಗ್ ಮಾಡಬೇಕೆಂಬ ಕನಸು ಈಗ ಮತ್ತಷ್ಟು ಗಟ್ಟಿಯಾಗಿದೆ. ಹೊಸ ಸಿನಿಮಾದ ಹಾಡುಗಳ ರೈಟ್ಸ್ ಪಡೆದುಕೊಳ್ಳಲು ಡೈಮಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT